Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಟ್ಟಿ ಪ್ರಚಾರಕ್ಕಾಗಿ ನಡಿತಾ ಪ್ರಥಮ್-ಭುವನ್ 'ತೊಡೆ ಕಾದಾಟ'?
'ಬಿಗ್ ಬಾಸ್' ಖ್ಯಾತಿಯ ಪ್ರಥಮ್ ಮತ್ತು ಭುವನ್ ನಡುವೆ ದೊಡ್ಡ ಗಲಾಟೆ ನಡೆದಿದೆ. ಪ್ರಥಮ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಭುವನ್ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬಿಗ್ ಬಾಸ್ ಪ್ರಥಮ್ ಮತ್ತು ಭುವನ್ ನಡುವೆ ಗಲಾಟೆ..!
ಶನಿವಾರ ಮಧ್ಯಾಹ್ನ 'ಸಂಜು ಮತ್ತು ನಾನು' ಧಾರಾವಾಹಿಯ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. ಪ್ರಥಮ್ ತಮ್ಮ ಸಹನಟಿ ಸಂಜನಾ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದು, ಭುವನ್ ಮತ್ತು ಪ್ರಥಮ್ ನಡುವಿನ ಕಿತ್ತಾಟಕ್ಕೆ ಕಾರಣ ಅಂತ ಹೇಳಲಾಗಿದೆ. ಈ ಗಲಾಟೆಯಲ್ಲಿ ತನ್ನ ತೋಡೆಯನ್ನು ಪ್ರಥಮ್ ಕಚ್ಚಿದ್ದಾರೆ ಎಂದು ಭುವನ್ ಆರೋಪಿಸಿದ್ದಾರೆ.
ಭುವನ್ ಮೇಲೆ ಪ್ರಥಮ್ ಹಲ್ಲೆ: ದೂರು ದಾಖಲು
ಆದರೆ ಈಗ ಪ್ರಥಮ್ ಇಡೀ ಘಟನೆಯ ಬಗ್ಗೆ ತಮ್ಮ ಸ್ಪಷ್ಟನೆಯನ್ನು ನೀಡಿದ್ದಾರೆ. ಘಟನೆಯ ಬಗ್ಗೆ ಪ್ರಥಮ್ ಹೇಳಿಕೆ ಮುಂದಿದೆ ಓದಿ..
ನಾನು ಸಸ್ಯಹಾರಿ
''ಭುವನ್ ಏನಪ್ಪ ನಿನ್ನ ಪ್ರಾಬ್ಲಮ್? ಒಳ್ಳೆ ಬುದ್ಧಿ ಕಲಿಯಪ್ಪ...ನಾನು ಸಂಪೂರ್ಣ ಸಸ್ಯಹಾರಿ. ನಿನ್ನ ಮಾಂಸದ ಮೇಲೆ ಆಸೆ ಇಲ್ಲಪ್ಪ.'' - ಪ್ರಥಮ್
ನಾನು ದೂರು ನೀಡುತ್ತೇನೆ
''ನೀನು ರೂಮ್ ನಲ್ಲಿ ಸೇರಿಕೊಂಡು ಏನೇನೋ ಮಾಡ್ಕೊಂಡು ನನ್ನ ಮೇಲೆ ಎಗರಾಡಬೇಡಪ್ಪ. ಮೊದಲು ಕೈ ಮಾಡಿದ್ದು ನೀನು. ನಾನು ಪೊಲೀಸ್ ಕಂಪ್ಲೆಂಟ್ ಕೊಡಲಿದ್ದೇನೆ. ಶುಭವಾಗಲಿ ನಿನ್ನ ಫ್ಯೂಚರ್ ಜರ್ನಿಗೆ'' - ಪ್ರಥಮ್
ಪ್ರಚಾರದ ಹುಚ್ಚು
''ಭುವನ್ ಅವರಿಗೆ ಪ್ರಚಾರದ ಹುಚ್ಚು. ಆದರೆ ಒಂದು ಸುಳ್ಳು ಆರೋಪ ಮಾಡುವುದರಿಂದ ಏನು ಆಗಲ್ಲ. ಅದರಿಂದ ಎರಡು ದಿನ ಸುದ್ದಿ ಆಗಬಹುದು ಅಷ್ಟೆ.'' - ಪ್ರಥಮ್
ಎಲ್ಲಿ ಕಚ್ಚಿಸಿಕೊಂಡೆಯೋ
''ನೀನು ಯಾವ ನಾಯಿ ಹತ್ತಿರ ಕಚ್ಚಿಸಿಕೊಂಡೆಯೋ ಯಾವ ಹಾವು ಕಚ್ಚಿತೊ ನನಗೆ ಗೊತ್ತಿಲ್ಲ.'' - ಪ್ರಥಮ್
ಭುವನ್ ಆರೋಪ
''ಪ್ರಥಮ್ ಕಾರಣ ಇಲ್ಲದೆ ಸಂಜನಾ ಬಗ್ಗೆ ತುಂಬ ಕೆಟ್ಟದಾಗಿ ಮಾತನಾಡಿದ್ದ. ಆದರೂ ಸಂಜನಾ ಸುಮ್ಮನೆ ಇದ್ದರು, ಅದು ತಪ್ಪು. ಒಬ್ಬ ಹೆಣ್ಣೆಗೆ ಹೀಗೆ ಮಾತನಾಡಬೇಡಿ ಅಂತ ಹೇಳಿದೆ. ನಂತರ ಸುಮ್ಮನೆ ನನ್ನ ತೊಡೆಗೆ ಕಚ್ಚಿ ಹಲ್ಲೆ ನಡೆಸಿದ್ದರು.'' - ಭುವನ್
ಪ್ರಚಾರಕ್ಕೆ ಮಾಡಿದ್ರಾ ?
ಭುವನ್ ಇದನ್ನು ಪ್ರಚಾರಕ್ಕೆ ಮಾಡಿದ್ದಾರೆ ಅಂತ ಪ್ರಥಮ್ ಆರೋಪಿಸಿದ್ದಾರೆ. ಜೊತೆಗೆ ಬಿಟ್ಟಿ ಪ್ರಚಾರಕ್ಕೆ ಪ್ರಥಮ್ ಮತ್ತು ಭುವನ್ ಇಷ್ಟೆಲ್ಲ ಮಾಡಿದರಾ ಎಂಬ ಪ್ರಶ್ನೆ ಕೂಡ ಈಗ ಸೃಷ್ಟಿ ಆಗಿದೆ.