twitter
    For Quick Alerts
    ALLOW NOTIFICATIONS  
    For Daily Alerts

    ವಂಚನೆ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ 'ಲವ್ ಗುರು' ನಿರ್ದೇಶಕ

    |

    'ಲವ್ ಗುರು' ಸೇರಿದಂತೆ ಕನ್ನಡದಲ್ಲಿ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಪ್ರಶಾಂತ್ ರಾಜ್ ಮೇಲೆ ಆರೋಪವೊಂದು ಕೇಳಿ ಬಂದಿತ್ತು. ವೃದ್ಧೆಯೊಬ್ಬರ ಬಳಿ ಹಣ ವಂಚನೆ ಮಾಡಿದ್ದಾರೆ ಎನ್ನುವ ಸುದ್ದಿ ಬಂದಿತ್ತು. ಹೀಗಾಗಿ, ಘಟನೆಯ ಬಗ್ಗೆ ಪ್ರಶಾಂತ್ ರಾಜ್ ಸ್ಪಷ್ಟನೆ ನೀಡಿದ್ದಾರೆ.

    ವಿಡಿಯೋ ಮೂಲಕ ಘಟನೆ ಬಗ್ಗೆ ಮಾತನಾಡಿದ್ದು, ನನ್ನ ತಪ್ಪಿಲ್ಲ ಎಂದು ಹೇಳಿದ್ದಾರೆ. ಈ ಆರೋಪದಲ್ಲಿ ಕೇಳಿ ಬಂದಿರುವ ವೃದ್ಧೆ ಗಿರಿಜಮ್ಮ ನನ್ನ ಅತ್ತೆ, ಅವರ ಬಳಿ ನಾನು ಹಣ ಪಡೆದಿಲ್ಲ. ಅವರ ಮಗನ ವಿರುದ್ಧ ವಂಚನೆ ಪ್ರಕರಣ ಇದ್ದು, ಅದರ ದಾಖಲೆ ನನ್ನ ಬಳಿ ಇದೆ ಎಂದಿದ್ದಾರೆ.

    Prashanth Raj Gave Clarification About Cheating Case

    20 ಲಕ್ಷ ಹಣ ನೀಡಿದ್ದಾರೆ ಎನ್ನುವ ಸುದ್ದಿ ಸುಳ್ಳು. ನಾನು ಅವರ ಬಳಿ ಬ್ಯಾಗ್ ಪಡೆದಿದ್ದೆ ಹೌದು. ಆದರೆ, ಹಣ ಪಡೆದಿಲ್ಲ. ಇದಕ್ಕೆ ಸಿಸಿ ಟಿವಿಯ ಸಾಕ್ಷಿ ಇದೆ. ನಾನು ಅವರಿಗೆ ಆ ಬ್ಯಾಗ್ ಮರಳಿ ನೀಡಿದ್ದೇನೆ ಎಂದಿದ್ದಾರೆ. ಸದ್ಯ, ತಾವು ತಮ್ಮ ಹೊಸ ಸಿನಿಮಾದ ತಯಾರಿಯಲ್ಲಿ ಇದ್ದು, ಆ ಚಿತ್ರಕ್ಕಾಗಿ ಲೋಕೇಶನ್ ಹುಡುಕಾಟ ನಡೆಸುತ್ತಿದ್ದೇನೆ. ವಾಪಸ್ ಬಂದ ಬಳಿಕ ಮತ್ತೆ ಈ ಬಗ್ಗೆ ವಿವರ ನೀಡುತ್ತೇನೆ ಎಂದು ತಿಳಿಸಿದ್ದಾರೆ.

    ಮತ್ತೆ 'ಲವ್ ಗುರು' ಜೊತೆ ಬರ್ತಾರಂತೆ ಪ್ರಶಾಂತ್.!ಮತ್ತೆ 'ಲವ್ ಗುರು' ಜೊತೆ ಬರ್ತಾರಂತೆ ಪ್ರಶಾಂತ್.!

    ಪ್ರಶಾಂತ್ ರಾಜ್ ವೃದ್ಧೆ ಗಿರಿಜಮ್ಮ ಬಳಿ 20 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದು, 10 ಲಕ್ಷ ಹಣ ಪಡೆದಿದ್ದಾರೆ ಎನ್ನುವ ಆರೋಪ ಮಾಡಲಾಗಿದೆ. ಇದೇ ಪ್ರಕರಣದಲ್ಲಿ ಪ್ರಶಾಂತ್ ರಾಜ್ ಜೊತೆಗೆ ನಿರ್ಮಾಪಕ ನವೀನ್ ರಾಜ್ ಹೆಸರು ಸೇರಿಕೊಂಡಿದೆ.

    ಪ್ರಶಾಂತ್ ರಾಜ್ 'ಲವ್ ಗುರು', 'ಗಾನಬಜಾನ', 'ವಿಜಲ್' 'ಜೂಮ್' 'ಆರೆಂಜ್' ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

    English summary
    Director Prashanth Raj gave clarification about cheating case.
    Sunday, December 15, 2019, 18:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X