Don't Miss!
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಭಿಮಾನಿಯ ಅಭಿಮಾನಕ್ಕೆ ಮನಸೋತ 'ಪುನೀತ'
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬೆಟ್ಟದ ಹೂ ಸಿನಿಮಾವನ್ನ ಕನ್ನಡದ ಪ್ರತಿಯೊಬ್ಬ ಚಿತ್ರ ಪ್ರೇಮಿಯೂ ನೋಡಿರುತ್ತಾನೆ. ಅಷ್ಟೇ ಅಲ್ಲದೆ ಬೆಟ್ಟದ ಹೂ ಸಿನಿಮಾ ಹಾಗೂ ಪವರ್ ಸ್ಟಾರ್ ಅಭಿನಯವನ್ನ ತುಂಬಾನೇ ಮೆಚ್ಚಿಕೊಂಡಿದ್ದರು.
ಸಿನಿಮಾ ಪೂರ್ತಿ ನಾಯಕ ಅಂದರೆ ಪುನೀತ್ ರಾಜ್ ಕುಮಾರ್ ಬದುಕಿಗಾಗಿ ಹಾಗೂ ಪುಸ್ತಕ ಕೊಂಡುಕೊಳ್ಳಲು ಹೋರಾಟ ಮಾಡುತ್ತಲೇ ಇರುತ್ತಾನೆ. ಆದರೆ ಇಂದು (ಫೆ 9) ಅಪ್ಪು ಅಭಿಮಾನಿಯೊಬ್ಬರು ಬೆಲೆ ಕಟ್ಟಲಾಗದ ಉಡುಗೊರೆಯನ್ನ ನೀಡಿ ಆ ಸಿನಿಮಾದಲ್ಲಿನ ಆಸೆಯನ್ನ ಪೂರೈಸಿದ್ದಾರೆ. ಗಿಫ್ಟ್ ಪಡೆದ ಪವರ್ ಸ್ಟಾರ್ ತಮ್ಮ ಫೇಸ್ ಬುಕ್ ಸ್ಟೇಟಸ್ ನಲ್ಲಿ ಅದರ ಬಗ್ಗೆ ಬರೆದುಕೊಂಡಿದ್ದಾರೆ.
ಪುನೀತ್ ಸದ್ಯ ಏನ್ ಮಾಡ್ತಿದ್ದಾರೆ.. ಅವ್ರ ಮುಂದಿನ ಸಿನಿಮಾ ಯಾವ್ದು..?
ರಾಮಾಯಣ ಪುಸ್ತಕವನ್ನು ಪುನೀತ್ ಅವರಿಗೆ ಉಡುಗೊರೆಯಾಗಿ ಅಭಿಮಾನಿ ನೀಡಿದ್ದಾರೆ. "ಬೆಟ್ಟದಹೂವು movie Li ಎಷ್ಟೇ ದುಡ್ಡು save ಮಾಡದ್ರೂ ತೊಗೊಳೋಕ್ಕೆ ಆಗ್ಲಿಲ್ಲ, finally a fan gifted it" ಎಂದು ಫೋಟೋ ಸಮೇತ ಅಪ್ಪು ಹೇಳಿಕೊಂಡಿದ್ದಾರೆ.
ಪವರ್ ಸ್ಟಾರ್ ಬಳಿ ಈ ತರಹ ಸಾಕಷ್ಟು ಉಡುಗೊರೆಗಳು ಇವೆ. ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಯೋಚನೆ ಮಾಡಿ ಪ್ರತಿ ಭಾರಿ ಭೇಟಿ ಮಾಡಿದಾಗಲೂ ಬೇರೆ ಬೇರೆಯ ರೀತಿಯ ಉಡುಗೊರೆಯನ್ನು ನೀಡುತಲೇ ಇರುತ್ತಾರೆ. ಸ್ವೀಕರಿಸಿದ ಗಿಫ್ಟ್ ಗಳನ್ನ ತುಂಬಾ ಚೆನ್ನಾಗಿ ಜೋಪಾನ ಮಾಡುತ್ತಾರೆ ಪುನೀತ್ .