Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರೀಕರಣದ ನಡುವೆ ಪುನೀತ್ ರಾಜ್ಕುಮಾರ್ ಮಹತ್ವದ ಕಾರ್ಯ
ನಟ ಪುನೀತ್ ರಾಜ್ಕುಮಾರ್ ಬಳ್ಳಾರಿಯ ಹೊಸಪೇಟೆ ಸುತ್ತ-ಮುತ್ತ ತಾಣಗಳಲ್ಲಿ ತಮ್ಮ ಮುಂದಿನ ಸಿನಿಮಾ ಜೇಮ್ಸ್ ನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
Recommended Video
ಕಳೆದ ಒಂದು ವಾರದಿಂದಲೂ ಕೊಪ್ಪಳ, ಹೊಸಪೇಟೆ, ಗಂಗಾವತಿ ಸೇರಿ ಹಲವೆಡೆ ಪುನೀತ್ ರಾಜ್ಕುಮಾರ್ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ.
ಪುನೀತ್ 'ಜೇಮ್ಸ್' ಸಿನಿಮಾ: ಕಾನೂನು ಕ್ರಮ ಕೈಗೊಳ್ಳುವುದಾಗಿ ಸಿನಿಮಾತಂಡ ಎಚ್ಚರಿಕೆ ನೀಡಿದ್ದೇಕೆ?
ಸಿನಿಮಾದ ಚಿತ್ರೀಕರಣದ ನಡುವೆ ಮಹತ್ವದ ಕಾರ್ಯವೊಂದನ್ನು ಮಾಡಿದ್ದಾರೆ ಪುನೀತ್ ರಾಜ್ಕುಮಾರ್. ಹೌದು, ಪುನೀತ್ ಅವರು ಕೊಪ್ಪಳದಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ.
ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಪುನೀತ್ ರಾಜ್ಕುಮಾರ್, 'ಇಲ್ಲಿನ ಜನ ಬಹಳ ಒಳ್ಳೆಯವರು, ಜನರು ಪ್ರೀತಿಯಿಂದ ಕಾಣ್ತಾರೆ ಎಂದು ಸ್ಥಳೀಯರನ್ನು ಹೊಗಳಿದರು.
'ಕೊರೊನಾ ಒಂದು ಪುಟ್ಟ ವೈರಸ್ ಆದರೆ ಅಪಾಯಕಾರಿ'
ಕೊರೊನಾ ವೈರಸ್ ಬಗ್ಗೆ ಮಾತನಾಡಿ, 'ಕೊರೊನಾ ಒಂದು ಪುಟ್ಟ ವೈರಸ್ ಆದರೆ ಅಷ್ಟೇ ಅಪಾಯಕಾರಿ ವೈರಸ್, ಹಾಗಾಗಿ ಹಲವು ಸಾವು-ನೋವುಗಳಾಗಿವೆ. ಇದಕ್ಕೆ ಇನ್ನೂ ವ್ಯಾಕ್ಸಿನ್ ಸಿಕ್ಕಿಲ್ಲ, ಹಾಗಾಗಿ ನಾವೆಲ್ಲರೂ ಆದಷ್ಟು ಜಾಗೃತೆಯಾಗಿರಬೇಕು ಎಂದರು.
'ವೈದ್ಯರು, ಆರೋಗ್ಯ ಸಿಬ್ಬಂದಿ, ಪೊಲೀಸರ ಶ್ರಮವನ್ನು ಗೌರವಿಸೋಣ'
'ವೈದ್ಯರು, ಆರೋಗ್ಯ ಸಿಬ್ಬಂದಿ, ಪೊಲೀಸರು ಇದರೊಂದಿಗೆ ಹೋರಾಡುತ್ತಿದ್ದಾರೆ ಅವರ ಶ್ರಮವನ್ನು ನಾವೆಲ್ಲರೂ ಗೌರವಿಸೋಣ. ಹೊರಗೆ ಹೋದಾಗ ಕಡ್ಡಾಯವಾಗಿ ಮಾಸ್ಕ್ ಧರಿಸೋಣ. ಸ್ಯಾನಿಟೈಸರ್ ಬಳಸೋಣ, ಕೈ ಯನ್ನು ತೊಳೆದುಕೊಳ್ಳೋಣ' ಎಂದರು ಪುನೀತ್ ರಾಜ್ಕುಮಾರ್.
ಮನೆಗೆ ಭೇಟಿ ಕೊಟ್ಟ ಪುನೀತ್ ರಾಜ್ಕುಮಾರ್ ಗೆ ಗದೆ ಕೊಟ್ಟ ಸಚಿವ
ಮಾಸ್ಕ್ ಹಾಕುವಂತೆ ಕೈ ಮುಗಿದು ಮನವಿ
ಕೆಲವು ದಿನಗಳ ಹಿಂದೆ ಹೊಸಪೇಟೆ ಸಮೀಪ ಪುನೀತ್ ರಾಜ್ಕುಮಾರ್ ಚಿತ್ರೀಕರಣ ನಡೆಸುವ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿಬಿಟ್ಟಿದ್ದರು. ಆ ಸಮಯದಲ್ಲಿ ಪುನೀತ್ ಅವರು ಎಲ್ಲರಿಗೂ ಮಾಸ್ಕ್ ತೊಡುವಂತೆ ಕೈ ಮುಗಿದು ಮನವಿ ಮಾಡಿದ್ದರು. ಆ ವಿಡಿಯೋ ವೈರಲ್ ಆಗಿತ್ತು.
ಸಚಿವ ಆನಂದ್ ಸಿಂಗ್ ಮನೆಗೆ ಭೇಟಿ
ಜೇಮ್ಸ್ ಸಿನಿಮಾದ ಚಿತ್ರೀಕರಣ ಹೊಸಪೇಟೆ ಹಾಗೂ ಸುತ್ತ-ಮುತ್ತ ನಡೆಯುತ್ತಿದೆ. ಚಿತ್ರೀಕರಣವನ್ನು ಎಂಜಾಯ್ ಮಾಡುತ್ತಿರುವ ಪುನೀತ್, ಕೆಲವು ದಿನಗಳ ಹಿಂದೆ ತುಂಗಭದ್ರಾ ಡ್ಯಾಂ ಗೆ ಭೇಟಿ ನೀಡಿದ್ದರು, ನಂತರ ಸಚಿವ ಆನಂದ್ ಸಿಂಗ್ ಮನೆಗೂ ಭೇಟಿ ನೀಡಿ ಉಪಹಾರ ಸೇವಿಸಿದ್ದರು.
ಪುನೀತ್ 'ಜೇಮ್ಸ್' ಸಿನಿಮಾ: ಕಾನೂನು ಕ್ರಮ ಕೈಗೊಳ್ಳುವುದಾಗಿ ಸಿನಿಮಾತಂಡ ಎಚ್ಚರಿಕೆ ನೀಡಿದ್ದೇಕೆ?