Don't Miss!
- News Karnataka Lok Sabha Election 2024: ಏ.26ಕ್ಕೆ ಕರ್ನಾಟಕ ಮೊದಲ ಹಂತದ ಮತದಾನ: 14 ಕ್ಷೇತ್ರ, ಅಭ್ಯರ್ಥಿ, ಪೈಪೋಟಿ ಬಗ್ಗೆ ಮಾಹಿತಿ
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟ್ವಿಟ್ಟರ್ನಲ್ಲಿ ಟ್ರೆಂಡ್ ಆಯ್ತು 'ಯುವರತ್ನ'ದ ಪುನೀತ್ ರಾಜ್ ಕುಮಾರ್ ಹೊಸ ಸ್ಟಿಲ್
ಸಂತೋಷ್ ಆನಂದ್ ರಾಮ್ ನಿರ್ದೇಶನದ ಪುನೀತ್ ರಾಜ್ ಕುಮಾರ್ ಅಭಿನಯದ 'ಯುವರತ್ನ' ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಚಿತ್ರ. ಯುವರತ್ನದ ಡೈಲಾಗ್ ಟೀಸರ್ ಮತ್ತು ಅದರಲ್ಲಿನ ಪುನೀತ್ ಗೆಟಪ್ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು.
Recommended Video
ಯೂಟ್ಯೂಬ್ನಲ್ಲಿ ಡೈಲಾಗ್ ಟೀಸರ್ ಹಲವು ದಿನ ಮೊದಲ ಸ್ಥಾನದಲ್ಲಿ ಟ್ರೆಂಡ್ ಆಗಿತ್ತು. ಈಗ ಯುವರತ್ನ ಚಿತ್ರದ ಪುನೀತ್ ಅವರ ಹೊಸ ಗೆಟಪ್ನ ಚಿತ್ರವೊಂದು ರಿವೀಲ್ ಆಗಿದ್ದು, ಅಭಿಮಾನಿಗಳು ಪುನೀತ್ ಲುಕ್ಗೆ ಫಿದಾ ಆಗಿದ್ದಾರೆ. 'ಯುವರತ್ನ ಮ್ಯಾಸಿ ಸ್ಟಿಲ್' ಎಂಬ ಹ್ಯಾಷ್ ಟ್ಯಾಗ್ ಟ್ವಿಟ್ಟರ್ನಲ್ಲಿ ಟ್ರೆಂಡ್ ಆಗಿದೆ.
ಯೂಟ್ಯೂಬ್ನಲ್ಲಿ ಪವರ್ ಸ್ಟಾರ್ ಹವಾ: ನಂಬರ್ 1, 2ರಲ್ಲೂ ಪುನೀತ್ ಟ್ರೆಂಡಿಂಗ್
'ಅಪ್ಪು' ಚಿತ್ರದ ನಂತರ ಪುನೀತ್ ಕಾಲೇಜು ವಿದ್ಯಾರ್ಥಿಯ ಪಾತ್ರದಲ್ಲಿ ನಟಿಸಿದ್ದಾರೆ. ಜತೆಗೆ ಚಿತ್ರದ ವಿಭಿನ್ನ ಪೋಸ್ಟರ್ಗಳು ಚಿತ್ರದ ಕಥೆಯಲ್ಲಿ ಹಲವು ಟ್ವಿಸ್ಟ್ಗಳನ್ನು ನೀಡುವ ಸುಳಿವು ನೀಡಿದೆ.
ಯುವರತ್ನದ ಹೊಸ ಸ್ಟಿಲ್
ಪುನೀತ್ ರಾಜ್ ಕುಮಾರ್ ಅವರ ಪ್ರತಿ ಸಿನಿಮಾಗಳಲ್ಲಿಯೂ ಅಭಿಮಾನಿಗಳನ್ನು ಸೆಳೆಯುವಂತಹ ವಿಭಿನ್ನ ಬಗೆಯ ಪೋಸ್ಟರ್ ಸ್ಟಿಲ್ಗಳಿರುತ್ತವೆ. ಈ ಸ್ಟಿಲ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದು ಸಹ ಸಾಮಾನ್ಯ. ಕನ್ನಡ ಚಿತ್ರರಂಗದಲ್ಲಿ ಜೂಕ್ ಬಾಕ್ಸ್ನಲ್ಲಿ ನಾಲ್ಕು ಬಾರಿ ಒಂದು ಮಿಲಿಯನ್ ವ್ಯೂವ್ಸ್ ಹೊಂದಿರುವ ಏಕೈಕ ನಟ ಪುನೀತ್ ಎನ್ನುವುದು ಅವರ ಫ್ಯಾನ್ಸ್ ಹೇಳಿಕೆ. ಅದರ ಸಾಲಿಗೆ 'ಯುವರತ್ನ'ದ ಈ ಹೊಸ ಲುಕ್ ಕೂಡ ಸೇರಬೇಕು ಎನ್ನುವುದು ಅವರ ಬಯಕೆ.
