Don't Miss!
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- News ಎನ್ಕೌಂಟರ್ ಮಾಡುವುದಾಗಿ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೆರೆ ಮೇಲೆ ಬರಲಿದೆ 'ಚಿತ್ರ ಬ್ರಹ್ಮ' ಪುಟ್ಟಣ್ಣ ಜೀವನ ಚರಿತ್ರೆ
ಇಂದು (ಡಿಸೆಂಬರ್ 1) ಕನ್ನಡ ಚಿತ್ರರಂಗ ಕಂಡ ದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಜನ್ಮ ದಿನ. ವಿಶೇಷ ಅಂದ್ರೆ, ಈ ದಿನ ಪುಟ್ಟಣ್ಣ ಅವರ ಹುಟ್ಟುಹಬ್ಬದಂದು ಅವರ ಬಗ್ಗೆ ಸಿನಿಮಾ ಬರುವ ಸುದ್ದಿ ಹೊರಬಂದಿದೆ.
ಪುಟ್ಟಣ್ಣ ಕಣಗಾಲ್-ಆರತಿ ಬಗ್ಗೆ ಅಂಬರೀಶ್ ಬಿಚ್ಚಿಟ್ಟ ಸತ್ಯ ಸಂಗತಿ
ನಿರ್ದೇಶಕ ಪ್ರಸನ್ನ ಶೆಟ್ಟಿ ಎಂಬುವವರು ಪುಟ್ಟಣ್ಣ ಅವರ ಜೀವನ ಕುರಿತು ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಹಿಂದೆ 'ನಮ್ಮೂರ ಹೈಕ್ಳು' ಎಂಬ ಸಿನಿಮಾವನ್ನು ಪ್ರಸನ್ನ ಶೆಟ್ಟಿ ನಿರ್ದೇಶನ ಮಾಡಿದ್ದರು. ಆ ಚಿತ್ರದ ಬಳಿಕ ಇದೀಗ ಪುಟ್ಟಣ್ಣ ಅವರ ಜೀವನವನ್ನು ತೆರೆ ಮೇಲೆ ತೋರಿಸುವ ನಿರ್ಧಾರ ಮಾಡಿದ್ದಾರೆ.
ಈಗಾಗಲೇ ಪುಟ್ಟಣ್ಣ ಅವರ ಚಿತ್ರಕ್ಕೆ ಬೇಕಾದ ಎಲ್ಲ ತಯಾರಿ ಮಾಡಿಕೊಂಡಿರುವ ಪ್ರಸನ್ನ, ಪುಟ್ಟಣ್ಣ ಕಣಗಾಲ್ ಅವರ ಪತ್ನಿ ಮತ್ತು ಕುಟುಂಬದೊಂದಿಗೆ ಈ ಬಗ್ಗೆ ಚರ್ಚೆ ಮಾಡಿದ್ದಾರಂತೆ.
ಈ ಸಿನಿಮಾಗೆ 'ಚಿತ್ರ ಬ್ರಹ್ಮ' ಎಂಬ ಹೆಸರನ್ನು ಇಟ್ಟಿದ್ದು, ಪುಟ್ಟಣ್ಣ ಅವರ ಬಗ್ಗೆ ಸಾಕಷ್ಟು ಕುತೂಹಲಕಾರಿ ವಿಷಯಗಳನ್ನು ಸಂಗ್ರಹಿಸಿದ್ದಾರಂತೆ. ಇಂಟ್ರೆಸ್ಟಿಂಗ್ ಅಂದರೆ ಈ ಚಿತ್ರದಲ್ಲಿ ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಕಲ್ಪನಾ, ಆರತಿ ಅವರ ಪಾತ್ರಗಳು ಇರುತ್ತದೆಯಂತೆ. ಪುಟ್ಟಣ್ಣ ಈ ನಟ ನಟಿಯರ ಜೊತೆ ಸಿನಿಮಾ ಮಾಡಿದ್ದು, ಅವರ ಜೀವನ ಚರಿತ್ರೆಯ ಚಿತ್ರಕ್ಕೆ ಈ ಪಾತ್ರಗಳು ತುಂಬ ಪ್ರಾಮುಖ್ಯವಾಗಿದೆ ಎನ್ನುವುದು ನಿರ್ದೇಶಕರ ಅಭಿಪ್ರಾಯ. ಅಂದಹಾಗೆ, ಈ ಪಾತ್ರಗಳಿಗಾಗಿ ಈಗಾಗಲೇ ಕೆಲ ನಟರನ್ನು ಸಂಪರ್ಕ ಮಾಡಲಾಗಿದ್ದು, ಆದಷ್ಟು ಬೇಗ ಚಿತ್ರ ಶುರುವಾಗಲಿದೆಯಂತೆ.