Don't Miss!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- News India weather: ಮಳೆಗಾಗಿ ಕಾಯುತ್ತಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ
- Finance ಅಯೋಧ್ಯೆಯಲ್ಲಿ ಓಲಾ ಕ್ಯಾಬ್ ಸೇವೆ ಆರಂಭ
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅರ್ಜುನ್ ಸರ್ಜಾ ಮಗಳ ಚಿತ್ರಕ್ಕೆ ದರ್ಶನ್ ಸಾಥ್
Recommended Video
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮಗಳು ಅಭಿನಯದ 'ಪ್ರೇಮಬರಹ' ಚಿತ್ರ ಕಂಪ್ಲೀಟ್ ಆಗಿದ್ದು, ಬಿಡುಗಡೆಗೆ ಎಲ್ಲ ಸಿದ್ದತೆ ಮಾಡಿಕೊಳ್ಳುತ್ತಿದೆ. ದೀಪಾವಳಿ ಹಬ್ಬದ ಪ್ರಯುಕ್ತ ತೆರೆಮೇಲೆ ಅಪ್ಪಳಿಸಲಿರುವ 'ಪ್ರೇಮಬರಹ'ಕ್ಕೆ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ಕೊಡ್ತಿದ್ದಾರೆ.
'ಪ್ರೇಮ ಬರಹ' ಚಿತ್ರ ಅರ್ಜುನ್ ಸರ್ಜಾ ಮಗಳು ಕನ್ನಡದಲ್ಲಿ ಅಭಿನಯಿಸುತ್ತಿರುವ ಚೊಚ್ಚಲ ಸಿನಿಮಾ. ನಟ ಚಂದನ್ ಈ ಚಿತ್ರದ ನಾಯಕ. ಈ ಚಿತ್ರವನ್ನ ಸ್ವತಃ ಅರ್ಜುನ್ ಸರ್ಜಾ ಅವರೇ ನಿರ್ಮಾಣ ಮಾಡಿ, ನಿರ್ದೇಶನ ಕೂಡ ಮಾಡಿದ್ದಾರೆ.
ಹಾಗಿದ್ರೆ, 'ಪ್ರೇಮ ಬರಹ' ಚಿತ್ರಕ್ಕೆ ದರ್ಶನ್ ಹೇಗೆ ಸಾಥ್ ಕೊಡ್ತಿದ್ದಾರೆ ಎಂಬ ಕುತೂಹಲನಾ. ಮುಂದೆ ಓದಿ.....
'ಪ್ರೇಮಬರಹ' ಹಾಡು ಬಿಡುಗಡೆಗೆ ದರ್ಶನ್ ಸಾಥ್
'ಪ್ರೇಮ ಬರಹ'ದ ಚಿತ್ರದ 'ಮನಸೇ ಮನಸೇ' ಹಾಡನ್ನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಲಿದ್ದಾರೆ.
'ಕರ್ಣ' ಅರ್ಜುನ್ ಸರ್ಜಾ ಬಗ್ಗೆ 'ದುರ್ಯೋಧನ' ದರ್ಶನ್ ಹೀಗೆ ಹೇಳಿದ್ರು!
ಇಂದು ಸಂಜೆ 5 ಗಂಟೆಗೆ
ಇಂದು ಸಂಜೆ (ಸೆಪ್ಟಂಬರ್ 18) 5 ಗಂಟೆಗೆ 'ಪ್ರೇಮ ಬರಹ' ಚಿತ್ರದ ಮೊದಲ ಹಾಡು ರಿಲೀಸ್ ಆಗಲಿದೆ. ಒಂದೇ ಸಮಯದಲ್ಲಿ ತಮಿಳು ಮತ್ತು ಕನ್ನಡದಲ್ಲಿ ಈ ಹಾಡು ಬಿಡುಗಡೆಯಾಗಲಿದೆ.
ಅರ್ಜುನ್ ಸರ್ಜಾರ 'Tunesmash' ಸ್ಪರ್ಧೆಯಲ್ಲಿ ಗೆದ್ದರೇ ಬಹುಮಾನ ಏನು?
ತಮಿಳಿನಲ್ಲಿ ಯಾರು ರಿಲೀಸ್ ಮಾಡಲಿದ್ದಾರೆ?
ಐಶ್ವರ್ಯ ಸರ್ಜಾ ಅವರ 'ಪ್ರೇಮ ಬರಹ' ತಮಿಳಿನಲ್ಲಿ 'ಸೊಲ್ಲಿವಿಡುವ' ಎಂಬ ಹೆಸರಿನಲ್ಲಿ ತೆರೆ ಕಾಣುತ್ತಿದೆ. ತಮಿಳಿನಲ್ಲಿ ಈ ಹಾಡನ್ನ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜ ಬಿಡುಗಡೆ ಮಾಡಲಿದ್ದಾರೆ.
ಸೋದರಳಿಯನ 'ಭರ್ಜರಿ' ನೋಡಿ ಅರ್ಜುನ್ ಸರ್ಜಾ ಫುಲ್ ಖುಷ್.!
'ಪ್ರೇಮ ಬರಹ' ಚಿತ್ರದ ಬಗ್ಗೆ
ಜೆಸ್ಸಿಗಿಫ್ಟ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಸಾಧು ಕೋಕಿಲಾ, ಸುಹಾಸಿನಿ, ರಂಗಾಯಣ ರಘು ಸೇರಿದಂತೆ ಹಲವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕಥೆ, ಚಿತ್ರಕಥೆ ಬರೆದು, ನಿರ್ದೇಶನ ಹಾಗೂ ನಿರ್ಮಾಣ ಕೂಡ ಅರ್ಜುನ್ ಸರ್ಜಾ ಅವರೇ ಮಾಡಿದ್ದಾರೆ.
ಈ ದೀಪಾವಳಿಗೆ ಅರ್ಜುನ್ ಸರ್ಜಾ ಮಗಳ ಕಡೆಯಿಂದ ಭರ್ಜರಿ ಗಿಫ್ಟ್ ಸಿಗುತ್ತೆ!