'ಅಭಿನಂದನ್ ಅವರ ಬಗ್ಗೆ ಸಿನಿಮಾ ಮಾಡುವ ಕುರಿತು ಮುಂದೆ ನೋಡೋಣ' - ಪುನೀತ್
Recommended Video

ಭಾರತದ ಧೀರ ಸೈನಿಕ ಅಭಿನಂದನ್ ವರ್ಧಮಾನ್ ಅವರು ಭಾರತಕ್ಕೆ ಮರಳಿದಿದ್ದಾರೆ. ಪಾಕಿಸ್ತಾನದಿಂದ ತಾಯ್ನಡಿಗೆ ಮರಳಿದ ಅಭಿನಂದನ್ ಅವರಿಗೆ ಇಡೀ ದೇಶವೇ ಅಭಿನಂದನೆ ಸಲ್ಲಿಸುತ್ತಿದೆ.
ನಟ ಪುನೀತ್ ರಾಜ್ ಕುಮಾರ್ ಸಹ ಅಭಿನಂದನ್ ಅವರ ಬಗ್ಗೆ ಮೆಚ್ಚುಗೆ ಮಾತನ್ನು ಆಡಿದ್ದಾರೆ. ''ಅಭಿನಂದನ್ ಅವರು ನಿಜವಾದ ಹೀರೋ. ಅವರು ಸುರಕ್ಷಿತವಾಗಿ ವಾಪಸ್ ಬಂದಿದ್ದು ಎಲ್ಲರೂ ಹೆಮ್ಮೆ ಪಡುವ ವಿಷಯ. ಅವರ ಬಗ್ಗೆ ಸಿನಿಮಾ ಮಾಡುವ ಬಗ್ಗೆ ಮುಂದೆ ನೋಡೋಣ.'' ಎಂದಿದ್ದಾರೆ.
ಪುನೀತ್ ಸದ್ಯ 'ನಟ ಸಾರ್ವಭೌಮ' ಚಿತ್ರದ ವಿಜಯಯಾತ್ರೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಅಭಿನಂದನ್ ಅವರ ಬಗ್ಗೆಯೂ ಪುನೀತ್ ಮಾತನಾಡಿದ್ದಾರೆ. ಸುದ್ದಿಗಾರರು ಅಭಿನಂದನ್ ಅವರ ಬಗ್ಗೆ ಸಿನಿಮಾ ಮಾಡುತ್ತೀರ ಎನ್ನುವ ಪ್ರಶ್ನೆಗೆ ಅಪ್ಪು ಪ್ರತಿಕ್ರಿಯೆ ನೀಡಿದ್ದಾರೆ.

ಬಾಲಿವುಡ್ ನಲ್ಲಿ ಅಭಿನಂದನ್ ಅವರ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ಸಲ್ಮಾನ್ ಖಾನ್ ಸೇರಿದಂತೆ ಕೆಲವು ನಟರ ಹೆಸರು ಸಿನಿಮಾದ ಕುರಿತು ಕೇಳಿ ಬರುತ್ತಿದೆ. ದೊಡ್ಡ ದೊಡ್ಡ ನಿರ್ಮಾಪಕ, ನಿರ್ದೇಶಕರು ಈ ಚಿತ್ರದ ಮೇಲೆ ಕಣ್ಣು ಇಟ್ಟಿದ್ದಾರೆ.


Click it and Unblock the Notifications











