twitter
    For Quick Alerts
    ALLOW NOTIFICATIONS  
    For Daily Alerts

    ಚಾಮರಾಜನಗರ ಜಿಲ್ಲೆ ಅಭಿವೃದ್ಧಿಗೆ ಪುನೀತ್ ರಾಜ್‌ಕುಮಾರ್ ಸಾಥ್

    |

    ನಟ ಪುನೀತ್ ರಾಜ್‌ಕುಮಾರ್ ಅವರು ಸಿನಿಮಾಗಳ ಹೊರತಾಗಿ ಹಲವು ಸಮಾಜ ಸೇವೆ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ಸರ್ಕಾರದೊಂದಿಗೆ ಸಹ ಹಲವು ಮಹತ್ವದ ಕಾರ್ಯಗಳಿಗೆ ಕೈಜೋಡಿಸಿದ್ದಾರೆ.

    ಚುನಾವಣೆಗೆ ರಾಯಭಾರಿ, ಪ್ರವಾಸೋದ್ಯಮ ರಾಯಭಾರಿ, ನಂದಿನಿ ಹಾಲಿಗೆ ಉಚಿತ ಜಾಹೀರಾತು ಇನ್ನೂ ಹಲವಾರು ವಿಷಯಗಳಲ್ಲಿ ಸರ್ಕಾರಕ್ಕೆ ಸದಾ ಸಹಕಾರ ನೀಡಿದ್ದಾರೆ ಪುನೀತ್ ರಾಜ್‌ಕುಮಾರ್.

    ಚಾಮರಾಜನಗರ ಅಭಿವೃದ್ಧಿಗೆ ಪುನೀತ್ ಸಾಥ್

    ಚಾಮರಾಜನಗರ ಅಭಿವೃದ್ಧಿಗೆ ಪುನೀತ್ ಸಾಥ್

    ಇದೀಗ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಪುನೀತ್ ರಾಜ್‌ಕುಮಾರ್ ಅವರು ಕೈಜೊಡಿಸಿದ್ದಾರೆ. ಜಿಲ್ಲೆಯ ಪ್ರವಾಸೋದ್ಯಮದ ಬಗ್ಗೆ ಜಿಲ್ಲಾಡಳಿತ ಮಾಡಿರುವ ವಿಡಿಯೋಕ್ಕೆ ಪುನೀತ್ ಅವರು ಜೊತೆಯಾಗಿದ್ದಾರೆ.

    ಗಂಗಾವತಿ ಸರ್ಕಾರಿ ಶಾಲೆ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿದ ಪುನೀತ್ ರಾಜ್ ಕುಮಾರ್ಗಂಗಾವತಿ ಸರ್ಕಾರಿ ಶಾಲೆ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿದ ಪುನೀತ್ ರಾಜ್ ಕುಮಾರ್

    ಚಾಮರಾಜನಗರ ಬಗ್ಗೆ ಪುನೀತ್ ವಿಡಿಯೋ

    ಚಾಮರಾಜನಗರ ಬಗ್ಗೆ ಪುನೀತ್ ವಿಡಿಯೋ

    ಚಾಮರಾಜನಗರ ಜಿಲ್ಲೆಯ ಬಗ್ಗೆ ಪುನೀತ್ ಅವರು ಮಾತನಾಡಿ, ತಮ್ಮ ಅಭಿಪ್ರಾಯ ಹಂಚಿಕೊಂಡು ಅದನ್ನು ಚಾಮರಾಜನಗರ ಜಿಲ್ಲಾಡಳಿತ ನಿರ್ಮಿಸುತ್ತಿರುವ ವಿಡಿಯೋಕ್ಕೆ ಬಳಸಲು ಅನುಮತಿ ನೀಡಿದ್ದಾರೆ. ಇದಕ್ಕೆ ಯಾವುದೇ ಸಂಭಾವನೆ ಪಡೆದಿಲ್ಲ ನಟ ಪುನೀತ್.

