Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರಥಮ್ ಪ್ರಶ್ನೆಗೆ ಉಪೇಂದ್ರ ಕೊಟ್ಟರು ಆತ್ಮವಿಶ್ವಾಸದ ಉತ್ತರ
Recommended Video
ನಟ ಉಪೇಂದ್ರ ತಮ್ಮ ಸಿನಿಮಾಗಳನ್ನು ಸೈಡ್ ಗೆ ಇಟ್ಟು ಕೆಪಿಜೆಪಿ (ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ) ಶುರು ಮಾಡಿದ್ದರು. ಉಪೇಂದ್ರ ಏನಾದರೂ ಬದಲಾವಣೆ ಮಾಡಬಹುದು ಎನ್ನುವ ನಂಬಿಕೆ ಜನರಲ್ಲಿ ಮೂಡುವಾಗಲೇ ಆ ಪಕ್ಷದಿಂದ ಅವರು ಆಚೆ ಬಂದರು.
ಕೆಪಿಜೆಪಿ ಪಕ್ಷದಿಂದ ಹೊರಬಂದ ಬಳಿಕ ಉಪೇಂದ್ರ 'ಉತ್ತಮ ಪ್ರಜಾಕೀಯ ಪಕ್ಷ' ಕಟ್ಟಿದರು. ಆದರೆ ಕೆಪಿಜೆಪಿ ಬಿಟ್ಟು ಬಂದಿದ್ದು ಉಪೇಂದ್ರ ಅವರ ಸೋಲು ಎಂದು ಅನೇಕರಿಗೆ ಅನಿಸಿತು. ಆದರೆ ಉಪ್ಪಿ ಮಾತ್ರ ಇಂದಿಗೂ ಅದೇ ಆತ್ಮವಿಶ್ವಾಸದಲ್ಲಿ ಇದ್ದಾರೆ. 'ಬಿಗ್ ಬಾಸ್' ಖ್ಯಾತಿಯ ಪ್ರಥಮ್ ಹಂಚಿಕೊಂಡಿರುವ ಈ ಘಟನೆ ಮೂಲಕ ಅದು ತಿಳಿಯುತ್ತದೆ.
'ಉತ್ತಮ ಪ್ರಜಾಕೀಯ ಪಕ್ಷ' ನೋಂದಣಿ ಮಾಡಿಸಿದ ಉಪೇಂದ್ರ
ಪ್ರಥಮ್ ಇತ್ತೀಚಿಗಷ್ಟೆ ಉಪೇಂದ್ರ ಅವರನ್ನು ಭೇಟಿ ಮಾಡಿದ್ದ ಒಂದು ಘಟನೆಯನ್ನು ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...
ಪ್ರಥಮ್ ಪ್ರಶ್ನೆ
ಇತ್ತೀಚಿಗೆ ನಟ ಉಪೇಂದ್ರ ರನ್ನು ಭೇಟಿ ಮಾಡಿದ್ದ ಪ್ರಥಮ್ "ಸಾರ್ ನೀವೇನಾದರೂ ಬದಲಾವಣೆ ತರ್ತೀರಾ ಅಂತ ನಿರೀಕ್ಷೆ ಇತ್ತು. ನೀವೇ ನಿಮ್ಮ ಪಕ್ಷದಿಂದ ಹೊರಗೆ ಬಂದು ಬಿಟ್ರಲ್ಲಾ?'' ಅಂತ ಒಂದು ಪ್ರಶ್ನೆ ಕೇಳಿದ್ದಾರೆ. ಪ್ರಥಮ್ ಪ್ರಶ್ನೆಗೆ ಉಪ್ಪಿ ಈ ರೀತಿ ಉತ್ತರಿಸಿದ್ದಾರೆ.
ಎಂ ಎಲ್ ಎ / ಎಂ ಪಿ ಆಗೋದು ದೊಡ್ಡ ವಿಷಯನಾ?
