'ಕುರುಕ್ಷೇತ್ರ' ನಂತರ ದರ್ಶನ್ ಜೊತೆ ಮುನಿರತ್ನ ಮತ್ತೊಂದು ಮೆಗಾ ಸಿನಿಮಾ
Recommended Video
ದರ್ಶನ್ ಹಾಗೂ ಮುನಿರತ್ನ ಕಾಂಬಿನೇಶನ್ ನಲ್ಲಿ ಬಂದ 'ಕುರುಕ್ಷೇತ್ರ' ಸಿನಿಮಾ ನೂರು ದಿನಗಳನ್ನು ಪೂರೈಸಿದೆ. ಇದೀಗ ಈ ಜೋಡಿ ಮತ್ತೊಂದು ಮೆಗಾ ಸಿನಿಮಾದ ಪ್ಲಾನ್ ಮಾಡಿದೆ.
ನಿನ್ನೆ (ಫೆಬ್ರವರಿ 21) 'ಕುರುಕ್ಷೇತ್ರ' ಸಿನಿಮಾದ ನೂರು ದಿನಗಳ ಸಂಭ್ರಮ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯುಡಿಯೂರಪ್ಪ ಮುಖ್ಯ ಅತಿಥಿಯಾಗಿದ್ದರು. ಈ ವೇಳೆ ತಮ್ಮ ಕನಸಿನ ಸಿನಿಮಾದ ಬಗ್ಗೆ ಮುನಿರತ್ನ ತಿಳಿಸಿದರು.
ವಿಂಗ್ ಕಮಾಂಡರ್ ಅಭಿನಂದನ್ ಸಿನಿಮಾವನ್ನು ಮುನಿರತ್ನ ಮಾಡಲಿದ್ದು, ಆ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರಂತೆ. ದರ್ಶನ್ ಎಲ್ಲ ರೀತಿಯ ಸಿನಿಮಾಗಳನ್ನು ಮಾಡಿಕೊಂಡು ಬಂದಿದ್ದು, ಅವರನ್ನು ಮೇಜರ್ ಪಾತ್ರದಲ್ಲಿ ನೋಡಬೇಕು ಎನ್ನುವುದು ಮುನಿರತ್ನ ಆಸೆಯಾಗಿದೆ.

ಮುನಿರತ್ನ ತಮ್ಮ ಮುಂದಿನ ಸಿನಿಮಾವನ್ನು ದರ್ಶನ್ ರೊಂದಿಗೆಯೇ ಮಾಡುವ ವಿಷಯ ತಿಳಿಸಿದರು. ಅಭಿಷೇಕ್ ಅಂಬರೀಶ್ ಆಸೆಯ ಮೇರೆಗೆ ಅವರನ್ನು ದರ್ಶನ್ ಅವರ ಈ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದರು.
ವಿಂಗ್ ಕಮಾಂಡರ್ ಅಭಿನಂದನ್ ಸಿನಿಮಾ ಮಾಡಲು ಮುನಿರತ್ನ ಹೊರಟಿದ್ದು, ಅದರ ನಿರ್ದೇಶಕ ಹಾಗೂ ತಾರಬಳಗದಲ್ಲಿ ಯಾರೆಲ್ಲ ಇರುತ್ತಾರೆ ಎನ್ನುವ ಕುತೂಹಲವಿದೆ.


Click it and Unblock the Notifications











