Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಾಬರ್ಟ್' ಬಿಡುಗಡೆ ಬಗ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಿರ್ಧಾರವೇನು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ರಾಬರ್ಟ್' ಸಿನಿಮಾ ಕ್ರಿಸ್ಮಸ್ ಹಬ್ಬದ ವಿಶೇಷವಾಗಿ ತೆರೆಕಾಣಲಿದೆ ಎಂದು ಗಾಂಧಿನಗರದ ಒಂದಿಷ್ಟು ಮಂದಿ ಹೇಳುತ್ತಿದ್ದಾರೆ. ರಾಬರ್ಟ್ ಹೆಸರಿಗೆ ತಕ್ಕಂತೆ ಕ್ರಿಸ್ಮಸ್ಗೆ ರಿಲೀಸ್ ಮಾಡುವುದು ಉತ್ತಮ ಎಂಬ ಅಭಿಪ್ರಾಯವೂ ಇದೆ.
Recommended Video
ಈ ಕುರಿತು ನಿರ್ದೇಶಕ ತರುಣ್ ಸುಧೀರ್ ಸಹ ಮಾತನಾಡಿದ್ದರು. ಚಿತ್ರದ ನಿರ್ಮಾಪಕರು, ದರ್ಶನ್ ಅವರು ಎಲ್ಲರೂ ಒಟ್ಟಿಗೆ ಕೂತು ಈ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದ್ದರು. ಈ ಕುರಿತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರು ಮಾಹಿತಿ ನೀಡಿದ್ದು, ''ರಾಬರ್ಟ್ ರಿಲೀಸ್ ಗೆ ದಿನಾಂಕ ಇನ್ನೂ ಫಿಕ್ಸ್ ಆಗಿಲ್ಲ'' ಎಂದು ತಿಳಿಸಿದ್ದಾರೆ.
ದರ್ಶನ್ ಸರ್ ಹೇಳಿದಾಗ ರಿಲೀಸ್
ರಾಬರ್ಟ್ ಸಿನಿಮಾ ಕ್ರಿಸ್ಮಸ್ ಹಬ್ಬಕ್ಕೆ ರಿಲೀಸ್ ಆಗುತ್ತಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಮಾಪತಿ ಶ್ರೀನಿವಾಸ್ ''ದರ್ಶನ್ ಸರ್ ಯಾವಾಗ ಬಿಡುಗಡೆ ಮಾಡೋಣ ಅಂತಾರೋ ನಾವು ಆಗ ರೆಡಿ. ನಮಗೆ ನೀಡಿದ ಜವಾಬ್ದಾರಿಯನ್ನು ನಾವು ಚೆನ್ನಾಗಿ ನಿಭಾಯಿಸಿದ್ದೇವೆ. ನಮ್ಮ ಬಳಿ ಕಂಟೆಂಟ್ ರೆಡಿ ಇದೆ. ಈ ತಿಂಗಳು ಅಂದ್ರು ಓಕೆ, ಇನ್ನೊಂದು ವರ್ಷ ಬಿಟ್ಟು ರಿಲೀಸ್ ಮಾಡೋಣ ಅಂದ್ರು ಓಕೆ'' ಎಂದು ಉಮಾಪತಿ ಹೇಳಿದ್ದಾರೆ.
ತೆಲುಗಿನಲ್ಲಿ 'ರಾಬರ್ಟ್': ಟೈಟಲ್ ಅನಾವರಣಕ್ಕಾಗಿ ಮೆಗಾ ತಯಾರಿ!
ನಮ್ಮ ನಮ್ಮಲ್ಲಿ ಫೈಟ್ ಬೇಡ
''ಬೇರೆ ಭಾಷೆಯ ನೂರು ಚಿತ್ರಗಳು ರಿಲೀಸ್ ಆಗಲಿ. ನಮ್ಮ ಚಿತ್ರ ಬಿಡುಗಡೆ ಮಾಡೋಕೆ ನಾವು ರೆಡಿ ಇದ್ದೇವೆ. ಆದರೆ, ನಮ್ಮ ನಮ್ಮಲ್ಲಿ ಫೈಟ್ ಬೇಡ. ನಮಗಿಂತ ಮುಂಚೆ ಬರಬೇಕೆಂದುಕೊಂಡಿದ್ದ ಚಿತ್ರಗಳು ಇವೆ. ಅವರು ರಿಲೀಸ್ ಮಾಡುವುದಾದರೇ ನಾವು ಬೆಂಬಲ ನೀಡುತ್ತೇವೆ. ನಾವು ನಿಧಾನವಾಗಿ ಬರುವುದಕ್ಕೆ ರೆಡಿ ಇದ್ದೇವೆ. ಅಥವಾ ನಮ್ಮನ್ನು ರಿಲೀಸ್ ಮಾಡಿ ಅಂದರೂ ನಾವು ಬರ್ತೇವೆ'' ಎಂದು ರಾಬರ್ಟ್ ನಿರ್ಮಾಪಕ ಸ್ಪಷ್ಟನೆ ನೀಡಿದ್ದಾರೆ.
ರಾಬರ್ಟ್ ಬಿಡುಗಡೆ ಬಗ್ಗೆ ದರ್ಶನ್ ಏನಂದ್ರು?
''ಈಗಿರುವ ಪರಿಸ್ಥಿತಿ ಚೆನ್ನಾಗಿ ಆಗಲಿ. ಎಲ್ಲ ಓಕೆ ಆದ್ಮೇಲೆ ನೋಡ್ಕೋಂಡು ಬರೋಣ. ನಮ್ಮಿಂದ ಇನ್ನೊಬ್ಬರಿಗೆ ತೊಂದರೆ ಆಗುವುದು ಬೇಡ. ಅದೇ ರೀತಿ ಬೇರೆಯವರಿಂದು ನಮಗೂ ತೊಂದರೆಯಾಗುವುದು ಬೇಡ'' ಎಂದು ನಟ ದರ್ಶನ್ ಅವರು ನಿರ್ಮಾಪಕರ ಬಳಿ ಚರ್ಚಿಸಿದ್ದಾರಂತೆ.
ಡಿ-ಬಾಸ್ ಅಭಿಮಾನಿಗಳಿಗೆ ಖುಷಿ ಸುದ್ದಿ: 'ರಾಬರ್ಟ್' ಎಂಟ್ರಿಗೆ ಮುಹೂರ್ತ ನಿಗದಿ
ಸಿಂಗಲ್ ಸ್ಕ್ರೀನ್ ಥಿಯೇಟರ್ ಮುಖ್ಯ
''ದರ್ಶನ್ ಅಂತವರ ಚಿತ್ರಗಳಿಗೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಬಹಳ ಮುಖ್ಯ. ಮಲ್ಟಿಪ್ಲೆಕ್ಸ್ ಅವರಂತೆ ಚಿತ್ರಮಂದಿರಗಳು ಜನರು ಬಂದು ಸಿನಿಮಾ ನೋಡುವಂತಹ ಆತ್ಮವಿಶ್ವಾಸ ಬರಬೇಕು. ಜನರು ಧೈರ್ಯದಿಂದ ಥಿಯೇಟರ್ಗೆ ಬರಬೇಕು. ಆಗ ಬಿಡುಗಡೆ ಮಾಡಿದ್ರೆ ಉತ್ತಮ'' ಎಂದು ರಾಬರ್ಟ್ ನಿರ್ಮಾಪಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.