Don't Miss!
- News ಅಂದು ರಾಮದಾಸ್, ಇಂದು ಪ್ರತಾಪ್ ಸಿಂಹ ಬೆನ್ನಿಗೆ ಹೊಡೆದ ಮೋದಿ: ಆದರೆ ಇಬ್ಬರಿಗೂ ಮಾತ್ರ ಟಿಕೆಟ್ ಇಲ್ಲ
- Sports ದಿನೇಶ್ ಕಾರ್ತಿಕ್ ಟಿ20 ವಿಶ್ವಕಪ್ಗೆ ಆಯ್ಕೆಯಾಗಬಾರದು; ಇರ್ಫಾನ್ ಪಠಾಣ್ ಹೀಗೆ ಹೇಳಿದ್ದೇಕೆ?
- Technology Smart TVs: ವಿಶೇಷ ಫೀಚರ್ಸ್ ಆಯ್ಕೆಯ 10000ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್ ಟಿವಿಗಳಿವು!
- Finance ಕ್ಯಾನ್ಸರ್ಗೆ ಸವಾಲು ಹಾಕಿ ಗೆದ್ದ 33 ವರ್ಷದ ಹುಡುಗಿ ಬಳಿ ಈಗ 10 ಖಾಸಗಿ ಜೆಟ್ಗಳು!
- Lifestyle ಹಾಲು ಜೇನಿನಂತಿರುವ ಸಂಬಂಧ ಹಾಳಾಗುತ್ತಿರುವ ಲಕ್ಷಣಗಳಿವು..!
- Automobiles ಪೆಟ್ರೋಲ್ ಎಂಜಿನ್ಗಳಲ್ಲಿ ಮಾತ್ರ ಬರಲಿದೆ ರೆನಾಲ್ಟ್ನ ಬ್ರಹ್ಮಾಸ್ತ್ರ ಡಸ್ಟರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರೀಕರಣದ ನಡುವೆ ಪುನೀತ್ ರಾಜ್ಕುಮಾರ್ ಮಹತ್ವದ ಕಾರ್ಯ
ನಟ ಪುನೀತ್ ರಾಜ್ಕುಮಾರ್ ಬಳ್ಳಾರಿಯ ಹೊಸಪೇಟೆ ಸುತ್ತ-ಮುತ್ತ ತಾಣಗಳಲ್ಲಿ ತಮ್ಮ ಮುಂದಿನ ಸಿನಿಮಾ ಜೇಮ್ಸ್ ನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
Recommended Video
ಕಳೆದ ಒಂದು ವಾರದಿಂದಲೂ ಕೊಪ್ಪಳ, ಹೊಸಪೇಟೆ, ಗಂಗಾವತಿ ಸೇರಿ ಹಲವೆಡೆ ಪುನೀತ್ ರಾಜ್ಕುಮಾರ್ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ.
ಪುನೀತ್ 'ಜೇಮ್ಸ್' ಸಿನಿಮಾ: ಕಾನೂನು ಕ್ರಮ ಕೈಗೊಳ್ಳುವುದಾಗಿ ಸಿನಿಮಾತಂಡ ಎಚ್ಚರಿಕೆ ನೀಡಿದ್ದೇಕೆ?
ಸಿನಿಮಾದ ಚಿತ್ರೀಕರಣದ ನಡುವೆ ಮಹತ್ವದ ಕಾರ್ಯವೊಂದನ್ನು ಮಾಡಿದ್ದಾರೆ ಪುನೀತ್ ರಾಜ್ಕುಮಾರ್. ಹೌದು, ಪುನೀತ್ ಅವರು ಕೊಪ್ಪಳದಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ.
ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಪುನೀತ್ ರಾಜ್ಕುಮಾರ್, 'ಇಲ್ಲಿನ ಜನ ಬಹಳ ಒಳ್ಳೆಯವರು, ಜನರು ಪ್ರೀತಿಯಿಂದ ಕಾಣ್ತಾರೆ ಎಂದು ಸ್ಥಳೀಯರನ್ನು ಹೊಗಳಿದರು.
