ಪುನೀತ್ ನಿಜ ವ್ಯಕ್ತಿತ್ವ ಏನು ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ
Recommended Video

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತುಂಬಾ ಸರಳ ವ್ಯಕ್ತಿ. ಸಿನಿಮಾದಲ್ಲಿ ಎಷ್ಟು ಶ್ರೀಮಂತ ಪಾತ್ರಗಳನ್ನ ಮಾಡಿದ್ರು, ತೆರೆ ಹಿಂದೆ ಅವರು ಸಿಂಪಲ್. ಇದು ಹಲವು ಭಾರಿ ಸಾಬೀತಾಗಿದೆ. ಇದಕ್ಕೆ ತಾಜಾ ಉದಾಹರಣೆ 'ನಟಸಾರ್ವಭೌಮ' ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಸಿಕ್ಕಿದೆ.
'ನಟಸಾರ್ವಭೌಮ' ಸಿನಿಮಾದ ಹಾಡೊಂದರ ಚಿತ್ರೀಕರಣದ ವೇಳೆ ನದಿಯಲ್ಲಿ ಶೂಟಿಂಗ್ ನಡೆದಿದೆ. ಈ ವೇಳೆ ದೋಣೆಯಲ್ಲಿ ಕೂತು ನದಿಯಲ್ಲಿ ಒಂದು ರೌಂಡ್ ಹೊಡೆದ ಅಪ್ಪು ಖುದ್ದು ತಾವೇ ದೋಣಿ ಮುನ್ನಡೆಸಿದ್ದಾರೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುನೀತ್ ಜೊತೆ ದೋಣಿಯಲ್ಲಿ ಯಕ್ಷಗಾನ ಗೆಟಪ್ ನಲ್ಲಿರುವ ಕಲಾವಿದರು ಕೂಡ ಕಾಣಿಸಿಕೊಂಡಿದ್ದಾರೆ.
ಪವನ್ ಒಡೆಯರ್ ನಿರ್ದೇಶನದ 'ನಟಸಾರ್ವಭೌಮ' ಸಿನಿಮಾದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ. ರಾಕ್ ಲೈನ್ ವೆಂಕಟೇಶ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ರಚಿತಾ ರಾಮ್ ಮತ್ತು ಅನುಪಮ ಪರಮೇಶ್ವರನ್ ನಾಯಕಿಯರಾಗಿ ಅಭಿನಯಿಸಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ಟೀಸರ್ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಜನವರಿಯಲ್ಲಿ ಸಿನಿಮಾ ತೆರೆಗೆ ಬರಲಿದೆ ಎನ್ನಲಾಗಿದೆ.


Click it and Unblock the Notifications











