Don't Miss!
- News 7th pay commission: ತುಟ್ಟಿ ಭತ್ಯೆ, ನಗರ ಪರಿಹಾರ ಭತ್ಯೆ, ಸೇವಾ ಭತ್ಯೆ ಸೇರಿದಂತೆ ಭತ್ಯೆಗಳ ಸಂಪೂರ್ಣ ವಿವರ
- Sports RCB VS KKR: ಟಾಸ್ ಗೆದ್ದ ಕೆಕೆಆರ್ ಫೀಲ್ಡೀಂಗ್ ಆಯ್ಕೆ: ಆರ್ಸಿಬಿ ತಂಡದಲ್ಲಿ ಇಲ್ಲ ಬದಲಾವಣೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಡಪ್ರಭು 'ಕೆಂಪೇಗೌಡ' ಆದ ಪುನೀತ್ ರಾಜ್ ಕುಮಾರ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಾಲನಟನಾಗಿ ಪೌರಾಣಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಆದ್ರೆ, ನಾಯಕನಟನಾದ ಮೇಲೆ ಅಂತಹ ಪಾತ್ರದಲ್ಲಿ ನಟಿಸಿಲ್ಲ. ಪುನೀತ್ ಅವರನ್ನ ಪೌರಾಣಿಕ ಹಾಗೂ ಐತಿಹಾಸಿಕ ಗೆಟಪ್ ನಲ್ಲಿ ನೋಡಬೇಕು ಎಂಬ ಆಸೆ ಅಭಿಮಾನಿಗಳಲ್ಲಿ ಕಾಡುವುದು ಸಹಜ.
ಇಂತಹ ಆಸೆಯೊಂದು ಈಗ ನೆರವೇರಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಡಪ್ರಭು ಕೆಂಪೇಗೌಡ ಅವರ ಪಾತ್ರದಲ್ಲಿ ಕಂಗೊಳಿಸಿದ್ದಾರೆ. ಹೌದು, ಜಾಹೀರಾತು ಒಂದರಲ್ಲಿ ಕೆಂಪೇಗೌಡ ಪಾತ್ರವಿದ್ದು, ಅದನ್ನ ಅಪ್ಪು ನಿಭಾಯಿಸಿದ್ದಾರೆ.
ಪುನೀತ್ ಜೊತೆಯಾದ ಸೌತ್ ಸುಂದರಿ ತಮನ್ನಾ
ಕೇವಲ ಪುನೀತ್ ಮಾತ್ರವಲ್ಲದೇ, ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾ ಕೂಡ ಈ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಪೋತಿಸ್ ಎಂಬ ಬಟ್ಟೆ ಮಳಿಗೆಯ ಬಗ್ಗೆ ಈ ಜಾಹೀರಾತು ಮೂಡಿ ಬಂದಿದೆ.
'ರಣವಿಕ್ರಮ' ಸಿನಿಮಾದ ಹಾಡೊಂದರಲ್ಲಿ ಅಪ್ಪು ಪೌರಾಣಿಕ ಪಾತ್ರದ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದರು. ಅಭಿಮಾನಿಗಳು ಪುನೀತ್ ಹೊಸ ಗೆಟಪ್ ನೋಡಿ ಮೆಚ್ಚಿಕೊಂಡಿದ್ದರು. ಬಹುಶಃ ಮುಂದಿನ ದಿನಗಳಲ್ಲಿ ಅಭಿಮಾನಿಗಳ ಬಯಕೆ ಈಡೇರಿದರು ಅಚ್ಚರಿಯಿಲ್ಲ.