Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕುರುಕ್ಷೇತ್ರ' ನೋಡಲಿದ್ದಾರೆ ಮುನಿರತ್ನ: ಅಂದೇ ರಿಲೀಸ್ ದಿನಾಂಕ ಫಿಕ್ಸ್.!
Recommended Video
ಇಷ್ಟು ದಿನ 'ಕುರುಕ್ಷೇತ್ರ' ಸಿನಿಮಾ ಎಂದು ಬೀಗುತ್ತಿದ್ದ ಡಿ-ಬಾಸ್ ಭಕ್ತರು, ಈಗ 'ಮದಕರಿ ನಾಯಕ' ಎಂದು ಕೂಗುತ್ತಿದ್ದಾರೆ. ಯಾಕಂದ್ರೆ, ಕುರುಕ್ಷೇತ್ರ ಸಿನಿಮಾ ಇನ್ನೂ ಲೇಟ್. ಅದಕ್ಕೂ ಮುಂಚೆ 'ಯಜಮಾನ' ಬರುತ್ತೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಆದ್ರೆ, ಸೈಲೆಂಟ್ ಆಗಿ ಸಿನಿಮಾ ರಿಲೀಸ್ ಮಾಡೋಕೆ ಪ್ಲ್ಯಾನ್ ಮಾಡಿದ್ದಾರೆ ನಿರ್ಮಾಪಕ ಮುನಿರತ್ನ. ಹಾಗಿದ್ರೆ, ಕುರುಕ್ಷೇತ್ರ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದುಹೋಯಿತಾ.? ಮೊದಲ ಪ್ರತಿ ಸಿದ್ಧವಾಯ್ತಾ.? ಯಾವಾಗ ಬಿಡುಗಡೆ.? ಎಂಬ ಕುತೂಹಲ ಕಾಡುತ್ತಿದೆ.
''ನನ್ನ ಕನಸು ಈಡೇರುವ ತನಕ 'ಕುರುಕ್ಷೇತ್ರ' ತೆರೆ ಮೇಲೆ ಬರಲ್ಲ'' ಎಂದ ಮುನಿರತ್ನ!
ಇದಕ್ಕೆಲ್ಲಾ ಮುನಿರತ್ನ ಉತ್ತರ ಕೊಟ್ಟಿದ್ದಾರೆ. ಸ್ವತಃ ಮುನಿರತ್ನ ಅವರೇ ಕುರುಕ್ಷೇತ್ರ ಸಿನಿಮಾ ನೋಡ್ತಿದ್ದಾರಂತೆ. ಒಮ್ಮೆ ಇವರು ನೋಡಿದ ನಂತರ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಮಾಡ್ತಾರಂತೆ. ಹಾಗಿದ್ರೆ, ಮುನಿರತ್ನ ಸಿನಿಮಾ ನೋಡುವುದು ಯಾವಾಗ.? ಮುಂದೆ ಓದಿ.....
ಐದು ರಾಜ್ಯಗಳಲ್ಲಿ ಕೆಲಸ
ಕುರುಕ್ಷೇತ್ರ ಚಿತ್ರೀಕರಣ ಕಂಪ್ಲೀಟ್ ಮಾಡಿದೆ. ದರ್ಶನ್ ಸೇರಿದಂತೆ ಎಲ್ಲಾ ಕಲಾವಿದರು ಡಬ್ಬಿಂಗ್ ಕೂಡ ಮುಗಿಸಿದ್ದಾರೆ. ಈಗೇನಿದ್ರೂ ಗ್ರಾಫಿಕ್ಸ್ ಕೆಲಸ ನಡೆಯುತ್ತಿದೆ. ಪೌರಾಣಿಕ ಸಿನಿಮಾವಾಗಿರುವುದರಿಂದ ಹೆಚ್ಚು ಕೆಲಸ ಇದೆ ಎಂಬ ಕಾರಣಕ್ಕೆ ಸಿನಿಮಾ ಬಿಡುಗಡೆ ಕೂಡ ಮುಂದಕ್ಕೆ ಹೋಗಿತ್ತು. ಬಾಂಬೆ, ಹೈದ್ರಾಬಾದ್, ಕೇರಳ, ಚೆನ್ನೈ, ಬೆಂಗಳೂರಿನಲ್ಲಿ ಗ್ರಾಫಿಕ್ಸ್ ಕೆಲಸ ಸಾಗುತ್ತಿದೆ.
