Don't Miss!
- News Mysuru Zoo: ಬೇಸಿಗೆಯಲ್ಲೂ ಮೈಸೂರು ಮೃಗಾಲಯ ಕೂಲ್.. ಕೂಲ್! ಹೇಗೆ ಗೊತ್ತಾ?
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅರ್ಜುನ್ ಸರ್ಜಾ ಮಗಳ ಚಿತ್ರಕ್ಕೆ ದರ್ಶನ್ ಸಾಥ್
Recommended Video
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮಗಳು ಅಭಿನಯದ 'ಪ್ರೇಮಬರಹ' ಚಿತ್ರ ಕಂಪ್ಲೀಟ್ ಆಗಿದ್ದು, ಬಿಡುಗಡೆಗೆ ಎಲ್ಲ ಸಿದ್ದತೆ ಮಾಡಿಕೊಳ್ಳುತ್ತಿದೆ. ದೀಪಾವಳಿ ಹಬ್ಬದ ಪ್ರಯುಕ್ತ ತೆರೆಮೇಲೆ ಅಪ್ಪಳಿಸಲಿರುವ 'ಪ್ರೇಮಬರಹ'ಕ್ಕೆ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ಕೊಡ್ತಿದ್ದಾರೆ.
'ಪ್ರೇಮ ಬರಹ' ಚಿತ್ರ ಅರ್ಜುನ್ ಸರ್ಜಾ ಮಗಳು ಕನ್ನಡದಲ್ಲಿ ಅಭಿನಯಿಸುತ್ತಿರುವ ಚೊಚ್ಚಲ ಸಿನಿಮಾ. ನಟ ಚಂದನ್ ಈ ಚಿತ್ರದ ನಾಯಕ. ಈ ಚಿತ್ರವನ್ನ ಸ್ವತಃ ಅರ್ಜುನ್ ಸರ್ಜಾ ಅವರೇ ನಿರ್ಮಾಣ ಮಾಡಿ, ನಿರ್ದೇಶನ ಕೂಡ ಮಾಡಿದ್ದಾರೆ.
ಹಾಗಿದ್ರೆ, 'ಪ್ರೇಮ ಬರಹ' ಚಿತ್ರಕ್ಕೆ ದರ್ಶನ್ ಹೇಗೆ ಸಾಥ್ ಕೊಡ್ತಿದ್ದಾರೆ ಎಂಬ ಕುತೂಹಲನಾ. ಮುಂದೆ ಓದಿ.....
'ಪ್ರೇಮಬರಹ' ಹಾಡು ಬಿಡುಗಡೆಗೆ ದರ್ಶನ್ ಸಾಥ್
'ಪ್ರೇಮ ಬರಹ'ದ ಚಿತ್ರದ 'ಮನಸೇ ಮನಸೇ' ಹಾಡನ್ನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಲಿದ್ದಾರೆ.
'ಕರ್ಣ' ಅರ್ಜುನ್ ಸರ್ಜಾ ಬಗ್ಗೆ 'ದುರ್ಯೋಧನ' ದರ್ಶನ್ ಹೀಗೆ ಹೇಳಿದ್ರು!
ಇಂದು ಸಂಜೆ 5 ಗಂಟೆಗೆ
ಇಂದು ಸಂಜೆ (ಸೆಪ್ಟಂಬರ್ 18) 5 ಗಂಟೆಗೆ 'ಪ್ರೇಮ ಬರಹ' ಚಿತ್ರದ ಮೊದಲ ಹಾಡು ರಿಲೀಸ್ ಆಗಲಿದೆ. ಒಂದೇ ಸಮಯದಲ್ಲಿ ತಮಿಳು ಮತ್ತು ಕನ್ನಡದಲ್ಲಿ ಈ ಹಾಡು ಬಿಡುಗಡೆಯಾಗಲಿದೆ.
ಅರ್ಜುನ್ ಸರ್ಜಾರ 'Tunesmash' ಸ್ಪರ್ಧೆಯಲ್ಲಿ ಗೆದ್ದರೇ ಬಹುಮಾನ ಏನು?
ತಮಿಳಿನಲ್ಲಿ ಯಾರು ರಿಲೀಸ್ ಮಾಡಲಿದ್ದಾರೆ?
ಐಶ್ವರ್ಯ ಸರ್ಜಾ ಅವರ 'ಪ್ರೇಮ ಬರಹ' ತಮಿಳಿನಲ್ಲಿ 'ಸೊಲ್ಲಿವಿಡುವ' ಎಂಬ ಹೆಸರಿನಲ್ಲಿ ತೆರೆ ಕಾಣುತ್ತಿದೆ. ತಮಿಳಿನಲ್ಲಿ ಈ ಹಾಡನ್ನ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜ ಬಿಡುಗಡೆ ಮಾಡಲಿದ್ದಾರೆ.
ಸೋದರಳಿಯನ 'ಭರ್ಜರಿ' ನೋಡಿ ಅರ್ಜುನ್ ಸರ್ಜಾ ಫುಲ್ ಖುಷ್.!
'ಪ್ರೇಮ ಬರಹ' ಚಿತ್ರದ ಬಗ್ಗೆ
ಜೆಸ್ಸಿಗಿಫ್ಟ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಸಾಧು ಕೋಕಿಲಾ, ಸುಹಾಸಿನಿ, ರಂಗಾಯಣ ರಘು ಸೇರಿದಂತೆ ಹಲವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕಥೆ, ಚಿತ್ರಕಥೆ ಬರೆದು, ನಿರ್ದೇಶನ ಹಾಗೂ ನಿರ್ಮಾಣ ಕೂಡ ಅರ್ಜುನ್ ಸರ್ಜಾ ಅವರೇ ಮಾಡಿದ್ದಾರೆ.
ಈ ದೀಪಾವಳಿಗೆ ಅರ್ಜುನ್ ಸರ್ಜಾ ಮಗಳ ಕಡೆಯಿಂದ ಭರ್ಜರಿ ಗಿಫ್ಟ್ ಸಿಗುತ್ತೆ!