Don't Miss!
- Technology WhatsApp: ವಾಟ್ಸಾಪ್ಗೆ ಕೆಲವೇ ದಿನಗಳಲ್ಲಿ ಸೇರಲಿವೆ ಬಹುನಿರೀಕ್ಷಿತ ಈ ಫೀಚರ್ಸ್! ಇವುಗಳಿಂದ ಏನೆಲ್ಲಾ ಲಾಭ?
- News karnataka Rain: ಇಂದಿನಿಂದ ರಾಜ್ಯದಲ್ಲಿ ಜೋರು ಮಳೆ: ಬೆಂಗಳೂರಿನಲ್ಲಿ ಕೆಲವೆಡೆ ಮಾತ್ರ ವರಣ ಕೃಪೆ ತೋರುವ ಸಾಧ್ಯತೆ- ಐಎಂಡಿ ಅಲರ್ಟ್
- Finance ಮೊಮೊಸ್ ಮಾರುವ ಶಾಪ್ನಿಂದ ಜಾಬ್ ಆಫರ್ ಸಖತ್ ವೈರಲ್! ವೇತನವೆಷ್ಟು ಗೊತ್ತಾ?
- Lifestyle ಬೆಂಗಳೂರಲ್ಲಿ ಮರ ತಬ್ಬಿಕೊಳ್ಳಲು ₹1,500 ಶುಲ್ಕ..! ಇದೇನಿದು ಕಬ್ಬನ್ ಪಾರ್ಕ್ ನಡಿಗೆ..?
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಂಬಾಳೆ ಜೊತೆ 5ನೇ ಚಿತ್ರ: ಯಾವ ಸಂಸ್ಥೆ ಜೊತೆ ಪುನೀತ್ ಹೆಚ್ಚು ಸಿನಿಮಾ ಮಾಡಿದ್ದಾರೆ?
'ಯುವರತ್ನ' ಸಿನಿಮಾ ಬಿಡುಗಡೆಗೂ ಮುಂಚೆಯೇ ಪುನೀತ್ ರಾಜ್ ಕುಮಾರ್ ಜೊತೆ ಇನ್ನೊಂದು ಚಿತ್ರ ಮಾಡುವುದಾಗಿ 'ಹೊಂಬಾಳೆ ಫಿಲಂಸ್' ಘೋಷಿಸಿದ್ದರು. ಆ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡರು.
ಸರ್ಪ್ರೈಸ್ ಎಂಬಂತೆ 'ಲೂಸಿಯಾ' ಖ್ಯಾತಿಯ ಪವನ್ ಕುಮಾರ್ ಜೊತೆ ಪುನೀತ್ ಹೊಸ ಸಿನಿಮಾ ಪ್ರಕಟಣೆಯಾಯಿತು. ಈ ಚಿತ್ರಕ್ಕೂ ಹೊಂಬಾಳೆ ಸಂಸ್ಥೆ ಬಂಡವಾಳ ಹಾಕುತ್ತಿರುವುದಾಗಿ ತಿಳಿಸಿದೆ. ಹೀಗೆ, ಸತತವಾಗಿ ಹೊಂಬಾಳೆ ಜೊತೆ ಅಪ್ಪು ಸಿನಿಮಾಗಳನ್ನು ಮಾಡ್ತಿದ್ದಾರೆ.
ಹಾಗ್ನೋಡಿದ್ರೆ, ಪಾರ್ವತಮ್ಮ ರಾಜ್ ಕುಮಾರ್ ಅವರ ಪೂರ್ಣಿಮಾ ಎಂಟರ್ ಪ್ರೈಸಸ್ ಮೂಲಕ ನಾಯಕನಟನಾಗಿ ಜರ್ನಿ ಆರಂಭಿಸಿದ ಅಪ್ಪು ಈ ಸಂಸ್ಥೆ ಬಿಟ್ಟು ಹೊಂಬಾಳೆ ಜೊತೆ ಹೆಚ್ಚು ಒಡನಾಟ ಹೊಂದಿದ್ದಾರೆ. ಹೊಂಬಾಳೆಗೂ ಮುಂಚೆ ಅಪ್ಪು ಪ್ರೀತಿಗೆ ಪಾತ್ರವಾಗಿದ್ದ ನಿರ್ಮಾಣ ಸಂಸ್ಥೆಗಳ ಕಡೆ ಒಂದು ನೋಟ. ಮುಂದೆ ಓದಿ...
