Don't Miss!
- News ಎಸ್ಸಿ, ಎಸ್ಟಿ ಮೀಸಲಾತಿ ಮುಸ್ಲಿಮರಿಗೆ ಹಂಚಿಕೆ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಲ್ಲಿ ಎರಡು ಮನವಿ ಮಾಡಿದ ಪುನೀತ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಇನ್ನೆರಡು ದಿನ ಮಾತ್ರ ಬಾಕಿಯಿದೆ. 'ದೊಡ್ಮನೆ ಹುಡ್ಗ'ನ ಉತ್ಸವಕ್ಕೆ ಈಗಾಗಲೇ ಅಭಿಮಾನಿಗಳು ಚಾಲನೆ ನೀಡಿದ್ದು, ಜೋರಾಗಿ ತಯಾರಿ ನಡೆಯುತ್ತಿದೆ. ನೆಚ್ಚಿನ ನಟನನ್ನ ನೋಡಿ ಶುಭಕೋರಬೇಕು ಎಂದು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯ್ತಿದ್ದಾರೆ.
ಪವರ್ ಸ್ಟಾರ್ ಹುಟ್ಟುಹಬ್ಬ ಅಂದ್ರೆ ಪ್ರತಿವರ್ಷ ಮಧ್ಯರಾತ್ರಿಯಿಂದಲೇ ದೂರದ ಊರುಗಳಿಂದ ಬರುವ ಅಭಿಮಾನಿಗಳು ಬ್ಯಾನರ್, ಫೋಟೋ, ಕೇಕ್, ಹಾರ, ಹೂ ಗುಚ್ಚಗಳನ್ನು ಹಿಡಿದು ಪುನೀತ್ ಮನೆಮುಂದೆ ಕ್ಯೂ ನಿಲ್ತಾರೆ. ತಾವು ತಂದ ಉಡುಗೊರೆಗಳನ್ನು ನೀಡಿ ಸಂತಸ ಪಡುತ್ತಾರೆ. ಆದ್ರೆ, ಈ ವರ್ಷ ಪುನೀತ್ ಅಭಿಮಾನಿಗಳಲ್ಲಿ ಎರಡು ಮನವಿ ಮಾಡಿಕೊಂಡಿದ್ದಾರೆ.
ಪುನೀತ್ ಹುಟ್ಟುಹಬ್ಬಕ್ಕೆ ಕಾದಿವೆ ನಾಲ್ಕು ಉಡುಗೊರೆಗಳು, ಏನವು?
ಅದೇನೆಂದರೇ, 'ಪವರ್ ಸ್ಟಾರ್ ತಮ್ಮ ಹುಟ್ಟುಹಬ್ಬದ ದಿನದ (ಮಾರ್ಚ್ 16) ರಾತ್ರಿ ಮನೆಯಲ್ಲಿ ಇರುವುದಿಲ್ಲವಂತೆ. ಹಾಗಾಗಿ ರಾತ್ರಿಯಿಂದಲೇ ಮನೆ ಮುಂದೆ ನಿಂತು ನನಗಾಗಿ ಕಾಯಬೇಡಿ' ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಪ್ಪು ಅವರ ಈ ಮಾತು ಕೆಲವು ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ.
ಪುನೀತ್ ಹುಟ್ಟುಹಬ್ಬಕ್ಕೆ ಪವನ್ ಒಡೆಯರ್ ಕಡೆಯಿಂದ ಭರ್ಜರಿ ಗಿಫ್ಟ್
ಪುನೀತ್ ಅಭಿಮಾನಿಗಳಲ್ಲಿ ಮತ್ತೊಂದು ಮನವಿ ಮಾಡಿದ್ದಾರೆ. ಅದೇನೆಂದರೇ, 'ಕೇಕ್, ಹಾರ, ಹೂ ಗುಚ್ಚ ಮುಂತಾದ ಗಿಫ್ಟ್ ಗಳನ್ನು ತರಬೇಡಿ. ಪ್ರೀತಿ, ವಿಶ್ವಾಸದಿಂದ ಹಣ ಖರ್ಚು ಮಾಡಿಕೊಂಡು ತರುವ ಉಡುಗೊರೆಗಳು ಜನರ ಮಧ್ಯೆ ಕಳೆದುಹೋಗುತ್ತೆ. ಇದರಿಂದ ನಿಮಗೂ ಬೇಸರ, ದೂರದ ಊರಿಂದ ಬಂದು ವಿಶ್ ಮಾಡುವುದೇ ನನಗೆ ದೊಡ್ಡ ಉಡುಗೊರೆ' ಎಂದು ಉಪ್ಪು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
ಪುನೀತ್ ರಾಜ್ ಕುಮಾರ್ ಸದ್ಯ ಸಂತೋಷ್ ಆನಂದ್ ರಾಮ್ ನಿರ್ದೇಶನದ 'ಯುವರತ್ನ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರೀಕರಣದ ಕಾರಣ ಹೊರಗೆ ಹೋಗಿರುವ ಅಪ್ಪು ಮಾರ್ಚ್ 17ರ ಬೆಳಿಗ್ಗೆ ನಿವಾಸಕ್ಕೆ ವಾಪಸ್ ಆಗ್ತಾರೆ.