Don't Miss!
- News Heavy Rain: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು: ಸಿಡಿಲು ಬಡಿದು 25 ಮೇಕೆಗಳ ಸಾವು
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Sports ಟಿ20 ವಿಶ್ವಕಪ್ 2024: ಟೀಮ್ ಇಂಡಿಯಾಗೆ ದೊಡ್ಡ ಚಿಂತೆಯಾದ ಈ ಆರಂಭಿಕನ ಫಾರ್ಮ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನೀವು ನನ್ನ ಸಿನಿಮಾದಲ್ಲಿ ನಟಿಸಿ' ಎಂದು ಪುನೀತ್ ಆಫರ್ ಕೊಟ್ಟಿದ್ದು ಯಾರಿಗೆ.?
Recommended Video
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈಗ ಬರೀ ನಟ ಮಾತ್ರ ಅಲ್ಲ.. ನಿರ್ಮಾಪಕ ಕೂಡ ಹೌದು. ಪಿ.ಆರ್.ಕೆ ಪ್ರೊಡಕ್ಷನ್ಸ್ ಮೂಲಕ 'ಕವಲುದಾರಿ' ಚಿತ್ರವನ್ನ ನಿರ್ಮಾಣ ಮಾಡಿದ ಪುನೀತ್ ಸದ್ಯ 'ಮಾಯಾ ಬಜಾರ್' ಮತ್ತು 'ಲಾ' ಪ್ರಾಜೆಕ್ಟ್ ಗಳ ಮೇಲೆ ಗಮನ ಹರಿಸಿದ್ದಾರೆ.
ಪಿ.ಆರ್.ಕೆ ಪ್ರೊಡಕ್ಷನ್ಸ್ ಮೂಲಕ ಕನ್ನಡದ ಯುವ ಪ್ರತಿಭಾವಂತರಿಗೆ ಪುನೀತ್ ಮಣೆ ಹಾಕುತ್ತಿದ್ದಾರೆ. ಹೀಗಿರುವಾಗಲೇ, ''ನೀವು ನನ್ನ ಸಿನಿಮಾದಲ್ಲಿ ನಟಿಸಿ'' ಎಂದು ಪ್ರಖ್ಯಾತ ನಟರೊಬ್ಬರಿಗೆ ಪುನೀತ್ ರಾಜ್ ಕುಮಾರ್ ಆಫರ್ ಕೊಟ್ಟಿದ್ದಾರೆ. ಯಾರಪ್ಪಾ ಅದು ಅಂದ್ರೆ.. 'ತುಳುನಾಡ ಮಾಣಿಕ್ಯ' ಎಂದು ಪ್ರಖ್ಯಾತಿ ಪಡೆದಿರುವ ಅರವಿಂದ ಬೋಳಾರ್.
ಹೌದು, ತುಳು ಚಿತ್ರರಂಗದ ಬಹು ಬೇಡಿಕೆಯ ನಟ ಅರವಿಂದ ಬೋಳಾರ್ ಗೆ ''ನನ್ನ ಸಿನಿಮಾದಲ್ಲಿ ನಟಿಸಿ'' ಎಂದು ಪುನೀತ್ ರಾಜ್ ಕುಮಾರ್ ಬಹಿರಂಗ ಆಹ್ವಾನ ಕೊಟ್ಟಿದ್ದಾರೆ.
ಕತಾರ್ ನಲ್ಲಿ ಪುನೀತ್ ರಾಜ್ ಕುಮಾರ್ ಗೆ ಸಿಕ್ಕಿದೆ ಹೊಸ ಬಿರುದು
ಇತ್ತೀಚೆಗಷ್ಟೇ ನಡೆದ ಕಾರ್ಯಕ್ರಮವೊಂದರಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ಅರವಿಂದ ಬೋಳಾರ್ ವೇದಿಕೆ ಹಂಚಿಕೊಂಡಿದ್ದರು. ಇದೇ ಸಮಯದಲ್ಲಿ ಅರವಿಂದ ಬೋಳಾರ್ ಗೆ ತಮ್ಮ ಕನ್ನಡ ಸಿನಿಮಾದಲ್ಲಿ ನಟಿಸುವಂತೆ ಪುನೀತ್ ಕೋರಿದರು. ಅಪ್ಪು ಕೋರಿಕೆಯ ಮೇರೆಗೆ 'ತುಳುನಾಡ ಮಾಣಿಕ್ಯ' ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟರೂ ಆಶ್ಚರ್ಯ ಇಲ್ಲ.
'ರಾಮಾ ರಾಮಾ ರೇ' ಸತ್ಯ ಪ್ರಕಾಶ್ ಸಿನಿಮಾಗೆ ಪವರ್ ಸ್ಟಾರ್ ನಾಯಕ?
ಅಂದ್ಹಾಗೆ, ಅಪ್ಪು ಸದ್ಯಕ್ಕೆ 'ಯುವರತ್ನ' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಿದ್ದಾರೆ. ನಟನೆಯ ಜೊತೆಗೆ ನಿರ್ಮಾಣದಲ್ಲೂ ಪುನೀತ್ ರಾಜ್ ಕುಮಾರ್ ತೊಡಗಿದ್ದಾರೆ.