Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುನೀತ್ ರಾಜ್ಕುಮಾರ್ ಮಾಡುತ್ತಿರುವ ಈ ಕಾರ್ಯ ಎಲ್ಲ ನಟರಿಗೂ ಮಾದರಿ
ಪುನೀತ್ ರಾಜ್ಕುಮಾರ್ ನಟನೆಯಿಂದ ಮಾತ್ರವಲ್ಲ ತಮ್ಮ ಸಾಮಾಜಿಕ ಕಳಕಳಿಯಿಂದಲೂ ಪರಿಚಿತರು. ತಮ್ಮ ತಾಯಿ-ತಂದೆಯ ಹೆಸರಿನಲ್ಲಿ ಈಗಾಗಲೇ ಅನೇಕ ಸಾಮಾಜ ಸೇವೆಗಳನ್ನು ಅವರು ಮಾಡಿದ್ದಾರೆ.
ಪುನೀತ್ ರಾಜ್ ಕುಮಾರ್ ಇದೀಗ ಹೊಸ ಸಾಮಾಜಿಕ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ರೈತರನ್ನು ಉಳಿಸಲು ಮಾಡುತ್ತಿರುವ ಪ್ರಯತ್ನಕ್ಕೆ ಪುನೀತ್ ರಾಜ್ಕುಮಾರ್ ಬೆನ್ನೆಲುಬಾಗಿ ನಿಂತಿದ್ದಾರೆ.
ರೈತರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಲೆಂದು ಪ್ರಾರಂಭಿಸಲಾಗಿರುವ 'ಫೀಡ್ ಯುವರ್ ಫಾರ್ಮರ್' ಕಾರ್ಯದಲ್ಲಿ ಪುನೀತ್ ರಾಜ್ಕುಮಾರ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ರೈತರಿಗೆ ನೆರವಾಗಲು 'ಫೀಡ್ ಯುವರ್ ಫಾರ್ಮರ್'
ಶ್ರೀವತ್ಸ ವಾಜಪೇಯಿ ಎನ್ನುವರು ಪ್ರಾರಂಭಿಸುತ್ತಿರುವ 'ಫೀಡ್ ಯುವರ್ ಫಾರ್ಮರ್' ರಾಜ್ಯದ ರೈತರ ಅಭಿವೃದ್ಧಿಯ ದೃಷ್ಟಿಯಿಂದ ಮಾಡಲಾಗುತ್ತಿರುವ ಸೇವಾ ಕಾರ್ಯಕ್ರಮ ಆಗಿದ್ದು, ಕೆಲವೇ ದಿನಗಳಲ್ಲಿ ದೊಡ್ಡದಾಗಿ ಲೋಕಾರ್ಪಣೆ ಆಗಲಿದೆ.
ನಗರ ವಾಸಿಗಳು ರೈತರ ಸಹಾಯ ಮಾಡುವ ಯೋಜನೆ
ಹಳ್ಳಿಯಿಂದ ನಗರಕ್ಕೆ ಬಂದು ಸೆಟಲ್ ಆಗಿರುವವರು ತಾವು ಗಳಿಸಿದ ದುಡ್ಡಿನಲ್ಲಿ ಸ್ವಲ್ಪ ಹಣವನ್ನು ರೈತರ ಹಿತಕ್ಕಾಗಿ ನೀಡುವ ಯೋಜನೆ ಇದಾಗಿದ್ದು, ವಾಜಪೇಯಿ ಫೌಂಡೇಶನ್ಸ್ ಮೂಲಕ ಈ ಕಾರ್ಯಕ್ರಮ ಅನುಷ್ಠಾನವಾಗಲಿದೆ.
ಪುನೀತ್ ರಾಜ್ಕುಮಾರ್ ರಾಯಭಾರಿ
ಈ ಕಾರ್ಯಕ್ರಮದ ಸಂಸ್ಥಾಪಕ ಶ್ರೀವತ್ಸ ವಾಜಪೇಯಿ ಆಗಿದ್ದು, ಪುನೀತ್ ರಾಜ್ಕುಮಾರ್ ಅವರು ಕಾರ್ಯಕ್ರಮದ ರಾಯಭಾರಿ ಆಗಿರಲಿದ್ದಾರೆ. ಈ ಕಾರ್ಯಕ್ರಮದ ಹಿಂದೆ ಹಲವು ಯುವಕರು ಶ್ರಮವಿದೆ.
ಶಿವಣ್ಣ ಸಹ ಮೆಚ್ಚುಗೆಯ ಮಾತನ್ನಾಡಿದ್ದಾರೆ
ಪುನೀತ್ ರಾಜ್ಕುಮಾರ್ ಮಾತ್ರವಲ್ಲದೆ ಇನ್ನೂ ಕೆಲವು ಸಿನಿಮಂದಿ ಈ ಉತ್ತಮ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಬಿ.ಸುರೇಶ್, ಸಿಹಿ-ಕಹಿ ಚಂದ್ರು, ಕೆ.ಕಲ್ಯಾಣ್ ಸೇರಿದಂತೆ ಇನ್ನೂ ಹಲವರು ಇದರಲ್ಲಿ ತೊಡಿಗಿಸಿಕೊಂಡಿದ್ದಾರೆ. ಶಿವಣ್ಣ ಸಹ 'ಫೀಡ್ ಯುವರ್ ಫಾರ್ಮರ್' ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ.
ಪುನೀತ್ ಮಾಡುತ್ತಿರುವ ಸಮಾಜ ಸೇವೆಗಳು
ಮಕ್ಕಳಿಗೆ ಉಚಿತ ಶಿಕ್ಷಣ, ಉನ್ನತ ವ್ಯಾಸಂಗ ಮಾಡುವವರಿಗೆ ಶಿಕ್ಷಣ ಸಹಾಯ, ರೈತಪರ ಹೋರಾಟ, ಅನಾಥಾಶ್ರಮಗಳಿಗೆ ಧನ ಸಹಾಯ, ಸಾವಿರಾರು ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣೆ, ಹೀಗೆ ಹಲವು ರಾಜ್ಕುಮಾರ್ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಸಮಾಜಸೇವೆಯನ್ನು ಮಾಡುತ್ತಿದ್ದಾರೆ.