Don't Miss!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- News Petrol Price: ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವಿವರ ತಿಳಿಯಿರಿ
- Finance ಎಂಡಿಎಚ್ ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್ ಮಸಾಲೆಗಳ ಮಾದರಿಗಳ ಪರೀಕ್ಷೆಗೆ ಮುಂದಾದ FSSAI
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹುಚ್ಚ ವೆಂಕಟ್ ವಿಚಾರದಲ್ಲಿ ಪ್ರಥಮ್ ನೀಡಿದ ಸಲಹೆ ಬಗ್ಗೆ ಒಮ್ಮೆ ಗಮನ ಕೊಡಿ
Recommended Video
ಮಡಿಕೇರಿಯಲ್ಲಿ ಕಾರಿನ ಗಾಜು ಒಡೆದು ಹಾಕಿ ದರ್ಪ ತೋರಿದ್ದ ನಟ-ನಿರ್ದೇಶಕ ವೆಂಕಟ್ ಅವರನ್ನ ಅಲ್ಲಿನ ಸಾರ್ವಜನಿಕರು ಥಳಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯಾವುದು ಸರಿ ಯಾವುದು ತಪ್ಪು ಎಂದು ಚರ್ಚೆಯಾಗುತ್ತಿದೆ.
ಮತ್ತೊಂದೆಡೆ ವೆಂಕಟ್ ಅವರನ್ನ ಹೇಗೆ ಸರಿಪಡಿಸುವುದು, ಅವರ ಸಾರ್ವಜನಿಕ ವರ್ತನೆ ಸರಿಯಿಲ್ಲ, ಮಾನಸಿಕವಾಗಿ ಅವರಿಗೆ ಚಿಕಿತ್ಸೆ ಬೇಕಾಗಿದೆ, ಅವರಿಗೆ ಸಹಾಯ ಬೇಕಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
'ಹುಚ್ಚ ವೆಂಕಟ್-ಪ್ರಥಮ್' ಸ್ನೇಹ ನೋಡಿದ್ರೆ ನೀವು ಶಾಕ್ ಆಗ್ತೀರಾ!
ವೆಂಕಟ್ ಅವರನ್ನ ಬಹಳ ಹತ್ತಿರದಿಂದ ಬಲ್ಲ ನಟ-ನಿರ್ದೇಶಕ ಪ್ರಥಮ್ ತಮ್ಮದೇ ದೃಷ್ಟಿಕೋನದಲ್ಲಿ ಒಂದು ಸಲಹೆ ನೀಡಿದ್ದಾರೆ. ಗಂಭೀರವಾಗಿ ಯೋಚನೆ ಮಾಡಿದ್ರೆ ಪ್ರಥಮ್ ಹೇಳುವುದರಲ್ಲಿ ಅರ್ಥವಿದೆ ಎನಿಸುತ್ತಿದೆ. ಅಷ್ಟಕ್ಕೂ, ಪ್ರಥಮ್ ಹೇಳಿದ್ದೇನು? ಮುಂದೆ ಓದಿ....
'ಹುಚ್ಚ' ವೆಂಕಟ್ ಎನ್ನುವುದು ಬಿಡಿ
''ಹುಚ್ಚ ವೆಂಕಟ್ ಎಂದು ಅವರನ್ನ ಪ್ರಚೋದಿಸುವ ಬದಲು ವೆಂಕಟ್ ಆಗಿ ಅವರನ್ನ ಬಿಟ್ಟು ಬಿಡುವುದು ನಾವೆಲ್ಲಾ ಅವರಿಗೆ ಮಾಡುವ ದೊಡ್ಡ ಸಹಾಯ. ವೆಂಕಟ್ ಬಗ್ಗೆ ಅನುಕಂಪ ತೋರಿಸುವ ಬದಲು, ಅವಮಾನ ಮಾಡದೆ ಅವರಷ್ಟಕ್ಕೆ ಬಿಡೋಣ'' ಎಂದು ಪ್ರಥಮ್ ಸಲಹೆ ನೀಡಿದ್ದಾರೆ.