''ನನಗಿರೋ ಅರ್ಹತೆಗೆ, ಜನಪ್ರಿಯತೆಗೆ ಅಥವಾ ನಾನೇ ಹೊಂದಾಣಿಕೆ ರಾಜಕಾರಣ ಮಾಡೋ ಹಾಗಿದ್ರೆ ಎಂ ಎಲ್ ಎ ಅಥವಾ ಎಂ ಪಿ ಆಗೋದು ದೊಡ್ಡ ವಿಷಯನಾ?. ನೋಡಿ ನನ್ನ ಅಮೂಲ್ಯ ಒಂದು ವರ್ಷ ಯಾವ ಸಿನಿಮಾ ಮಾಡದೇ ಸಮಾಜಕ್ಕೆ ಏನಾದ್ರೂ ಬದಲಾವಣೆ ಮಾಡ್ಲೇಬೇಕು ಅಂತ ದೃಢವಾಗಿ ನಿಂತಾಗ ಇಂತಹ ಮಾತುಗಳು ಬಂದು ಬಿಟ್ಟರೆ ಬೇಜಾರಾಗುತ್ತೆ'' - ಉಪೇಂದ್ರ, ನಟ, ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ
ನೂತನ ಮುಖ್ಯಮಂತ್ರಿ ಕುಮಾರಣ್ಣ ಬಗ್ಗೆ ಉಪೇಂದ್ರ ಟ್ವೀಟ್
ತಪ್ಪಾಗಿ ಅರ್ಥೈಸಿದ್ರೆ ನೋವಾಗುತ್ತೆ
''ಏನಾದ್ರೂ ಹುಟ್ಟಿದ ನಾಡಿಗೆ ಬದಲಾವಣೆ ತರೋಣ ಅನ್ನೋ ಪ್ರಯತ್ನ ಮಾಡಿದ್ದಕ್ಕೆ ಸ್ವಲ್ಪ ಹಿನ್ನಡೆಯಾಗಿದೆ ನಿಜ. ನಾನು ರಾಜಕೀಯ ಮಾಡೋಕೆ ಬಂದಿಲ್ಲ, ಪ್ರಜೆಗಳೇ ಆಳಲಿ, ಅನ್ನೋ ಸಿದ್ಧಾಂತ ಬಿಡುವ ಮಾತೇ ಇಲ್ಲ, ನನಗೋಸ್ಕರ ಏನೂ ಬೇಡ. ಆದ್ರೆ ಒಳ್ಳೆಯ ಪ್ರಯತ್ನಗಳನ್ನ ಜನ ಸರಿಯಾಗಿ ಅರ್ಥ ಮಾಡಿಕೊಳ್ಳದೇ ತಪ್ಪಾಗಿ ಅರ್ಥೈಸಿದ್ರೆ ನೋವಾಗುತ್ತೆ.'' - ಉಪೇಂದ್ರ, ನಟ, ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ.
ಜನ ಕೈ ಹಿಡಿಯಬೇಕು
''ನೆನಪಿಡಿ ನಾನು ಎಂ ಎಲ್ ಎ ಅಥವಾ ಮಿನಿಸ್ಟರ್ ಆಗಬೇಕು ಅಂದಿದ್ರೆ ಇಷ್ಟೊತ್ತಿಗೆ ಹೊಂದಾಣಿಕೆ ಮಾಡಿಕೊಂಡು ಆಗಿರ್ತಿದ್ದೆ. 70 ವರ್ಷದಿಂದ ಇರುವ ವ್ಯವಸ್ಥೆಯನ್ನು ಸಂಪೂರ್ಣ ಬದಲಾವಣೆ ಮಾಡೋಕೆ ನನ್ನೊಬ್ಬನಿಂದ ಸಾಧ್ಯವಿಲ್ಲ. ಜನ ಕೈ ಹಿಡಿಯಬೇಕು. ಇದಕ್ಕೆ ಸ್ವಲ್ಪ ಸಮಯ ಬೇಕು'' ಎಂಬ ಮಾತುಗಳನ್ನು ಆಡಿದ್ದಾರೆ.'' - ಉಪೇಂದ್ರ, ನಟ, ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ.
ಗಿಡ ನೆಟ್ಟ ತಕ್ಷಣ ಫಲ ಬರಲ್ಲ
ಉಪೇಂದ್ರ ಅವರ ಮಾತು ಕೇಳಿ ಸಂತಸಕೊಂಡಿರುವ ಪ್ರಥಮ್ ''ಉಪ್ಪಿ ಈಗಲೂ confident ಆಗಿದ್ದಾರೆ, ಅವರಿಗೋಸ್ಕರ ಅಲ್ಲ, ನಮಗೋಸ್ಕರ ಏನಾದ್ರೂ ಮಾಡೋಕೆ. ಸ್ವಲ್ಪ ಕಾಯಬೇಕು. ಗಿಡ ನೆಟ್ಟ ತಕ್ಷಣ ಫಲ ಬರಲ್ಲ. ಸಾಧ್ಯವಾದರೆ ಎಲ್ಲರಿಗೂ ತಲುಪಿಸಿ. ಒಳ್ಳೇದು ಮಾಡೋಕೆ ಹೊರಟಿರೋ ಉಪೇಂದ್ರರ ಬಗ್ಗೆ ಗೊಂದಲ ಹೋಗಲಿ'' ಎಂದು ಹೇಳಿದ್ದಾರೆ.