twitter
    For Quick Alerts
    ALLOW NOTIFICATIONS  
    For Daily Alerts

    ಅಂಬರೀಶ್ ವಿಧಿವಶ : ದರ್ಶನ್, ಸುದೀಪ್ ಪತ್ನಿ ನುಡಿ ನಮನ

    |

    ನಟ ಅಂಬರೀಶ್ ಬಾರದ ಲೋಕಕ್ಕೆ ಹೋಗಿದ್ದಾರೆ. ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಕಂಗಾಲಾಗಿದೆ. ಕನ್ನಡದ ಸ್ಟಾರ್ ಕುಟುಂಬದ ಒಬ್ಬ ಸದಸ್ಯನಂತೆ ಇದ್ದ ಅಂಬಿ ಅಗಲಿಕೆ ಎಲ್ಲರಲ್ಲಿ ನೋವುಂಟು ಮಾಡಿದೆ.

    ನಟ ದರ್ಶನ್, ಸುದೀಪ್, ಉಪೇಂದ್ರ, ಯಶ್ ಹೀಗೆ ಎಲ್ಲ ನಟರ ಕುಟುಂಬದೊಂದಿಗೆ ಅಂಬರೀಶ್ ಒಳ್ಳೆಯ ಒಡನಾಟ ಹೊಂದಿದ್ದರು. ಅವರ ಕಷ್ಟ ಸುಖದಲ್ಲಿ ಭಾಗಿಯಾಗಿದ್ದರು. ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ, ಅವರ ಕುಟುಂಬ ಹಿರಿಯಣ್ಣನಂತೆ ಇದ್ದರು.

    ಮಂಡ್ಯದ ಗಂಡು, ಕರುನಾಡ ಕರ್ಣ, ಸ್ಯಾಂಡಲ್ ವುಡ್ ನ ಜಲೀಲ ಅಂಬರೀಶ್ ಇನ್ನಿಲ್ಲ.! ಮಂಡ್ಯದ ಗಂಡು, ಕರುನಾಡ ಕರ್ಣ, ಸ್ಯಾಂಡಲ್ ವುಡ್ ನ ಜಲೀಲ ಅಂಬರೀಶ್ ಇನ್ನಿಲ್ಲ.!

    ಇನ್ನು, ಪ್ರೀತಿಯ ಅಂಬರೀಶಣ್ಣರನ್ನು ಕಳೆದುಕೊಂಡಿರುವ ಸುದೀಪ್ ಪತ್ನಿ ಪ್ರಿಯಾ ಸುದೀಪ್, ದರ್ಶನ್ ಪತ್ನಿ ವಿಜಯಲಕ್ಷ್ಮಿ, ರಾಧಿಕಾ ಪಂಡಿತ್, ಪ್ರಿಯಾಂಕ ಉಪೇಂದ್ರ ತಮ್ಮ ಅಂತಿಮ ನುಡಿ ನಮನವನ್ನು ಸಲ್ಲಿಸಿದ್ದಾರೆ. ಮುಂದೆ ಓದಿ...

    ಹಳೆ ನೆನಪು ಹಂಚಿಕೊಂಡ ಪ್ರಿಯಾ ಸುದೀಪ್

    ''ಸುದೀಪ್ ಹಾಗೂ ನಾನು ನಮ್ಮ ಮನೆಯಲ್ಲಿ ಅವರ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಮಾಡಿದ್ದೇವು. ಆ ದಿನ ಎಷ್ಟೊಂದು ಖುಷಿಯಾಗಿತ್ತು. ಸುದೀಪ್ ತಮ್ಮ ಕೈಯಾರ ಒಂದು ಕಾರ್ಡ್ ಮಾಡಿ ಅವರಿಗೆ ನೀಡಿದ್ದರು. ಅದನ್ನು ನಾವು ತುಂಬ ಪ್ರೀತಿಯಿಂದ ನೀಡಿದ್ದೇವು. ನಾವು ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇವೆ.'' - ಪ್ರಿಯಾ ಸುದೀಪ್,

