Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಡುಪಿಯಲ್ಲಿ ಯೋಧರ ತ್ಯಾಗ ನೆನೆದ ನಟ ಪುನೀತ್
ಭಾರತದ 49 ಯೋಧರು ಪುಲ್ವಾಮಾ ದಾಳಿಗೆ ಬಲಿಯಾಗಿದ್ದಾರೆ. ಉಗ್ರರ ದಾಳಿಯಿಂದ ನಿಧನರಾದ ಯೋಧರು ಭಾರತಾಂಬೆಯ ಅಮರ ಮಕ್ಕಳಾಗಿದ್ದಾರೆ. ಈ ಪೈಕಿ ಕರ್ನಾಟಕದ ಯೋಧ ಗುರು ಪಾರ್ಥಿವ ಶರೀರ ಮಂಡ್ಯವನ್ನು ತಲುಪುತ್ತಿದೆ.
ನಟ ಪುನೀತ್ ರಾಜ್ ಕುಮಾರ್ ಇದೀಗ ಪುಲ್ವಾಮಾ ದಾಳಿಯ ಬಗ್ಗೆ ಮಾತನಾಡಿದ್ದಾರೆ. ಇಂದು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ್ದ ವೇಳೆ ಪುನೀತ್ ಈ ಬಗ್ಗೆ ಹೇಳಿಕೆ ನೀಡಿದರು.
ಪುಲ್ವಾಮಾ ದಾಳಿ ನಡೆಸಿದ ರಣಹೇಡಿ ಉಗ್ರನ ಬಗ್ಗೆ ಪಾಲಕರು ಹೇಳೋದೇನು?
''ನಮಗೋಸ್ಕರ ಅವರು ಗಡಿ ಭಾಗದಲ್ಲಿ ನಿಂತು ಕಷ್ಟ ಪಡುತ್ತಾರೆ. ಅಲ್ಲಿ ಭಾಗಿಯಾದ ಎಲ್ಲರೂ ಭಾರತೀಯರು. ನಾನು ಅವರ ಬಗ್ಗೆ ಏನು ಮಾತನಾಡಿದರು ಕಡಿಮೆ ಆಗುತ್ತದೆ. ನಾವು ಅವರಿಗೆ ಏನು ಮಾಡಿದರೂ ಅದು ಕಡಿಮೆಯೇ. ಇದು ನಮ್ಮ ಪಾಲಿಗೆ ಕರಾಳ ದಿನ'' ಎಂದು ಯೋಧರ ಕಾರ್ಯವನ್ನು ನೆನೆದಿದ್ದಾರೆ. ಇನ್ನು ದಾಳಿ ನಡೆದ ದಿನ ಪುನೀತ್ ರಾಜ್ ಕುಮಾರ್ ಟ್ವಿಟ್ಟರ್ ಮೂಲಕ ಯೋಧರಿಗೆ ಸೆಲ್ಯೂಟ್ ಹೊಡೆದಿದ್ದರು.
ಅಂದಹಾಗೆ, ಪುನೀತ್ ಸದ್ಯ ತಮ್ಮ 'ಯುವರತ್ನ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಶೂಟಿಂಗ್ ಕೆಲಸಗಳ ನಡುವೆ ಉಡುಪಿಗೆ ಭೇಡಿ ನೀಡಿ ಕೃಷ್ಣನ ದರ್ಶನ ಪಡೆದುಕೊಂಡು ಹೋಗಿದ್ದಾರೆ.
Wish you a very happy birthday Darshan..@dasadarshan 👍
— Puneeth Rajkumar (@PuneethRajkumar) February 16, 2019
ಇಂದು
ನಟ
ದರ್ಶನ್
ಹುಟ್ಟುಹಬ್ಬವಿದ್ದು,
ಪುನೀತ್
ಸಹ
ತಮ್ಮ
ಟ್ವಿಟ್ಟರ್
ಖಾತೆಯಲ್ಲಿ
ಶುಭಾಶಯ
ತಿಳಿಸಿದ್ದಾರೆ.