Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಳ್ಳಾರಿ ಪೊಲೀಸರ ಜೊತೆ ಕೈ ಜೋಡಿಸಿದ ಯಶ್, ಪುನೀತ್
ಸಿನಿಮಾ ಕಲಾವಿದರು ರಾಜಕಾರಣಿಗಳ ಜೊತೆಯಲ್ಲಿ ಹಾಗೂ ಪೊಲೀಸರ ಜೊತೆಯಲ್ಲಿ ಉತ್ತಮ ಬಾಂದವ್ಯ ಹೊಂದಿರುತ್ತಾರೆ. ಸದ್ಯ ರಾಕಿಂಗ್ ಸ್ಟಾರ್ ಯಶ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಳ್ಳಾರಿ ಪೊಲೀಸರ ಜೊತೆ ಕೈ ಜೋಡಿಸಿದ್ದಾರೆ.
ಸಿನಿಮಾ ಕಲಾವಿದರು ಉತ್ತಮ ಸಂದೇಶವಿರುವ ಸಿನಿಮಾಗಳಲ್ಲಿ ಅಭಿನಯ ಮಾಡಬೇಕು ಎನ್ನುವ ಆಸೆಗಳನ್ನು ಹೊಂದಿರುತ್ತಾರೆ. ಕಂಪ್ಲೀಟ್ ಕಮರ್ಷಿಯಲ್ ಚಿತ್ರವಾದರೂ ಅದರಲ್ಲಿಲೂ ಸಣ್ಣದೊಂದು ಮೆಸೆಜ್ ಇರಲಿ ಎನ್ನು ಆಶಯವನ್ನು ಇಟ್ಟುಕೊಂಡಿರುತ್ತಾರೆ.
ಸದ್ಯ ಪವರ್ ಸ್ಟಾರ್ ಹಾಗೂ ರಾಕಿಂಗ್ ಸ್ಟಾರ್ ಪೊಲೀಸರ ಜೊತೆ ಕೈ ಜೋಡಿಸಿರುವುದು ತಮ್ಮ ರಿಯಲ್ ಲೈಫ್ ನಲ್ಲಿಯೂ ಜನರಿಗೆ ಒಳ್ಳೆ ಸಂದೇಶ ಕೊಡುವ ನಿಟ್ಟಿನಲ್ಲಿ. ಇದೇ ಉದ್ದೇಶಕ್ಕಾಗಿ ಕನ್ನಡದ ಬಹುತೇಕ ಕಲಾವಿದರು ಬಳ್ಳಾರಿಯ ಆರಕ್ಷಕರ ಜೊತೆಯಾಗಿದ್ದಾರೆ. ಹಾಗಾದರೆ ಇವರೆಲ್ಲರೂ ಹೇಳುತ್ತಿರುವ ಸಂದೇಶವೇನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ
ಜೀವ ಉಳಿಸಲು ಸಂದೇಶ
ಕನ್ನಡ ಸಿನಿಮಾ ಕಲಾವಿದರು ಬಳ್ಳಾರಿ ಪೊಲೀಸರ ಜೊತೆ ಕೈ ಜೋಡಿಸಿರುವುದು ಜೀವ ಉಳಿಸಲು. ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಠಾಣೆಯ ಸಬ್ ಇನ್ಸ್ಪೆಕ್ಟರ್ ಮೊಹಮದ್ ರಫಿ 'ಗುಡ್ ಸಮರಿಟನ್ ಲಾ' ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅದಕ್ಕಾಗಿ ಕನ್ನಡ ಸ್ಟಾರ್ಸ್ ಜೊತೆಯಾಗಿದ್ದಾರೆ.
|
ಪವರ್ ಸ್ಟಾರ್ ಜೊತೆ -ರಾಕಿಂಗ್ ಸ್ಟಾರ್
ರಸ್ತೆ ಅಪಘಾತದಲ್ಲಿ ಸಿಲುಕಿದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವವರಿಗೆ ಪೊಲೀಸ್ ತನಿಖೆಯ ಹೆಸರಿನಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಅಪಘಾತವಾದಾಗ ಗೊಲ್ಡನ್ ಅವರ್ ನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಿ ಎಂಬ ಸಂದೇಶ ಸಾರುವ ಉದ್ದೇಶದಿಂದ ನಡೆಯುತ್ತಿರುವ ಜಾಗೃತಿಗೆ ಪುನೀತ್ ರಾಜ್ ಕುಮಾರ್ ಹಾಗೂ ಯಶ್ ಕೈ ಜೋಡಿಸಿದ್ದಾರೆ.
ಜಾಗೃತಿಗಾಗಿ ಒಟ್ಟಾದ ಕಲಾವಿದರು
ಕೇವಲ ಯಶ್ ಹಾಗೂ ರಾಕಿಂಗ್ ಸ್ಟಾರ್ ಮಾತ್ರವಲ್ಲದೆ ಜೀವಕ್ಕೆ ಉಪಯೋಗವಾಗುವ ಈ ಜಾಗೃತಿ ಕಾರ್ಯಕ್ರಮಕ್ಕೆ ದಿಗಂತ್, ಐಂದ್ರಿತಾ ರೇ, ಚಿಕ್ಕಣ್ಣ, ಪವನ್ ಒಡೆಯರ್, ರಾಧಿಕಾ ಪಂಡಿತ್ ಸೇರಿದಂತೆ ಸಾಕಷ್ಟು ರಾಜಕೀಯ ಗಣ್ಯರು ಕೂಡ ಗೀವ್ ವೇ ಟು ಹಾಸ್ಪಿಟಲ್ ಕಾರ್ಯಕ್ರಮಕ್ಕೆ ಒಟ್ಟಾಗಿದ್ದಾರೆ.
ಎಸ್ ಐ ಮೊಹಮದ್ ರಫಿ ಅವರ ಮುಂದಾಳತ್ವ
ಪೊಲೀಸರು ಅಂದರೆ ಅಪರಾಧವನ್ನು ತಡೆಯುವುದು ಕಳ್ಳರನ್ನ ಬಂಧಿಸುವುದು ಮಾತ್ರವಲ್ಲ, ತಮ್ಮ ಸುತ್ತ ಮುತ್ತಲಿನ ವಾತಾವರಣದಲ್ಲಿ ವಾಸಿಸುವ ಜನರ ಜೀವದ ಬಗ್ಗೆಯೂ ಕಾಳಜಿ ವಹಿಸಬೇಕು ಎನ್ನುವ ಉದ್ದೇಶದಿಂದ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮೊಹಮದ್ ರಫಿ ಮತ್ತು ತಂಡ ಈ ಜಾಗೃತಿ ಕಾರ್ಯಕ್ಕೆ ಮುಂದಾಗಿದ್ದಾರೆ.