    ದುಃಖದಲ್ಲಿ ವಿಜಯಲಕ್ಷ್ಮಿ ದರ್ಶನ್

    ''ಅಪ್ಪಾಜಿ ಅವರನ್ನು ನಾವು ಕಳೆದುಕೊಂಡಿದ್ದೇವೆ ಎಂಬ ಸುದ್ದಿ ನಮಗೆ ಬಹಳ ದುಃಖ ನೀಡಿದೆ. ಅವರನ್ನು ನಾವು ಬಹಳ ಮಿಸ್ ಮಾಡಿಕೊಳ್ಳುತ್ತೇವೆ. ನಾನು ಅವರಿಗೆ ಸಂತಾಪ ಸೂಚಿಸುತ್ತೇನೆ.'' - ವಿಜಯಲಕ್ಷ್ಮಿ ದರ್ಶನ್

    ಅಂಬಿ ಪಾರ್ಥಿವ ಶರೀರದ ಮುಂದೆ ಕಣ್ಣೀರು ಹಾಕಿದ ರಜನಿಕಾಂತ್ಅಂಬಿ ಪಾರ್ಥಿವ ಶರೀರದ ಮುಂದೆ ಕಣ್ಣೀರು ಹಾಕಿದ ರಜನಿಕಾಂತ್

    ನಮ್ಮ ಹೃದಯದಲ್ಲಿ ಸದಾ ಇರುತ್ತೀರ - ಪ್ರಿಯಾಂಕ

    ''ನಿಮ್ಮ ಉತ್ಸಾಹ, ನಿಮ್ಮ ಲವಲವಿಕೆ ಎಂದು ಮಾಸುವುದಿಲ್ಲ. ನಮ್ಮ ಹೃದಯದಲ್ಲಿ ನೀವು ಸದಾ ಇರುತ್ತೀರ. ವಿ ಲವ್ ಯೂ ಅಂಬರೀಶ್ ಸರ್. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮನ್ನೂ ನಾವು ಬಹಳ ಮಿಸ್ ಮಾಡಿಕೊಳ್ಳುತ್ತೇವೆ. ಈ ವಿಷಯವನ್ನು ಇನ್ನು ನಮಗೆ ನಂಬಲು ಆಗುತ್ತಿಲ್ಲ.'' - ಪ್ರಿಯಾಂಕ ಉಪೇಂದ್ರ, ನಟಿ

    ವಿಲ್ ಮಿಸ್ ಯೂ ಅಣ್ಣ - ರಾಧಿಕಾ ಪಂಡಿತ್

    ಅಂಬರೀಶ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ನಟಿ ರಾಧಿಕಾ ಪಂಡಿತ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ 'ವಿಲ್ ಮಿಸ್ ಯೂ ಅಣ್ಣ' ಎಂದು ಬರೆದುಕೊಂಡಿದ್ದಾರೆ. ಯಶ್ ಹಾಗೂ ತಮ್ಮ ಜೊತೆಗೆ ಅಂಬರೀಶ್ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇತ್ತೀಚಿಗಷ್ಟೆ ರಾಧಿಕಾ ಸೀಮಂತ ಕಾರ್ಯಕ್ರಮದಲ್ಲಿ ಸಹ ಅಂಬಿ ಭಾಗಿಯಾಗಿದ್ದರು.

    ಹಿರಿಯಣ್ಣ ಅಂಬಿ ಇನ್ನಿಲ್ಲ: ಕಂಬನಿ ಮಿಡಿದ ಕನ್ನಡ ಚಿತ್ರರಂಗಹಿರಿಯಣ್ಣ ಅಂಬಿ ಇನ್ನಿಲ್ಲ: ಕಂಬನಿ ಮಿಡಿದ ಕನ್ನಡ ಚಿತ್ರರಂಗ

    English summary
    Priya Sudeep and Vijayalakshmi Darshan condolences for actor Ambareesh death. Kannada Actor, Former Minister, Congress Politician Ambareesh (66) passed away on November 24th in Bengaluru.
    Sunday, November 25, 2018, 11:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X