Don't Miss!
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಲಿವುಡ್ ಡ್ರಗ್ಸ್ ಕಿಂಗ್ಪಿನ್ ಜೊತೆ ಸ್ಯಾಂಡಲ್ವುಡ್ಗೆ ನಂಟು! ಪ್ರಶಾಂತ್ ಸಂಬರ್ಗಿ ಸ್ಫೋಟಕ ಆರೋಪ
ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಹಾಗೂ ಸಿನಿಮಾ ವಿತರಕ ಪ್ರಶಾಂತ್ ಸಂಬರ್ಗಿ ಸ್ಫೋಟಕ ಮಾಹಿತಿ ನೀಡಿದ್ದಾರೆ.
Recommended Video
ಬಾಲಿವಡ್ ಡ್ರಗ್ಸ್ ಮಾಫಿಯಾದ ಕಿಂಗ್ಪಿನ್ ಇಮ್ತಿಯಾಜ್ ಖಾತ್ರಿ ಜೊತೆ ಕರ್ನಾಟಕದವರಿಗೆ ನಂಟು ಇದೆ, ಇಮ್ತಿಯಾಜ್ ಖಾತ್ರಿ ಬರ್ತಡೇ ಪಾರ್ಟಿಯಲ್ಲಿ ಸ್ಯಾಂಡಲ್ವುಡ್ನವರು ಭಾಗಿಯಾಗಿದ್ದರು. ಬೆಂಗಳೂರಿಗೆ ಇಮ್ತಿಯಾಜ್ ಖಾತ್ರಿ ಬಂದಾಗ ಯಾರ ಕಾರಿನಲ್ಲಿ ಹೋದರು, ಯಾರ ಮನೆಯಲ್ಲಿ ಉಳಿದುಕೊಂಡರು ಎಂಬುದನ್ನು ಪತ್ತೆ ಹೆಚ್ಚಿ ಎಲ್ಲ ಸತ್ಯ ಹೊರಗೆ ಬರುತ್ತೆ ಎಂದು ದೂರಿದ್ದಾರೆ. ಮುಂದೆ ಓದಿ...
ಇಮ್ತಿಯಾಜ್ ಖಾತ್ರಿ ಯಾರು?
''ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ಶ್ರುತಿ ಮೋದಿ ಅವರನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಅವರ ಪರ ವಕೀಲರು ಪ್ರೆಸ್ಮೀಟ್ ಮಾಡಿದ್ದರು. ಆ ಸಮಯದಲ್ಲಿ ಡ್ರಗ್ಸ್ ಆರೋಪಕ್ಕೆ ಸಂಬಂಧಪಟ್ಟಂತೆ ಇಮ್ತಿಯಾಜ್ ಖಾತ್ರಿ ಅವರ ಹೆಸರು ಪ್ರಸ್ತಾಪವಾಗಿದೆ. ಇಮ್ತಿಯಾಜ್ ಖಾತ್ರಿ ಯಾರು ಎನ್ನುವುದು ಸೂಕ್ಷ್ಮವಾಗಿ ತಿಳಿಯಿರಿ'' ಎಂದು ಮಾಹಿತಿ ನೀಡಿದ್ದಾರೆ.
ಐಪ್ಯಾಡ್ -ಹಾರ್ಡ್ಡಿಸ್ಕ್ ತಗೊಂಡು ಸಿಸಿಬಿ ಕಚೇರಿಗೆ ಬಂದ ಇಂದ್ರಜಿತ್ ಲಂಕೇಶ್
ಇಮ್ತಿಯಾಜ್ ಖಾತ್ರಿ-ಸಲ್ಮಾನ್ ಖಾನ್ ಗೆ ಏನು ಸಂಬಂಧ?
ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಕೇಳಿಬರುವ ಇಮ್ತಿಯಾಜ್ ಖಾತ್ರಿಗೂ ಬಾಲಿವುಡ್ ನಟ ಸಲ್ಮಾನ್ ಖಾನ್ ಗೂ ಏನು ಸಂಬಂಧ ಹಾಗೂ ಸುಷ್ಮಿತಾ ಸೇನ್ ಹಾಗೂ ಇಮ್ತಿಯಾಜ್ ಖಾತ್ರಿಗೂ ಏನು ನಂಟು ಎಂಬುದನ್ನು ಗಮನಿಸಿದರೆ ಸ್ಪಷ್ಟ ಉತ್ತರ ಸಿಗಬಹುದು ಎಂದು ಪ್ರಶಾಂತ್ ಸಂಬರ್ಗಿ ಕೆಲವು ವಿಚಾರಗಳನ್ನು ಬಿಟ್ಟಿದ್ದಾರೆ.
ಮುಂಬೈ ಪಾರ್ಟಿಗೆ ಕರ್ನಾಟಕದಿಂದ ಯಾರೆಲ್ಲ ಹೋಗಿದ್ದರು
2017ರಲ್ಲಿ ಮುಂಬೈನಲ್ಲಿ ಇಮ್ತಿಯಾಜ್ ಖಾತ್ರಿ ಅವರ ಬರ್ತಡೇ ಪಾರ್ಟಿ ಆಗುತ್ತೆ. ಈ ಪಾರ್ಟಿಗೆ ಕರ್ನಾಟಕದಿಂದ ಯಾರೆಲ್ಲ ಹೋಗಿದ್ದರು ಎನ್ನುವುದನ್ನು ಪೊಲೀಸರು ವಿಚಾರಣೆ ನಡೆಸಿ ಎಂದು ಪ್ರಶಾಂತ್ ಸಂಬರ್ಗಿ ಆರೋಪಿಸಿದ್ದಾರೆ. ಈ ಬಗ್ಗೆ ಫಿಲಂ ಚೇಂಬರ್ ಸಹ ಒಬ್ಬೊಬ್ಬರನ್ನೆ ಕರೆಸಿ ನೀವು ಹೋಗಿದ್ರಾ? ನೀವು ಹೋಗಿದ್ರಾ ಎಂದು ಕೇಳಲಿ ಎಂದು ತಿರಗೇಟು ನೀಡಿದ್ದಾರೆ.
ಬಾಲಿವುಡ್-ಸ್ಯಾಂಡಲ್ವುಡ್ಗೂ ನಂಟಿದೆ
ಜೆಡಿಎಸ್ ಮುಖಂಡ, ಕಾಂಗ್ರೆಸ್ ಗೆ ಹೋಗಿ ಗೆದ್ದು ಅವರ 50ನೇ ಹುಟ್ಟುಹಬ್ಬಕ್ಕೆ ಬಾಲಿವುಡ್ ಚಿತ್ರರಂಗದವರು ಬೆಂಗಳೂರಿಗೆ ಕರೆಸಿಕೊಳ್ಳುತ್ತಾರೆ. ಈ ವೇಳೆ ಇಮ್ತಿಯಾಜ್ ಖಾತ್ರಿ ಸಹ ಇದ್ದರು. ಇಮ್ತಿಯಾಜ್ ಖಾತ್ರಿ ಬೆಂಗಳೂರಿಗೆ ಬಂದಾಗ ಯಾರು ಕಾರು ಬಳಸಿದರು, ಯಾರ ಮನೆಯಲ್ಲಿ ಇದ್ದರು ಎನ್ನುವುದು ತನಿಖೆ ಆಗಲಿ, ಇದರಿಂದ ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್ ಗೂ ಇರುವ ನಂಟನ್ನು ಅವರೇ ಹೇಳ್ತಾರೆ'' ಎಂದು ಪ್ರಶಾಂತ್ ಸಂಬರ್ಗಿ ಆರೋಪಿಸಿದ್ದಾರೆ.