'ನೀರಿನ ಉಳಿವಿ'ಗಾಗಿ ಪುನೀತ್ ಕಡೆಯಿಂದ ಒಂದು ವಿಶೇಷವಾದ ಹಾಡು
ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಗುರು, ಧರ್ಮಗುರು ಶ್ರಿ ಸದ್ಗುರು ಜಗ್ಗಿ ವಾಸುದೇವ್ ಅವರ ನೇತೃತ್ವದಲ್ಲಿ ನದಿ ನೀರು ರಕ್ಷಣೆ ಜಾಗೃತಿಗಾಗಿ ''Rally For River'' ಎಂಬ ಅಭಿಯಾನವನ್ನ ನಡೆಸುತ್ತಿದ್ದಾರೆ. ಈ ಅಭಿಯಾನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಕನ್ನಡ ನಟರು ಬೆಂಬಲ ಕೊಟ್ಟಿದ್ದಾರೆ.
ಇದೀಗ, ''Rally For River'' ಅಭಿಯಾನಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಹೌದು, 'ನೀರನ್ನ ಉಳಿಸಿ, ಜೀವ ಸಂಕುಲವನ್ನ ಕಾಪಾಡಿ' ಎಂಬ ಸಂದೇಶದೊಂದಿಗೆ ಒಂದು ವಿಶೇಷವಾದ ಹಾಡನ್ನ ಅಪ್ಪು ಹಾಡಿದ್ದಾರೆ.

''ಈ ನೆಲ....ಈ ಜಲ....ನಿರ್ಮಲ....ರಕ್ಷಣೆಯ ಹೊಣೆ ನಮ್ಮದು, ನದಿಗಳು ನಮಗೆ ಜೀವಜಲ....'' ಎಂಬ ಜಾಗೃತಿ ಮೂಡಿಸುವ ಅಂತಹ ಅದ್ಭುತ ಹಾಡನ್ನ ಅಪ್ಪು ಹಾಡಿದ್ದು, ಈ ಹಾಡಿಗೆ ಸಂತೋಷ್ ಆನಂದ್ ರಾಮ್ ಸಾಹಿತ್ಯ ಬರೆದಿದ್ದಾರೆ.
ಈ ಹಾಡು ಕೇಳಿ, ನೀರಿನ ಮಹತ್ವ ಅರಿತುಕೊಳ್ಳಿ...ನೀರನ್ನ ಉಳಿಸಿ, ಜೀವವನ್ನ ಉಳಿಸಿ....
More from Filmibeat
English summary
Kannada Actor, Power star Puneeth Rajkumar sing a song for 'rally for rivers campaign'. lyrics written by Santhosh Ananddram.


Click it and Unblock the Notifications