    ಜಿಲ್ಲಾಧಿಕಾರಿಗಳಿಗೆ ಧನ್ಯವಾದ ಪತ್ರ

    ಜಿಲ್ಲಾಧಿಕಾರಿಗಳಿಗೆ ಧನ್ಯವಾದ ಪತ್ರ

    ಪುನೀತ್ ಅವರ ಈ ಕಾರ್ಯದ ಬಗ್ಗೆ ಚಾಮರಾಜನಗರ ಜಿಲ್ಲಾಧಿಕಾರಿ ಎಂಆರ್ ರವಿ ಮೆಚ್ಚುಗೆ ವ್ಯಕ್ತಪಡಿಸಿ, ಕೃತಜ್ಞತಾ ಭಾವದಿಂದ ಪುನೀತ್ ಅವರಿಗೆ ಧನ್ಯವಾದ ಅರ್ಪಿಸಿ ಪತ್ರವೊಂದನ್ನು ಬರೆದಿದ್ದಾರೆ. 'ನಿಮ್ಮ ತಂದೆ ಡಾ.ರಾಜ್‌ಕುಮಾರ್ ಅವರ ಹುಟ್ಟೂರಿನ ಮೇಲೆ ನಿಮಗೆ ಇರುವ ಪ್ರೀತಿ ಅಭಿನಂದನೀಯ' ಎಂದು ಪತ್ರದಲ್ಲಿ ಹೇಳಿದ್ದಾರೆ ಜಿಲ್ಲಾಧಿಕಾರಿ.

    ಫೋಟೋ ವೈರಲ್: ದಾಂಡೇಲಿ ಹಳ್ಳಿಯಲ್ಲಿ ಭೋಜನ ಸವಿದ ಪುನೀತ್ ಸರಳತೆಗೆ ಅಭಿಮಾನಿಗಳು ಫಿದಾಫೋಟೋ ವೈರಲ್: ದಾಂಡೇಲಿ ಹಳ್ಳಿಯಲ್ಲಿ ಭೋಜನ ಸವಿದ ಪುನೀತ್ ಸರಳತೆಗೆ ಅಭಿಮಾನಿಗಳು ಫಿದಾ

    Recommended Video

    ಅಜ್ಜಿಯ 12 ವರ್ಷದ ಆಸೆಯನ್ನು ಈಡೇರಿಸಿದ ಪುನೀತ್ ರಾಜ್ ಕುಮಾರ್ | Filmibeat Kannada
    ಸರ್ಕಾರಿ ಶಾಲೆಗೆ ಪುನೀತ್ ದನ ಸಹಾಯ

    ಸರ್ಕಾರಿ ಶಾಲೆಗೆ ಪುನೀತ್ ದನ ಸಹಾಯ

    ಪುನೀತ್ ರಾಜ್‌ಕುಮಾರ್ ಅವರು ಕೆಲವು ದಿನಗಳ ಹಿಂದೆ ಗಂಗಾವತಿಯ ಸರ್ಕಾರಿ ಶಾಲೆಯೊಂದರ ಅಭಿವೃದ್ಧಿಗೆ ದನ ಸಹಾಯ ಮಾಡಿದ್ದರು. ಅದಕ್ಕೂ ಮುನ್ನಾ ಕೊಪ್ಪಳದಲ್ಲಿ ಕೊರೊನಾ ಜಾಗೃತಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

    ಜೋಯಿಡಾ ವನ್ಯಜೀವಿ ತಾಣದಲ್ಲಿ ಪವರ್ ಸ್ಟಾರ್: ಜೇನು ಸವಿದು ಸಂತಸ ಪಟ್ಟ ಅಪ್ಪುಜೋಯಿಡಾ ವನ್ಯಜೀವಿ ತಾಣದಲ್ಲಿ ಪವರ್ ಸ್ಟಾರ್: ಜೇನು ಸವಿದು ಸಂತಸ ಪಟ್ಟ ಅಪ್ಪು

    English summary
    Actor Puneeth Rajkumar supports Chamarajanagar development by helping district administration.
    Wednesday, November 11, 2020, 16:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X