'ಕೊರೊನಾ ಒಂದು ಪುಟ್ಟ ವೈರಸ್ ಆದರೆ ಅಪಾಯಕಾರಿ'
ಕೊರೊನಾ ವೈರಸ್ ಬಗ್ಗೆ ಮಾತನಾಡಿ, 'ಕೊರೊನಾ ಒಂದು ಪುಟ್ಟ ವೈರಸ್ ಆದರೆ ಅಷ್ಟೇ ಅಪಾಯಕಾರಿ ವೈರಸ್, ಹಾಗಾಗಿ ಹಲವು ಸಾವು-ನೋವುಗಳಾಗಿವೆ. ಇದಕ್ಕೆ ಇನ್ನೂ ವ್ಯಾಕ್ಸಿನ್ ಸಿಕ್ಕಿಲ್ಲ, ಹಾಗಾಗಿ ನಾವೆಲ್ಲರೂ ಆದಷ್ಟು ಜಾಗೃತೆಯಾಗಿರಬೇಕು ಎಂದರು.
'ವೈದ್ಯರು, ಆರೋಗ್ಯ ಸಿಬ್ಬಂದಿ, ಪೊಲೀಸರ ಶ್ರಮವನ್ನು ಗೌರವಿಸೋಣ'
'ವೈದ್ಯರು, ಆರೋಗ್ಯ ಸಿಬ್ಬಂದಿ, ಪೊಲೀಸರು ಇದರೊಂದಿಗೆ ಹೋರಾಡುತ್ತಿದ್ದಾರೆ ಅವರ ಶ್ರಮವನ್ನು ನಾವೆಲ್ಲರೂ ಗೌರವಿಸೋಣ. ಹೊರಗೆ ಹೋದಾಗ ಕಡ್ಡಾಯವಾಗಿ ಮಾಸ್ಕ್ ಧರಿಸೋಣ. ಸ್ಯಾನಿಟೈಸರ್ ಬಳಸೋಣ, ಕೈ ಯನ್ನು ತೊಳೆದುಕೊಳ್ಳೋಣ' ಎಂದರು ಪುನೀತ್ ರಾಜ್ಕುಮಾರ್.
ಮನೆಗೆ ಭೇಟಿ ಕೊಟ್ಟ ಪುನೀತ್ ರಾಜ್ಕುಮಾರ್ ಗೆ ಗದೆ ಕೊಟ್ಟ ಸಚಿವ
ಮಾಸ್ಕ್ ಹಾಕುವಂತೆ ಕೈ ಮುಗಿದು ಮನವಿ
ಕೆಲವು ದಿನಗಳ ಹಿಂದೆ ಹೊಸಪೇಟೆ ಸಮೀಪ ಪುನೀತ್ ರಾಜ್ಕುಮಾರ್ ಚಿತ್ರೀಕರಣ ನಡೆಸುವ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿಬಿಟ್ಟಿದ್ದರು. ಆ ಸಮಯದಲ್ಲಿ ಪುನೀತ್ ಅವರು ಎಲ್ಲರಿಗೂ ಮಾಸ್ಕ್ ತೊಡುವಂತೆ ಕೈ ಮುಗಿದು ಮನವಿ ಮಾಡಿದ್ದರು. ಆ ವಿಡಿಯೋ ವೈರಲ್ ಆಗಿತ್ತು.
ಸಚಿವ ಆನಂದ್ ಸಿಂಗ್ ಮನೆಗೆ ಭೇಟಿ
ಜೇಮ್ಸ್ ಸಿನಿಮಾದ ಚಿತ್ರೀಕರಣ ಹೊಸಪೇಟೆ ಹಾಗೂ ಸುತ್ತ-ಮುತ್ತ ನಡೆಯುತ್ತಿದೆ. ಚಿತ್ರೀಕರಣವನ್ನು ಎಂಜಾಯ್ ಮಾಡುತ್ತಿರುವ ಪುನೀತ್, ಕೆಲವು ದಿನಗಳ ಹಿಂದೆ ತುಂಗಭದ್ರಾ ಡ್ಯಾಂ ಗೆ ಭೇಟಿ ನೀಡಿದ್ದರು, ನಂತರ ಸಚಿವ ಆನಂದ್ ಸಿಂಗ್ ಮನೆಗೂ ಭೇಟಿ ನೀಡಿ ಉಪಹಾರ ಸೇವಿಸಿದ್ದರು.
ಪುನೀತ್ 'ಜೇಮ್ಸ್' ಸಿನಿಮಾ: ಕಾನೂನು ಕ್ರಮ ಕೈಗೊಳ್ಳುವುದಾಗಿ ಸಿನಿಮಾತಂಡ ಎಚ್ಚರಿಕೆ ನೀಡಿದ್ದೇಕೆ?