'ಕುರುಕ್ಷೇತ್ರ' ಚಿತ್ರವನ್ನ ರಿಜೆಕ್ಟ್ ಮಾಡಿದ್ರಂತೆ ಈ ಬಹುಭಾಷಾ ನಟಿ.!
ಸಿನಿಮಾ ನೋಡಲಿದ್ದಾರೆ ಮುನಿರತ್ನ
ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದಿರುವ ಕಾರಣ ಮುನಿರತ್ನ ಅವರು ಕುರುಕ್ಷೇತ್ರ ಚಿತ್ರವನ್ನ ನೋಡಲಿದ್ದಾರಂತೆ. ಅಂದ್ರೆ, ನವೆಂಬರ್ 5 ರಂದು ಸಂಪೂರ್ಣ ಕೆಲಸ ಮುಗಿಯುತ್ತಂತೆ. ನವೆಂಬರ್ 10 ರಂದು 2ಡಿ ವರ್ಷನ್ ನಲ್ಲಿ ಕುರುಕ್ಷೇತ್ರ ನೋಡಲಿದ್ದಾರಂತೆ.
ಮುನಿರತ್ನ 'ಕುರುಕ್ಷೇತ್ರ'ದಲ್ಲಿ ಏನು ನಡೆಯುತ್ತಿದೆ ಅನ್ನೋದೇ ದರ್ಶನ್ ಗೆ ಗೊತ್ತಿಲ್ಲ ಸ್ವಾಮಿ.!
ಅಂದೇ ರಿಲೀಸ್ ಡೇಟ್ ಫಿಕ್ಸ್.!
ನವೆಂಬರ್ 10 ರಂದು ನಿರ್ಮಾಪಕ ಮುನಿರತ್ನ ಸಿನಿಮಾ ನೋಡಲಿದ್ದಾರೆ. ನೋಡಿದ ಬಳಿಕೆ ನಿರ್ಮಾಪಕರಿಗೆ ತೃಪ್ತಿಯಾದ್ರೆ, ಆಗಲೇ ರಿಲೀಸ್ ಡೇಟ್ ಫಿಕ್ಸ್ ಮಾಡ್ತಾರಂತೆ. ಇಲ್ಲವಾದಲ್ಲಿ, ಮತ್ತಷ್ಟು ಹೆಚ್ಚುವರಿ ಕೆಲಸಕ್ಕೆ ಸೂಚಿಸುತ್ತಾರಂತೆ. ಮೊದಲು ನಾನು ತೃಪ್ತಿಯಾಗಬೇಕು, ನಂತರ ಅಭಿಮಾನಿಗಳ ಮುಂದೆ ಸಿನಿಮಾ ಬರಲಿದೆ, ನನಗೆ ಇಷ್ಟವಾಗಿಲ್ಲ ಅಂದ್ರೆ, ಫ್ಯಾನ್ಸ್ ಒಪ್ಪಿಕೊಳ್ತಾರಾ ಎನ್ನುತ್ತಾರೆ ಮುನಿರತ್ನ.
'ಕುರುಕ್ಷೇತ್ರ' ವಿವಾದದ ಬಗ್ಗೆ ಮಾತನಾಡಿದರು ನಿರ್ಮಾಪಕ ಮುನಿರತ್ನ!
ಕಾಂಪಿಟೇಶನ್ ಗೆ ನಾವು ರೆಡಿ
ಹಾಗ್ನೋಡಿದ್ರೆ, 'ಕುರುಕ್ಷೇತ್ರ' ಸಿನಿಮಾಗೂ ಮುಂಚೆ ಯಜಮಾನ ಸಿನಿಮಾ ಬರುತ್ತೆ ಎನ್ನಲಾಗಿದೆ. ಬಟ್, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ನಿರ್ಮಾಪಕ ಮುನಿರತ್ನ ಅವರು, ನಾವು ಯಾರ ಬಗ್ಗೆಯೂ ಯೋಚನೆ ಮಾಡಲ್ಲ. ನಮ್ಮ ಸಿನಿಮಾ ರೆಡಿಯಾಗಿದ ತಕ್ಷಣ ನಾವು ಬರ್ತೀವಿ. ಯಾರೇ ಬಂದ್ರು ನಾವು ಯೋಚನೆ ಮಾಡಲ್ಲ. ನಾವು ಬಂದೇ ಬರ್ತೀವಿ ಎಂದು ಮುನಿರತ್ನ ಸ್ಪಷ್ಟಪಡಿಸಿದ್ದಾರೆ.