Don't Miss!
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- News Bride Kidnap Video: ವರನ ಕಣ್ಣಿಗೆ ಮೆಣಸಿನ ಪುಡಿ ಹಾಕಿ ವಧುವಿನ ಅಪಹರಣಕ್ಕೆ ಯತ್ನ: ವಿಡಿಯೋ
- Technology Airtel: ಏರ್ಟೆಲ್ನಿಂದ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್ಗಳು! ಇವು ಹೇಗೆಲ್ಲಾ ಅನುಕೂಲ?
- Lifestyle ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- Finance Bangalore Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಾವು-ಬದುಕಿನ ಹೋರಾಟದಲ್ಲಿರುವ ಕಂದಮ್ಮನ ಆಸೆ ಈಡೇರಿಸಿದ 'ರಾಜಕುಮಾರ'
''ಪ್ಲೀಸ್ ಅಪ್ಪು ಸರ್ ನಿಮ್ಮನ್ನ ನೋಡ್ಬೇಕು, ಆಸೆ ಆಗ್ತಿದೆ.......'' ಇದು ದಾವಣೆಗೆರೆಯ ಪುಟ್ಟ ಬಾಲಕಿ ಪ್ರೀತಿಯ ಅಭಿಮಾನದ ಕೂಗು. ಬಾಲಕಿ ಪ್ರೀತಿ ಎರಡು ಕಿಡ್ನಿ ವೈಫಲ್ಯದಿಂದ ಬಳುತ್ತಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ವಾರಕ್ಕೆರಡು ಬಾರಿ ಡಯಾಲಿಸಿಸ್ ಮಾಡಿದರೆ ಜೀವಂತವಾಗಿಡಬಹುದು. ಆದರೆ ದುಬಾರಿ ಚಿಕಿತ್ಸೆಗೆ ದುಡ್ಡಿಲ್ಲದೆ, ಡಯಾಲಿಸಿಸ್'ಗೂ ದುಡ್ಡಿಲ್ಲದೆ ಪರದಾಡುವಷ್ಟು ಬಡ ಕುಟುಂಬ. ಇಂತಹ ಸ್ಥಿತಿಯಲ್ಲಿರುವ ಪ್ರೀತಿಗೆ ಪುನೀತ್ ರಾಜ್ ಕುಮಾರ್ ಅಂದ್ರೆ ಹುಚ್ಚು ಅಭಿಮಾನ. ಪುನೀತ್ ಅವರನ್ನ ನೋಡಬೇಕು, ಅವರ ಜೊತೆ ಮಾತನಾಡಬೇಕು ಎಂಬ ಮಹಾದಾಸೆ.
ಈ ಆಸೆಯನ್ನ ರಾಜರತ್ನ ಪುನೀತ್ ರಾಜ್ ಕುಮಾರ್ ಈಡೇರಿಸಿದ್ದಾರೆ. ಮುಂದೆ ಓದಿ.....
ಅಭಿಮಾನಿಯ ಆಸೆ ಈಡೇರಿಸಿದ ಅಪ್ಪು!
ಎರಡು ಕಿಡ್ನಿ ವೈಫಲ್ಯದಿಂದ ಬಳುತ್ತಿರುವ ಪ್ರೀತಿಯ ಆಸೆಯನ್ನ ಪುನೀತ್ ರಾಜ್ ಕುಮಾರ್ ನೆರೆವೇರಿಸಿದ್ದಾರೆ. ''ಅಪ್ಪು ಸರ್ ನ ನೋಡ್ಬೇಕು'' ಎಂಬ ಆಸೆಯಿಂದ ಕಾಯುತ್ತಿದ್ದ ಬಾಲಕಿ ಪ್ರೀತಿಯ ಅಭಿಮಾನಕ್ಕೆ ಪುನೀತ್ ಅವರ ಹೃದಯ ಮಿಡಿದಿದೆ. ಪ್ರೀತಿಯನ್ನ ಅಪ್ಪು ಭೇಟಿ ಮಾಡಿದ್ದಾರೆ.
'ಪ್ರೀತಿ'ಯನ್ನ ಭೇಟಿ ಮಾಡಿದ ಪುನೀತ್!
