Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಏನಾಶ್ಚರ್ಯ! ಕನ್ನಡ ಪರ ಹೋರಾಟಗಾರರೇ ತಮಿಳರಿಗೆ ನೀರು ಹಂಚಿದ್ದಾರೆ!
Recommended Video
ನಾಡು-ನುಡಿ-ಜಲ ವಿಷಯ ಬಂದಾಗ ಸದಾ ಕನ್ನಡ ಪರ, ಕನ್ನಡಿಗರ ಪರ ನಿಲ್ಲುವ ಹೋರಾಟಗಾರರೇ ಇಂದು ತಮಿಳು ನಟ ಸಿಂಬು ಮಾತಿಗೆ ತಲೆಬಾಗಿದ್ದಾರೆ. ''ರಕ್ತ ಕೊಟ್ಟೇವು, ನೀರು ಕೊಡೆವು'' ಎಂದು ಬೀದಿಗಿಳಿದು ಹೋರಾಟ ಮಾಡುತ್ತಿದ್ದವರೇ ಇಂದು ತಮಿಳರಿಗೆ ಬಾಟಲ್ ಗಟ್ಟಲೆ ನೀರು ಹಂಚ್ತಿದ್ದಾರೆ. ಇಂತಹ ದೊಡ್ಡ ಪರಿವರ್ತನೆಯ ಕಾರಣಕರ್ತ ತಮಿಳು ನಟ ಸಿಂಬು.!
ಹೋರಾಟದಿಂದ ಗೆಲ್ಲಲು ಸಾಧ್ಯವಾಗದ್ದನ್ನು, ಪ್ರೀತಿಯಿಂದ ಪಡೆಯಲು ಮುಂದಾಗಿರುವ ಸಿಂಬು ನಡೆ ಕನ್ನಡಿಗರಿಗೆ ಮೆಚ್ಚುಗೆ ಆಗಿದೆ. ''ಕನ್ನಡಿಗರು ಹಾಗೂ ತಮಿಳರು ಎನ್ನುವುದಕ್ಕಿಂತ ನಾವೆಲ್ಲ ಭಾರತೀಯರು, ನಾವೆಲ್ಲರೂ ಮನುಷ್ಯರು'' ಎಂದಿರುವ ಸಿಂಬುಗೆ ಕನ್ನಡಿಗರ ಬೆಂಬಲ ವ್ಯಕ್ತವಾಗಿದೆ. ಆಶ್ಚರ್ಯ ಅಂದ್ರೆ, ಕನ್ನಡ ಪರ ಹೋರಾಟಗಾರರೂ ಕೂಡ ಸಿಂಬು ಕರೆಗೆ ಓಗೊಟ್ಟಿದ್ದಾರೆ.
ತಮಿಳು ನಟ ಸಿಂಬು ಕರೆಗೆ ಓಗೊಟ್ಟು ತಮಿಳರಿಗೆ ನೀರು ಕೊಟ್ಟ ಕನ್ನಡಿಗರು.!
ತಮಿಳುನಾಡಿಗೆ ನೀರು ಕೊಡಲು ಸಮ್ಮತಿ ಸೂಚಿಸುವಂತೆ ಕನ್ನಡಿಗರು ಕೈಯಲ್ಲಿ ನೀರು ತುಂಬಿದ ಲೋಟ ಹಿಡಿದು ವಿಡಿಯೋ ಮಾಡುವಂತೆ ತಮಿಳು ನಟ ಸಿಂಬು ಕೋರಿದ್ದರು.
ಸಿಂಬು ಮಾತಿಗೆ ಜೈಕಾರ ಕೂಗುತ್ತಾ ಕೆಲ ಕನ್ನಡಿಗರು ವಿಡಿಯೋ ಮಾಡುತ್ತಿದ್ದರೆ, ಇತ್ತ ಕನ್ನಡಿಗರ ಪರ ಹೋರಾಟ ಮಾಡುವ 'ಕರ್ನಾಟಕ ಸಂರಕ್ಷಣಾ ವೇದಿಕೆ'ಯ ಕಾರ್ಯಕರ್ತರು ತಮಿಳರಿಗೆ ಬಾಟಲ್ ಗಟ್ಟಲೆ ನೀರು ಹಂಚಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
''ಕನ್ನಡಿಗರಿಗೆ ನೀರಿಲ್ಲ, ಇನ್ನೂ ನಮಗೆಲ್ಲಿಂದ ಕೊಡ್ತಾರೆ'' ತಮಿಳು ನಟನ ಹೃದಯಸ್ಪರ್ಶಿ ಹೇಳಿಕೆ
ಇನ್ನೂ, ಕೆಲವು ಕಡೆ ತಮಿಳರಿಗೆ ನೀರಿನ ಜೊತೆಗೆ ಮಜ್ಜಿಗೆಯನ್ನೂ ನೀಡಲಾಗಿದೆ. ಎಲ್ಲೆಲ್ಲೂ ತಮಿಳರು ಹಾಗೂ ಕನ್ನಡಿಗರು ಒಗ್ಗಟ್ಟಿನ ಮಂತ್ರ ಜಪ್ಪಿಸುತ್ತಿದ್ದಾರೆ. ದಶಕಗಳಿಂದ ನೀರಿಗಾಗಿ ಕಿತ್ತಾಡುತ್ತಿದ್ದ ಜನರ ಮಧ್ಯೆ ಬಾಂಧವ್ಯದ ಬೆಸುಗೆ ಮೂಡಲು ಆರಂಭಿಸಿದೆ. ಇದಕ್ಕೆ ಖುಷಿ ಪಡಬೇಕು ಅಲ್ಲವೇ.?