ನಿರ್ಮಾಪಕ ಸಂದೇಶ್ ನಾಗರಾಜ್ ಗೆ ಕೊರೊನಾ, ಕ್ವಾರಂಟೈನ್ನಲ್ಲಿ ಕುಟುಂಬ
ಕನ್ನಡ ಸಿನಿಮಾ ನಿರ್ಮಾಪಕ ಸಂದೇಶ್ ನಾಗರಾಜ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಅವರ ಕುಟುಂಬ ಮೈಸೂರಿನಲ್ಲಿ ಕ್ವಾರಂಟೈನ್ ಆಗಿದೆ.
Recommended Video
KGF ಎಡಿಟರ್ ನಮ್ಮ ಸಿನಿಮಾ ಎಡಿಟ್ ಮಾಡಿದ್ರು | Raghu Samarth | Filmibeat Kannada
ಸಂದೇಶ್ ನಾಗರಾಜ್ ಅವರಿಗೆ ಸಣ್ಣ ಮಟ್ಟಿಗೆ ರೋಗ ಲಕ್ಷಣಗಳು ಕಾಣಿಸಿಕೊಂಡ ಕಾರಣ ಪರೀಕ್ಷೆಗೆ ಒಳಗಾಗಿದ್ದು, ವರದಿಯು ಪಾಸಿಟಿವ್ ಬಂದಿದೆ ಎನ್ನಲಾಗಿದೆ.
ಸಂದೇಶ್ ನಾಗರಾಜ್ ಅವರ ಕುಟುಂಬ ಸದಸ್ಯರೆಲ್ಲರೂ ಮೈಸೂರಿನಲ್ಲಿ ಮನೆಯಲ್ಲಿಯೇ ಕ್ವಾರಂಟೈನ್ಗೆ ಒಳಗಾಗಿದ್ದು, ಅವರೂ ಸಹ ಪರೀಕ್ಷೆಗೆ ಒಳಪಡಬೇಕಿದೆ.

ಕನ್ನಡ ನಟ ಧ್ರುವ ಸರ್ಜಾ ಮತ್ತು ಪತ್ನಿ ಪ್ರಣಿತಾ ಅವರಿಗೂ ಸಹ ಕೊರೊನಾ ಪಾಸಿಟಿವ್ ಆಗಿದ್ದು, ಇಬ್ಬರೂ ಸಹ ಚೇತರಿಕೆಯ ಹಂತದಲ್ಲಿದ್ದಾರೆ.
ಸಂದೇಶ್ ನಾಗರಾಜ್ ಅವರು ಕನ್ನಡದ ಖ್ಯಾತ ನಿರ್ಮಾಪಕರಲ್ಲಿ ಒಬ್ಬರಾಗಿದ್ದು, ದರ್ಶನ್ ಅಭಿನಯದ ಒಡೆಯ, ಐರಾವತ, ಅಂಬರೀಶ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಪ್ರಸ್ತುತ ಹರಿಕತೆ ಅಲ್ಲ ಗಿರಿಕತೆ ಮತ್ತು ಶ್ರೀಕೃಷ್ಣ@gmail.com ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ.
More from Filmibeat
English summary
Kannada famous movie producer Sandesh Nagaraj tested coronavirus positive. His family is in quarantine in Mysuru.


Click it and Unblock the Notifications