'ಲೂಸಿಯಾ' ನಿರ್ದೇಶಕನ ಜೊತೆ ಪುನೀತ್ ಹೊಸ ಸಿನಿಮಾ: ನಿರೀಕ್ಷೆ ಇಮ್ಮಡಿ
ಪೂರ್ಣಿಮಾ ಸಂಸ್ಥೆಯಿಂದ ಅಪ್ಪು ಜರ್ನಿ ಆರಂಭ
ಪಾರ್ವತಮ್ಮ ರಾಜ್ ಕುಮಾರ್ ಅವರ ಪೂರ್ಣಿಮಾ ಎಂಟರ್ ಪ್ರೈಸಸ್ (ವಜ್ರೇಶ್ವರಿ ಕಂಬೈನ್ಸ್) ಅಡಿಯಲ್ಲಿ ಪುನೀತ್ ನಾಯಕನಾಗಿ ನಟಿಸಿದ್ದ ಚೊಚ್ಚಲ ಸಿನಿಮಾ ಅಪ್ಪು ತಯಾರಾಗಿತ್ತು. ಅದಾದ ಬಳಿಕ ಅಭಿ, ಆಕಾಶ್, ಅರಸು, ವಂಶಿ, ಜಾಕಿ, ಹುಡುಗರು, ಅಣ್ಣಾ ಬಾಂಡ್, ಯಾರೇ ಕೂಗಾಡಲಿ ಅಂತಹ ಸಿನಿಮಾಗಳನ್ನು ಈ ಸಂಸ್ಥೆಯಲ್ಲಿ ನಿರ್ಮಾಣ ಆದವು.
ರಾಕ್ಲೈನ್ ಸಂಸ್ಥೆಯಲ್ಲಿ ನಾಲ್ಕು ಚಿತ್ರ
ಪೂರ್ಣಿಮಾ ಎಂಟರ್ ಪ್ರೈಸಸ್ ಬಿಟ್ಟರೆ ಇದುವರೆಗೂ ಪುನೀತ್ ರಾಜ್ ಕುಮಾರ್ ರಾಕ್ಲೈನ್ ಪ್ರೊಡಕ್ಷನ್ನಲ್ಲಿ ಹೆಚ್ಚು ಸಿನಿಮಾ ಮಾಡಿದ್ದಾರೆ. ಮೌರ್ಯ, ಅಜಯ್, ಪವರ್ ಹಾಗೂ ನಟಸಾರ್ವಭೌಮ ಸಿನಿಮಾಗಳಿಗೆ ರಾಕ್ಲೈನ್ ಬಂಡವಾಳ ಹಾಕಿದ್ದರು.
'ಯುವರತ್ನ' ನೋಡಿ ಥ್ರಿಲ್ ಆದ ರಕ್ಷಿತ್ ಶೆಟ್ಟಿ ಹೇಳಿದ್ದು ಒಂದೇ ಮಾತು
ಜಯಣ್ಣ ಕಂಬೈನ್ಸ್ನಲ್ಲಿ ಎರಡು ಸಿನಿಮಾ
ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಪರಮಾತ್ಮ' ಚಿತ್ರಕ್ಕೆ ಜಯಣ್ಣ-ಭೋಗೇಂದ್ರ ಬಂಡವಾಳ ಹಾಕಿದ್ದರು. ಅದಾದ ಬಳಿಕ ಪವನ್ ಒಡೆಯರ್ ನಿರ್ದೇಶನದ 'ರಣ ವಿಕ್ರಮ' ಚಿತ್ರ ಜಯಣ್ಣ ಕಂಬೈನ್ಸ್ ಅಡಿಯಲ್ಲಿ ನಿರ್ಮಾಣವಾಗಿತ್ತು.
Recommended Video
ಹೊಂಬಾಳೆ ಜೊತೆ ಐದನೇ ಚಿತ್ರ
2014ರಲ್ಲಿ 'ನಿನ್ನಿಂದಲೇ' ಚಿತ್ರದ ಮೂಲಕ ಹೊಂಬಾಳೆ ಸಂಸ್ಥೆ ಜೊತೆ ಕೈ ಜೋಡಿಸಿದ ಪುನೀತ್ ರಾಜ್ ಕುಮಾರ್ ನಂತರ ರಾಜಕುಮಾರ ಹಾಗೂ ಯುವರತ್ನ ಸಿನಿಮಾಗಳಲ್ಲಿ ನಟಿಸಿದರು. ಇದಾದ ಬಳಿಕ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಒಂದು ಸಿನಿಮಾ ಹಾಗೂ ಪವನ್ ಕುಮಾರ್ ನಿರ್ದೇಶನದಲ್ಲಿ ಇನ್ನೊಂದು ಚಿತ್ರಕ್ಕೆ ಸಹಿ ಮಾಡಿದ್ದಾರೆ.