Don't Miss!
- Technology WhatsApp: ವಾಟ್ಸಾಪ್ಗೆ ಕೆಲವೇ ದಿನಗಳಲ್ಲಿ ಸೇರಲಿವೆ ಬಹುನಿರೀಕ್ಷಿತ ಈ ಫೀಚರ್ಸ್! ಇವುಗಳಿಂದ ಏನೆಲ್ಲಾ ಲಾಭ?
- News karnataka Rain: ಇಂದಿನಿಂದ ರಾಜ್ಯದಲ್ಲಿ ಜೋರು ಮಳೆ: ಬೆಂಗಳೂರಿನಲ್ಲಿ ಕೆಲವೆಡೆ ಮಾತ್ರ ವರಣ ಕೃಪೆ ತೋರುವ ಸಾಧ್ಯತೆ- ಐಎಂಡಿ ಅಲರ್ಟ್
- Finance ಮೊಮೊಸ್ ಮಾರುವ ಶಾಪ್ನಿಂದ ಜಾಬ್ ಆಫರ್ ಸಖತ್ ವೈರಲ್! ವೇತನವೆಷ್ಟು ಗೊತ್ತಾ?
- Lifestyle ಬೆಂಗಳೂರಲ್ಲಿ ಮರ ತಬ್ಬಿಕೊಳ್ಳಲು ₹1,500 ಶುಲ್ಕ..! ಇದೇನಿದು ಕಬ್ಬನ್ ಪಾರ್ಕ್ ನಡಿಗೆ..?
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೇರಳ ಪ್ರವಾಹ ಪೀಡಿತರ ನೆರವಿಗೆ ನಿಂತ ಪುನೀತ್, ಕಮಲ್, ವಿಜಯ್
Recommended Video
ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಜನರ ಜೀವನ, ಸಂಪರ್ಕ ಅಸ್ತವ್ಯಸ್ತವಾಗಿದೆ. ಇದಕ್ಕಿಂತ ಘೋರ ಮಳೆಗೆ ಬಲಿಯಾಗಿರುವುದು ನೆರೆರಾಜ್ಯ ಕೇರಳ.
ಹೌದು, ಕೇರಳದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಇಡೀ ರಾಜ್ಯ ಪ್ರವಾಹಕ್ಕೆ ಸಿಲುಕಿದೆ. ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ದೇವರನಾಡ ರಕ್ಷಣೆಗೆ ರಾಷ್ಟ್ರದ ಹಲವು ರಾಜ್ಯಗಳು ನೆರವಿಗೆ ಧಾವಿಸಿದ್ದು, ಸಿಎಂ ಫಂಡ್ ಗೆ ಸಹಾಯ ಮಾಡ್ತಿದ್ದಾರೆ.
ಮಲಯಾಳ ಇಂಡಸ್ಟ್ರಿಯ ಸಿನಿತಾರೆಯರ ಜೊತೆಯಲ್ಲಿ ತಮಿಳು, ತೆಲುಗು ಹಾಗೂ ನಮ್ಮ ಕನ್ನಡ ಕಲಾವಿದರು ಕೂಡ ಬೆಂಬಲಕ್ಕೆ ನಿಂತಿದ್ದಾರೆ. ಕಮಲ್ ಹಾಸನ್, ಸೂರ್ಯ, ವಿಜಯ್ ದೇವರಕೊಂಡು ಹಾಗೂ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವರು ಧನ ಸಹಾಯ ಮಾಡಿದ್ದಾರೆ. ಹಾಗಿದ್ರೆ, ಯಾರು ಎಷ್ಟು ಕೊಟ್ಟಿದ್ದಾರೆ ಎಂದು ನೋಡೋಣ. ಮುಂದೆ ಓದಿ.....
5 ಲಕ್ಷ ಕೊಟ್ಟ ಪುನೀತ್
ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೇರಳ ಪ್ರವಾಹ ಪೀಡಿತರ ನೆರವಿಗೆ ನಿಂತಿದ್ದು, 5 ಲಕ್ಷ ರೂಪಾಯಿ ಹಣವನ್ನ ಸಿಎಂ ನಿಧಿಗೆ ನೀಡಿದ್ದಾರೆ ಎಂದು ಪುನೀತ್ ಆಪ್ತರು ತಿಳಿಸಿದ್ದಾರೆ.