ವಿದೇಶದಲ್ಲಿ ಚಿತ್ರೀಕರಣ ರದ್ದು
ರಾಜಕುಮಾರ ಚಿತ್ರ 3.8 ಮಿಲಿಯನ್, ನಟ ಸಾರ್ವಭೌಮ 1.6 ಮಿಲಿಯನ್, ಅಂಜನಿಪುತ್ರ 1.3 ಮಿಲಿಯನ್ ಮತ್ತು ಪರಮಾತ್ಮ 1 ಮಿಲಿಯನ್ ವೀಕ್ಷಣೆ ಪಡೆದುಕೊಂಡಿತ್ತು. ಯುವರತ್ನ ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಇನ್ನೂ ಬಾಕಿ ಇದೆ. ವಿದೇಶದಲ್ಲಿ ಈ ಹಾಡುಗಳ ಚಿತ್ರೀಕರಣಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ವಿದೇಶಕ್ಕೆ ಹೋಗಿ ಚಿತ್ರೀಕರಣ ಮಾಡಲು ಸಾಧ್ಯವಿಲ್ಲ.
'ಯುವರತ್ನ' ಟ್ರೇಲರ್, ಹಾಡು ಬಿಡುಗಡೆ: ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೇಳಿದ್ದೇನು?
ಎರಡು ಹಾಡುಗಳ ಚಿತ್ರೀಕರಣ
ಎಲ್ಲವೂ ಚೆನ್ನಾಗಿದ್ದರೆ ಈ ವೇಳೆಗೆ ಚಿತ್ರದ ಬಾಕಿ ಉಳಿದ ಹಾಡುಗಳ ಚಿತ್ರೀಕರಣ, ಡಬ್ಬಿಂಗ್ ಎಲ್ಲ ಮುಗಿದು ಮೊದಲ ಕಾಪಿ ಸಿದ್ಧವಾಗಬೇಕಿತ್ತು. ಲಾಕ್ ಡೌನ್ ತೆರವಾಗುತ್ತಿದ್ದಂತೆಯೇ ಚಿತ್ರೀಕರಣ ಶುರುವಾಗಲಿದೆ. ಹಾಡುಗಳನ್ನು ಭಾರತದಲ್ಲಿಯೇ ಚಿತ್ರೀಕರಿಸಲು ಉದ್ದೇಶಿಸಲಾಗಿದೆ.
ಸೆಪ್ಟೆಂಬರ್ನಲ್ಲಿ ಬಿಡುಗಡೆ?
ಅಭಿಮಾನಿಗಳನ್ನು ಹೆಚ್ಚು ಸಮಯ ಕಾಯಿಸಬಾರದು ಎನ್ನುವುದು ಚಿತ್ರತಂಡದ ಉದ್ದೇಶ. 'ಯುವರತ್ನ'ದ ಬೆನ್ನಲ್ಲೇ ಪುನೀತ್ ಅವರ 'ಜೇಮ್ಸ್' ಚಿತ್ರದ ಚಿತ್ರೀಕರಣ ನಡೆಯಬೇಕಿದೆ. ಹಾಗೆಯೇ ಪುನೀತ್ ಅವರ ಹೊಸ ಸಿನಿಮಾಗಳು ಶುರುವಾಗಬೇಕಿದೆ. ಹೀಗಾಗಿ ಶೀಘ್ರದಲ್ಲಿ ಶೂಟಿಂಗ್ ಮುಗಿದಿ ಸೆಪ್ಟೆಂಬರ್ ವೇಳೆಗೆ ಬಿಡುಗಡೆ ಮಾಡಬೇಕು ಎನ್ನುವುದು ನಿರ್ಮಾಪಕ ವಿಜಯ್ ಕಿರಂಗದೂರ್ ಅವರ ಬಯಕೆ.
ಮೇ 21ಕ್ಕೆ 'ಯುವರತ್ನ' ಸಿನಿಮಾ ರಿಲೀಸ್ ವದಂತಿ: ಸಂತೋಷ್ ಆನಂದ್ ರಾಮ್ ಸ್ಪಷ್ಟನೆ