ಪುಟ್ಟ ಬಾಲಕಿ ಪ್ರೀತಿಯ ಅಭಿಮಾನಕ್ಕೆ ಮಿಡಿದ ಪುನೀತ್ ರಾಜ್ ಕುಮಾರ್ ಅವರು, 'ಅಂಜನಿಪುತ್ರ' ಚಿತ್ರದ ಶೂಟಿಂಗ್ ಸ್ಪಾಟ್ ಗೆ ಬಾಲಕಿ ಪ್ರೀತಿಯನ್ನ ಕರೆಸಿಕೊಂಡು ಆರೋಗ್ಯ ವಿಚಾರಿಸಿದ್ದಾರೆ. ಅಷ್ಟೇ ಅಲ್ಲದೇ ಪ್ರೀತಿಯ ಆರೋಗ್ಯ ವೆಚ್ಚವನ್ನ ಭರಿಸುವುದಾಗಿ ಭರವಸೆ ನೀಡಿದ್ದಾರೆ.
ಪುನೀತ್ ಅಭಿಮಾನಿ 'ಪ್ರೀತಿ' ಯಾರು?
ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಕುಮಾರ್ ಮತ್ತು ಮಂಜುಳಾ ಎಂಬ ಬಡ ದಂಪತಿಯ ಇಬ್ಬರು ಹೆಣ್ಣು ಮಕ್ಕಳ ಪೈಕಿ ಪ್ರೀತಿ ಕಿರಿಯವಳು. ಪ್ರೀತಿಗೆ ಎರಡು ಕಿಡ್ನಿ ವಿಫಲವಾಗಿವೆ. ಚಿಕಿತ್ಸೆಗೆ ಕೊಡಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದೆ ಈ ಪುಟ್ಟು ಕಂದಮ್ಮ.
ಪುನೀತ್ ಅಂದ್ರೆ ಅಚ್ಚು-ಮೆಚ್ಚು!
ಪ್ರೀತಿಗೆ ನಟ ಪುನೀತ್ ರಾಜ್ ಕುಮಾರ್ ಅಂದ್ರೆ ಅಚ್ಚು-ಮೆಚ್ಚು. ಪುನೀತ್ ಅವರ ಡ್ಯಾನ್ಸ್, ಅವರ ಸಿನಿಮಾಗಳು ಅಂದ್ರೆ ತುಂಬಾ ಇಷ್ಟ. ಪುನೀತ್ ಅವರು ಬಾಲನಟನಾಗಿ ಅಭಿನಯಿಸಿರುವ ಚಿತ್ರಗಳನ್ನ ನೋಡಿ ಮೆಚ್ಚಿಕೊಂಡಿರುವ ಪ್ರೀತಿಗೆ, ಪುನೀತ್ ಅವರನ್ನ ನೋಡಬೇಕು ಎಂಬ ಆಸೆಯಿತ್ತು.
ಅಭಿಮಾನಕ್ಕೆ ಮಿಡಿದಿತ್ತು ಶಿವಣ್ಣನ ಹೃದಯ!
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮೈಸೂರು ಮೂಲದ ಜಯಕುಮಾರ್ ಎಂಬ ಅಭಿಮಾನಿಯೂ ಶಿವಣ್ಣನನ್ನ ನೋಡಬೇಕು ಎಂದು ಆಸೆಯನ್ನ ವ್ಯಕ್ತಪಡಿಸಿದ್ದರು. ಈ ಅಭಿಮಾನಿಯ ಅಭಿಮಾನಕ್ಕೆ ಮಿಡಿದ ಶಿವಣ್ಣ, ಮೈಸೂರಿನಿಂದ ಬೆಂಗಳೂರಿಗೆ ವಿಶೇಷ ಆಂಬುಲೆನ್ಸ್ ಮೂಲಕ ಜಯಕುಮಾರ್ ಅವರನ್ನ ಕರೆಸಿಕೊಂಡು ತಮ್ಮಿಂದ ಆಗುವ ಸಹಾಯವನ್ನ ನಾವು ಮಾಡುತ್ತೇವೆ ಎಂದು ಸಾಂತ್ವನ ಹೇಳಿದ್ದರು.[ಅಭಿಮಾನಿಯ ಅಭಿಮಾನಕ್ಕೆ ಮಿಡಿದ ಶಿವರಾಜ್ ಕುಮಾರ್ ಹೃದಯ]