twitter
    For Quick Alerts
    ALLOW NOTIFICATIONS  
    For Daily Alerts

    ಪ್ರಭಾಸ್‌ರನ್ನ ಕನ್ನಡಕ್ಕೆ ಸ್ವಾಗತಿಸಿದ ಪುನೀತ್ ರಾಜ್ ಕುಮಾರ್

    |

    'ಬಾಹುಬಲಿ' ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಎನಿಸಿಕೊಂಡ ತೆಲುಗು ನಟ ಪ್ರಭಾಸ್ ಈಗ ಕನ್ನಡ ಇಂಡಸ್ಟ್ರಿ ಪ್ರವೇಶಿಸಿದ್ದಾರೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮುಂದಿನ ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಇಂದು ಅಧಿಕೃತವಾಗಿ ಈ ಪ್ರಾಜೆಕ್ಟ್ ಘೋಷಣೆಯಾಗಿದೆ.

    ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿದ್ದು, ಚಿತ್ರಕ್ಕೆ ಸಲಾರ್ ಎಂದು ಹೆಸರಿಟ್ಟಿದೆ.

    Big News: ಪ್ರಭಾಸ್ ಹೀರೋ ಎಂದು ಘೋಷಿಸಿದ ಹೊಂಬಾಳೆ ಫಿಲಂಸ್Big News: ಪ್ರಭಾಸ್ ಹೀರೋ ಎಂದು ಘೋಷಿಸಿದ ಹೊಂಬಾಳೆ ಫಿಲಂಸ್

    ಸಲಾರ್ ಸಿನಿಮಾ ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿದ್ದು, ಕನ್ನಡದಲ್ಲಿ ಮೊಟ್ಟ ಮೊದಲ ಸಲ ಪ್ರಭಾಸ್ ಸಿನಿಮಾ ಏಕಕಾಲದಲ್ಲಿ ತೆರೆಕಾಣಲಿದೆ. ಈ ಮೂಲಕ ಸ್ಯಾಂಡಲ್ ವುಡ್‌ ಇಂಡಸ್ಟ್ರಿಗೆ ಪ್ರಭಾಸ್ ಅಧಿಕೃತ ಪ್ರವೇಶವಾಗಿದೆ.

    Puneeth Rajkumar Welcomes Telugu actor Prabhas to Kannada With Salaar

    ಕನ್ನಡ ಚಿತ್ರರಂಗ ಪ್ರವೇಶಿಸಿದ ತೆಲುಗು ನಟ ಪ್ರಭಾಸ್ ಅವರನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ''ನಮ್ಮ ಕನ್ನಡ ನಾಡಿಗೆ ಪ್ರೀತಿಯಿಂದ ಸ್ವಾಗತಿಸುತ್ತಿದ್ದೇನೆ ಪ್ರಭಾಸ್'' ಎಂದು ಪುನೀತ್ ಟ್ವೀಟ್ ಮಾಡಿದ್ದಾರೆ.

    Recommended Video

    KGF ನಂತರ ಹೊಂಬಾಳೆ ಫಿಲಂಸ್ ಘೋಷಣೆ ಮಾಡಲಿರೋ ದೊಡ್ಡ ಪ್ರಾಜೆಕ್ಟ್ ಇದೇನಾ?? | Filmibeat Kannada

    ಪುನೀತ್ ರಾಜ್‌ಕುಮಾರ್ ಅನ್ನು ತೆಲುಗಿಗೆ ಸ್ವಾಗತಿಸಿದ ಬಾಹುಬಲಿಪುನೀತ್ ರಾಜ್‌ಕುಮಾರ್ ಅನ್ನು ತೆಲುಗಿಗೆ ಸ್ವಾಗತಿಸಿದ ಬಾಹುಬಲಿ

    ಅಂದ್ಹಾಗೆ, ಹೊಂಬಾಳೆ ಫಿಲಂಸ್ ಅಡಿಯಲ್ಲಿ ಪುನೀತ್ ರಾಜ್ ಕುಮಾರ್ ಮೂರು ಸಿನಿಮಾ ಮಾಡಿದ್ದು, ನಾಲ್ಕನೇ ಚಿತ್ರದ ಮಾತುಕತೆಯೂ ಆಗಿದೆ ಎಂಬ ಮಾಹಿತಿ ಸಿಕ್ಕಿದೆ. ಸದ್ಯ, ಯುವರತ್ನ ಸಿನಿಮಾ ತಯಾರಾಗಿದ್ದು, ಬಿಡುಗಡೆಗೆ ಸಜ್ಜಾಗಿದೆ.

    English summary
    Kannada actor Puneeth Rajkumar welcomes Telugu actor Prabhas to Kannada With Salaar. the movie directed by Prashanth Neel.
    Thursday, December 3, 2020, 9:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X