ಮಡಿಕೇರಿ ಬೀದಿಯಲ್ಲಿ ಕಾರಿನ ಗ್ಲಾಸ್ ಒಡೆದು 'ಹುಚ್ಚಾಟ' ಮಾಡಿದ ವೆಂಕಟ್
ಹೌದು, ಈ 'ಹುಚ್ಚ' ಹೇಗೆ ಬಂತು?
ವೆಂಕಟರಮಣ ಲಕ್ಷ್ಮಣ್ ಪೂರ್ತಿ ಹೆಸರು. ಆದರೆ ಈ ಹುಚ್ಚ ವೆಂಕಟ್ ಯಾವಾಗ ಬದಲಾದ್ರು ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಹುಚ್ಚ ವೆಂಕಟ್ ಎಂದು ಸಿನಿಮಾ ಮಾಡಿದ್ರು. ಆ ಚಿತ್ರ ಬರುವುದಕ್ಕೆ ಮುಂಚೆಯೇ ತಮ್ಮ ಹೆಸರನ್ನ ಹುಚ್ಚ ವೆಂಕಟ್ ಎಂದು ಬಿಂಬಿಸಿಕೊಂಡಿದ್ದರು. ಹಾಗಾಗಿ, ಈ 'ಹುಚ್ಚ' ಎಂಬುದು ಯಾಕೆ ಸೇರಿಕೊಂಡಿತು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಹುಚ್ಚ, ತಿಕ್ಲಾ, ಪೊರ್ಕಿ ಯಾಕೆ?
ಹುಚ್ಚ ವೆಂಕಟ್ ಸಿನಿಮಾ ಮಾಡಿದ್ದರು. ಪೊರ್ಕಿ ಹುಚ್ಚ ವೆಂಕಟ್ ಮಾಡಿದ್ರು. ಆಮೇಲೆ ತಿಕ್ಲಾ ಹುಚ್ಚ ವೆಂಕಟ್ ಸಿನಿಮಾ ಮಾಡುವುದಾಗಿ ಘೋಷಿಸಿಕೊಂಡರು. ಈಗ ದುರಹಂಕಾರಿ ಹುಚ್ಚ ವೆಂಕಟ್ ಚಿತ್ರನೂ ಮಾಡ್ತೀನಿ ಎಂದಿದ್ದರು. ಹೀಗೆ, ಹುಚ್ಚ, ತಿಕ್ಲಾ, ಪೊರ್ಕಿ, ದುರಹಂಕಾರಿ ಎಂಬ ಪದಗಳ ಮೇಲೆ ಇವರಿಗೆ ವ್ಯಾಮೋಹ ಯಾಕೆ?
ಕಾಲಲ್ಲಿ ಚಪ್ಪಲಿ ಇಲ್ಲ, ಕೊಳಕು ಬಟ್ಟೆ, ಚೆನ್ನೈನಲ್ಲಿ ಹುಚ್ಚ ವೆಂಕಟ್ ಅಲೆದಾಟ
ಚಿಕಿತ್ಸೆನಾ, ಪ್ರಚಾರನಾ?
ಒಮ್ಮೊಮ್ಮೆ ವೆಂಕಟ್ ಅವರನ್ನ ನೋಡಿದ್ರೆ ಅವರಿಗೆ ಚಿಕಿತ್ಸೆ ಬೇಕಾಗಿದೆ ಎನಿಸಿದರೂ, ಬಹುಶಃ ಇದೆಲ್ಲವನ್ನ ಪ್ರಚಾರಕ್ಕಾಗಿ ಮಾಡುತ್ತಿರುವುದು ಎಂಬ ಅನುಮಾನವೂ ಕಾಡದೆ ಇರಲ್ಲ. ಯಾಕಂದ್ರೆ, ಈ ಹಿಂದೆ ಪ್ರಚಾರಕ್ಕಾಗಿ ಹುಚ್ಚ ವೆಂಕಟ್ ಅನೇಕ ರೀತಿ ಗಿಮಿಕ್ ಮಾಡಿರುವ ಉದಾಹರಣೆಗಳಿವೆ.