Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬೆಟ್ಟದ ಹೂವು' ಸ್ಥಳಕ್ಕೆ ಭೇಟಿ ನೀಡಿದ ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್ ವೃತ್ತಿ ಜೀವನದಲ್ಲಿ 'ಬೆಟ್ಟದ ಹೂವು' ಸಿನಿಮಾ ಬಹುದೊಡ್ಡ ಯಶಸ್ಸು ಮತ್ತು ಹಿರಿಮೆ. ಯಾಕಂದ್ರೆ, ಈ ಚಿತ್ರದ ಅಭಿನಯಕ್ಕಾಗಿ ಪುನೀತ್ ಗೆ ಬಾಲ ಕಲಾವಿದನಾಗಿರಬೇಕಾದರೇ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟಿತ್ತು.
ಇಂದಿಗೂ ಈ ಸಿನಿಮಾ ಟಿವಿಯಲ್ಲಿ ಪ್ರಸಾರ ಮಾಡಿದ್ರೆ, ಮನೆ ಮಂದಿಯಲ್ಲಾ ತಮ್ಮ ಮಕ್ಕಳ ಜೊತೆ ಕೂತು ಸಿನಿಮಾ ನೋಡ್ತಾರೆ. ಹೊರೆಗೆ ಆಡುವ ಮಕ್ಕಳನ್ನ ಕರೆಸಿ ಚಿತ್ರ ತೋರಿಸ್ತಾರೆ. ಅಷ್ಟರ ಮಟ್ಟಿಗೆ ಪ್ರೇಕ್ಷಕರ ಮನಸ್ಸು ಮುಟ್ಟಿದ್ದ ಸೂಪರ್ ಹಿಟ್ ಸಿನಿಮಾ ಇದು.
'ಯುವರತ್ನ' ಅಪ್ಪುಗೆ ಜೋಡಿಯಾಗ್ತಾರೆ ಸ್ಟಾರ್ ನಾಯಕಿ.!
ಈ ಸಿನಿಮಾ 1985ರಲ್ಲಿ ಬಿಡುಗಡೆಯಾಗಿತ್ತು. ಇಂದಿಗೆ ಸುಮಾರು 33 ವರ್ಷ ಆಗಿದೆ. ಅಂದು ಬಾಲ ಕಲಾವಿದನಾಗಿದ್ದ ಪುನೀತ್ ಇಂದು ಕರ್ನಾಟಕದ ಪವರ್ ಸ್ಟಾರ್ ಆಗಿದ್ದಾರೆ. ಮೂರು ದಶಕದ ಹಿಂದೆ ನಡೆದಿದ್ದ ಚಿತ್ರೀಕರಣ ಜಾಗಕ್ಕೆ ಪುನೀತ್ ಈಗ ಭೇಟಿ ನೀಡಿದ್ದಾರೆ. ಅಲ್ಲಿನ ನೆನಪುಗಳನ್ನ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
ಕಾಜಲ್, ತಮನ್ನಾ, ಕೀರ್ತಿ ಸುರೇಶ್ 'ಯುವರತ್ನ'ನಿಗೆ ಜೋಡಿಯಾಗೋದು ಬೇಡವಂತೆ!
'ನಟಸಾರ್ವಭೌಮ' ಚಿತ್ರದ ಚಿತ್ರೀಕರಣದಲ್ಲಿರುವ ಪುನೀತ್ ಮಾರ್ಗಮಧ್ಯೆ 'ಬೆಟ್ಟದ ಹೂವು' ಸಿನಿಮಾ ಶೂಟಿಂಗ್ ಆಗಿದ್ದ ಸ್ಥಳವನ್ನ ನೋಡಿ ಕಾರಿನಿಂದ ಇಳಿದು, ಅಲ್ಲಿನ ಜನರ ಜೊತೆ ಮಾತನಾಡಿದ್ದಾರೆ. ಹಳೆಯ ಸ್ಕೂಲ್, ಮನೆ, ಹಾಗೂ ಚಿತ್ರೀಕರಣಕ್ಕಾಗಿ ಹಾಕಿದ್ದ ಸೆಟ್ ಗಳಿದ್ದ ಸ್ಥಳವನ್ನ ನೋಡಿ ಖುಷಿಯಾಗಿದ್ದಾರೆ.
ಅಂದ್ಹಾಗೆ, ಈ ಜಾಗ ಚಿಕ್ಕಮಗಳೂರಲ್ಲಿ ಅತ್ತಿಗುಂಡಿ ಮೂಲಕ ಪಾಸಾದಾಗ ಬರುತ್ತಂತೆ. ಅದನ್ನ ಸ್ವತಃ ಪುನೀತ್ ವಿಡಿಯೋದಲ್ಲಿ ತೋರಿಸಿದ್ದಾರೆ.
ಯುವರತ್ನ'ನಿಗೆ ಜೋಡಿ ಆಗ್ತಾರಂತೆ ತಮನ್ನಾ
ಲಕ್ಷ್ಮಿ ನಾರಾಯಣ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣ ಮಾಡಿದ್ದರು. ಮಾಸ್ಟರ್ ಲೋಹಿತ್ (ಪುನೀತ್ ರಾಜ್ ಕುಮಾರ್), ಹಿರಿಯ ನಟಿ ಪದ್ಮಾ ವಾಸಂತಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ರಾಜನ್ ನಾಗೇಂದ್ರ ಸಂಗೀತ ನೀಡಿದ್ದರು. ಚಿ ಉದಯ್ ಶಂಕರ್ ಚಿತ್ರಕಥೆ ಬರೆದಿದ್ದರು.