5 ಲಕ್ಷ ಕೊಟ್ಟ ವಿಜಯ್ ದೇವರಕೊಂಡ
ತೆಲುಗು ರೈಸಿಂಗ್ ಸ್ಟಾರ್ ವಿಜಯ್ ದೇವರಕೊಂಡ ಅವರು ಕೂಡ ಕೇರಳ ಜನರ ನೆರವಿಗೆ ಬಂದಿದ್ದು, 5 ಲಕ್ಷ ಹಣವನ್ನ ಪ್ರವಾಹ ಪೀಡಿತರ ನಿಧಿಗೆ ನೀಡಿದ್ದಾರೆ. ''ಕೇರಳ ನನಗೆ ಇಷ್ಟವಾದ ಜಾಗ, ಈಗ ಅಲ್ಲಿನ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ಆದಷ್ಟೂ ಬೇಗ ಮೊದಲಿನಿ ಸ್ಥಿತಿಗೆ ಬರಲಿ'' ಎಂದು ವಿಜಯ್ ದೇವರಕೊಂಡ ಕೇಳಿಕೊಂಡಿದ್ದಾರೆ.
25 ಲಕ್ಷ ನೀಡಿದ ಕಮಲ್ ಹಾಸನ್
ಭಾರತದ ಸೂಪರ್ ಸ್ಟಾರ್ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಕೇರಳದ ಸಿಎಂ ನಿಧಿಗೆ 25 ಲಕ್ಷ ನೀಡಿ ನೆರವಾಗಿದ್ದಾರೆ. ಜೊತೆಗೆ ಬಿಗ್ ಬಾಸ್ ಪ್ರಸಾರ ಮಾಡುತ್ತಿರುವ ತಮಿಳಿನ ವಿಜಯ ಟಿವಿ ಕೂಡ 25 ಲಕ್ಷ ನೀಡಿ ಗಮನ ಸೆಳೆದಿದೆ.
ಸೂರ್ಯ-ಕಾರ್ತಿ ಸಹೋದರರು
ಇನ್ನು ದಕ್ಷಿಣ ಭಾರತದ ಖ್ಯಾತ ನಟರು ಹಾಗೂ ಸಹೋದರರು ಸೂರ್ಯ ಮತ್ತು ಕಾರ್ತಿ ತಲಾ 25 ಲಕ್ಷ ನೀಡಿ ಕೇರಳ ಜನರ ಬೆಂಬಲಕ್ಕೆ ನಿಂತಿದ್ದಾರೆ. ಜೊತೆಗೆ ತಮಿಳು ಕಲಾವಿದರ ಸಂಘ 5 ಲಕ್ಷ ಹಣ ನೀಡಿದೆ.
ಅಲ್ಲು ಅರ್ಜುನ್ 25 ಲಕ್ಷ
ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ಕೇರಳದ ಪ್ರವಾಹ ಪೀಡಿತರಿಗಾಗಿ 25 ಲಕ್ಷ ಹಣ ಸಹಾಯ ಮಾಡಿದ್ದಾರೆ. ಇವರಷ್ಟೇ ಅಲ್ಲದೇ ರಜನಿಕಾಂತ್, ಕಮಲ್ ಹಾಸನ್, ವಿಜಯ್, ಅಜಿತ್ ಅಭಿಮಾನಿಗಳ ಸಂಘಗಳು ಕೇರಳ ಜನರ ಬೆಂಬಲಕ್ಕೆ ನಿಂತಿದೆ.
1 ಲಕ್ಷ ನೀಡಿದ ಅನುಪಮಾ
ಇನ್ನು ಸ್ಟಾರ್ ನಟರು ಮಾತ್ರವಲ್ಲದೇ ನಟಿಯರು ಕೂಡ ಕೇರಳ ಜನರ ಸಹಾಯಕ್ಕೆ ನಿಂತಿದ್ದಾರೆ. ಕೇರಳದ ಖ್ಯಾತಿ ನಟಿ ಅನುಪಮಾ ಪರಮೇಶ್ವರನ್ ಅವರು 1 ಲಕ್ಷ ಹಣವನ್ನ ದೇವರನಾಡಿನ ಮಕ್ಕಳಿಗಾಗಿ ನೀಡಿದ್ದಾರೆ.
ಮಲಯಾಳಂ ನಟರ ನೆರವು
ಕೇರಳ ಚಿತ್ರರಂಗ ಸಂಪೂರ್ಣವಾಗಿ ಬೆಂಬಲಕ್ಕೆ ನಿಂತಿದ್ದು, ವೈಯಕ್ತಿಕವಾಗಿ ಹಾಗೂ ಸಂಘಟನೆಗಳ ಪರವಾಗಿ ನೆರವಾಗುತ್ತಿದ್ದಾರೆ. ಮಲಯಾಳಂ ಕಲಾವಿದರ ಸಂಘ 10 ಲಕ್ಷ, ಮೊಮ್ಮಟಿ 15 ಲಕ್ಷ, ದುಲ್ಕರ್ ಸಲ್ಮಾನ್ 10 ಲಕ್ಷ, ಮೋಹನ್ ಲಾಲ್ 25 ಲಕ್ಷ ಸೇರಿದಂತೆ ಇನ್ನು ಹಲವರು ಸಿಎಂ ನಿಧಿಗೆ ಹಣ ನೀಡಿದ್ದಾರೆ.