Don't Miss!
- News Heavy Rain Alert: ಮುಂದಿನ ನಾಲ್ಕು ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ವ್ಯಾಪಕ ಮಳೆ
- Sports KKR vs RR IPL 2024: ಜೋಸ್ ದಿ ಬಾಸ್ ಬಟ್ಲರ್ ಆರ್ಭಟಕ್ಕೆ ಕೆಕೆಆರ್ ಹೈರಾಣ; ರಾಯಲ್ ಆಗಿ ಗೆದ್ದ ರಾಜಸ್ಥಾನ
- Lifestyle ಬೇಸಿಗೆಯಲ್ಲಿ ಇಡ್ಲಿ, ದೋಸೆಯ ಹಿಟ್ಟು ಹುಳಿ ಬಂದರೆ ಹುಳಿ ಕಡಿಮೆಯಾಗಲು ಏನು ಮಾಡಬೇಕು?
- Automobiles ಪೆಟ್ರೋಲ್ ಎಂಜಿನ್ಗಳಲ್ಲಿ ಮಾತ್ರ ಬರಲಿದೆ ರೆನಾಲ್ಟ್ನ ಬ್ರಹ್ಮಾಸ್ತ್ರ ಡಸ್ಟರ್
- Finance ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ಷೇರು ಪೇಟೆಯಲ್ಲಿ ಭಾರಿ ನಷ್ಟ
- Technology YouTube: ಯೂಟ್ಯೂಬ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! ಆಡ್ ಬ್ಲಾಕರ್ ವಿರುದ್ಧ ಸಮರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಂಚನೆ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ 'ಲವ್ ಗುರು' ನಿರ್ದೇಶಕ
'ಲವ್ ಗುರು' ಸೇರಿದಂತೆ ಕನ್ನಡದಲ್ಲಿ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಪ್ರಶಾಂತ್ ರಾಜ್ ಮೇಲೆ ಆರೋಪವೊಂದು ಕೇಳಿ ಬಂದಿತ್ತು. ವೃದ್ಧೆಯೊಬ್ಬರ ಬಳಿ ಹಣ ವಂಚನೆ ಮಾಡಿದ್ದಾರೆ ಎನ್ನುವ ಸುದ್ದಿ ಬಂದಿತ್ತು. ಹೀಗಾಗಿ, ಘಟನೆಯ ಬಗ್ಗೆ ಪ್ರಶಾಂತ್ ರಾಜ್ ಸ್ಪಷ್ಟನೆ ನೀಡಿದ್ದಾರೆ.
ವಿಡಿಯೋ ಮೂಲಕ ಘಟನೆ ಬಗ್ಗೆ ಮಾತನಾಡಿದ್ದು, ನನ್ನ ತಪ್ಪಿಲ್ಲ ಎಂದು ಹೇಳಿದ್ದಾರೆ. ಈ ಆರೋಪದಲ್ಲಿ ಕೇಳಿ ಬಂದಿರುವ ವೃದ್ಧೆ ಗಿರಿಜಮ್ಮ ನನ್ನ ಅತ್ತೆ, ಅವರ ಬಳಿ ನಾನು ಹಣ ಪಡೆದಿಲ್ಲ. ಅವರ ಮಗನ ವಿರುದ್ಧ ವಂಚನೆ ಪ್ರಕರಣ ಇದ್ದು, ಅದರ ದಾಖಲೆ ನನ್ನ ಬಳಿ ಇದೆ ಎಂದಿದ್ದಾರೆ.
20 ಲಕ್ಷ ಹಣ ನೀಡಿದ್ದಾರೆ ಎನ್ನುವ ಸುದ್ದಿ ಸುಳ್ಳು. ನಾನು ಅವರ ಬಳಿ ಬ್ಯಾಗ್ ಪಡೆದಿದ್ದೆ ಹೌದು. ಆದರೆ, ಹಣ ಪಡೆದಿಲ್ಲ. ಇದಕ್ಕೆ ಸಿಸಿ ಟಿವಿಯ ಸಾಕ್ಷಿ ಇದೆ. ನಾನು ಅವರಿಗೆ ಆ ಬ್ಯಾಗ್ ಮರಳಿ ನೀಡಿದ್ದೇನೆ ಎಂದಿದ್ದಾರೆ. ಸದ್ಯ, ತಾವು ತಮ್ಮ ಹೊಸ ಸಿನಿಮಾದ ತಯಾರಿಯಲ್ಲಿ ಇದ್ದು, ಆ ಚಿತ್ರಕ್ಕಾಗಿ ಲೋಕೇಶನ್ ಹುಡುಕಾಟ ನಡೆಸುತ್ತಿದ್ದೇನೆ. ವಾಪಸ್ ಬಂದ ಬಳಿಕ ಮತ್ತೆ ಈ ಬಗ್ಗೆ ವಿವರ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಮತ್ತೆ 'ಲವ್ ಗುರು' ಜೊತೆ ಬರ್ತಾರಂತೆ ಪ್ರಶಾಂತ್.!
ಪ್ರಶಾಂತ್ ರಾಜ್ ವೃದ್ಧೆ ಗಿರಿಜಮ್ಮ ಬಳಿ 20 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದು, 10 ಲಕ್ಷ ಹಣ ಪಡೆದಿದ್ದಾರೆ ಎನ್ನುವ ಆರೋಪ ಮಾಡಲಾಗಿದೆ. ಇದೇ ಪ್ರಕರಣದಲ್ಲಿ ಪ್ರಶಾಂತ್ ರಾಜ್ ಜೊತೆಗೆ ನಿರ್ಮಾಪಕ ನವೀನ್ ರಾಜ್ ಹೆಸರು ಸೇರಿಕೊಂಡಿದೆ.
ಪ್ರಶಾಂತ್ ರಾಜ್ 'ಲವ್ ಗುರು', 'ಗಾನಬಜಾನ', 'ವಿಜಲ್' 'ಜೂಮ್' 'ಆರೆಂಜ್' ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.