Don't Miss!
- News Kotak Mahindra Bank: ಕೋಟಕ್ ಮಹಿಂದ್ರಾ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಗ್ರಾಹಕರ ಮೇಲೆ ಪರಿಣಾಮಗಳೇನು?
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರಮಂದಿರಗಳಲ್ಲಿ ಮತ್ತೆ 50 ಪರ್ಸೆಂಟ್: ಪುನೀತ್ ರಾಜ್ ಕುಮಾರ್ ವಿರೋಧ
ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಚಿತ್ರಮಂದಿರಗಳಿಗೆ ನೀಡಲಾಗಿದ್ದ 100 ಪರ್ಸೆಂಟ್ ಆಸನ ಭರ್ತಿ ಆದೇಶವನ್ನು ಹಿಂಪಡೆಯಲಾಗಿದೆ. ಇಂದಿನಿಂದ ಜಾರಿ ಬರುವಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ 50 ಪರ್ಸೆಂಟ್ ನಿಯಮ ಪಾಲಿಸಬೇಕು ಎಂದು ಹೊಸ ಮಾರ್ಗಸೂಚಿ ಹೊರಡಿಸಿದೆ.
ಸರ್ಕಾರದ ಈ ನಿರ್ಧಾರಕ್ಕೆ ನಟ ಪುನೀತ್ ರಾಜ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಫೇಸ್ಬುಕ್ ಲೈವ್ ಬಂದಿದ್ದ ಪವರ್ ಸ್ಟಾರ್ ''ಸರ್ಕಾರ ಈ ನಿರ್ಧಾರ ಮಾಡಿದ್ದು ತಪ್ಪು, ಚಿತ್ರರಂಗಕ್ಕೆ ಈ ಆದೇಶದಿಂದ ತೊಂದರೆಯಾಗಲಿದೆ. ನಮಗೆ 100 ಪರ್ಸೆಂಟ್ ಅವಕಾಶ ಬೇಕು'' ಎಂದು ಆಗ್ರಹಿಸಿದ್ದಾರೆ.
ಸರ್ಕಾರದ ಹೊಸ ಮಾರ್ಗಸೂಚಿಯಂತೆ ಬಿಬಿಎಂಪಿ ವ್ಯಾಪ್ತಿಯ ಚಿತ್ರಮಂದಿರಗಳು, ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಚಿತ್ರಮಂದಿರಗಳು, ಮೈಸೂರು, ಕಲಬುರ್ಗಿ, ದಕ್ಷಿಣ ಕನ್ನಡ, ಉಡುಪಿ, ಧಾರಾವಾಡ ಜಿಲ್ಲೆಗಳ ಚಿತ್ರಮಂದಿರಗಳಲ್ಲಿ 50 ಪರ್ಸೆಂಟ್ಗೆ ಇಳಿಕೆ ಮಾಡಲಾಗಿದೆ. ಮುಂದೆ ಓದಿ...
ತುಂಬಾ ಅನ್ಯಾಯವಾಗುತ್ತೆ
''ಜನರು ಎಲ್ಲ ಕಡೆಯೂ ಮುಂಜಾಗ್ರತೆ ವಹಿಸಿ ಸಿನಿಮಾ ನೋಡ್ತಿದ್ದಾರೆ. ಎಲ್ಲರು ನಿಯಮ ಪಾಲನೆ ಮಾಡ್ತಿದ್ದಾರೆ. ಹಾಗಾಗಿ, 50 ಪರ್ಸೆಂಟ್ ನಿರ್ಧಾರ ಸರಿಯಲ್ಲ. ನಮಗೆ ತುಂಬಾ ಅನ್ಯಾಯವಾಗುತ್ತೆ'' ಎಂದು ಪುನೀತ್ ಖಂಡಿಸಿದ್ದಾರೆ.
ನಮಗೆ ಆಘಾತ ಮಾಡಬೇಡಿ
ಇದೇ ವೇಳೆ ಮಾತನಾಡಿದ ಯುವರತ್ನ ಸಿನಿಮಾ ನಿರ್ದೇಶಕ ಸಂತೋಷ್ ಆನಂದ್ ರಾಮ್ ''ನಮ್ಮ ಸಿನಿಮಾ ಬಹಳ ಚೆನ್ನಾಗಿ ಪ್ರದರ್ಶನ ಕಾಣ್ತಿದೆ. ಕುಟುಂಬ ಸಮೇತ ಜನರು ಥಿಯೇಟರ್ಗೆ ಬರ್ತಿದ್ದಾರೆ. ಅವರೆಲ್ಲರೂ ಸುರಕ್ಷಿತೆ ವಹಿಸಿದ್ದಾರೆ. ಈಗ ಸರ್ಕಾರ 50 ಪರ್ಸೆಂಟ್ ಮಾಡಿದ್ರೆ ನಮಗೆ ಬಹಳ ದೊಡ್ಡ ನಷ್ಟ ಆಗುತ್ತದೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮಗೆ ಮಾತ್ರ ಏಕೆ ಕಡಿವಾಣ?
''ಎಲ್ಲ ಕಡೆಯೂ ಜನ ಸೇರುತ್ತಿದ್ದಾರೆ. ಚುನಾವಣೆ ಸಭೆ ನಡೆಯುತ್ತಿದೆ. ಬರಿ ಸಿನಿಮಾ ಥಿಯೇಟರ್ಗೆ ಮಾತ್ರ ಕಡಿವಾಣ ಹಾಕಲಾಗುತ್ತಿದೆ. ಇದು ಸೂಕ್ತ ನಿರ್ಧಾರವಲ್ಲ'' ಎಂದು ಸಂತೋಷ್ ಆನಂದ್ ರಾಮ್ ಕಿಡಿಕಾರಿದ್ದಾರೆ.
Recommended Video
ನಿರ್ಮಾಪಕರು ಎಲ್ಲಿಗೆ ಹೋಗಬೇಕು
''ಯಾವುದೇ ಸುಳಿವು ನೀಡದೆ, ನಮಗೆ ಮಾಹಿತಿ ನೀಡದೆ ಏಕಾಏಕಿ ಈ ನಿರ್ಧಾರ ಪ್ರಕಟಿಸಿದರೆ, ನಮ್ಮ ಕಥೆ ಏನಾಗಬೇಕು. ನಿನ್ನೆ ನಮ್ಮ ಸಿನಿಮಾ ಬಿಡುಗಡೆಯಾಗಿದೆ. ನಿರ್ಮಾಪಕರು ಎಲ್ಲಿಗೆ ಹೋಗಬೇಕು. ಸಿನಿಮಾ ನಂಬಿದವರು ಪರಿಸ್ಥಿತಿ ಏನು'' ಎಂದು ನಿರ್ದೇಶಕ ಸಂತೋಷ್ ಅಸಮಾಧಾನಗೊಂಡಿದ್ದಾರೆ.