Don't Miss!
- News ಕನ್ನಡ ನಾಮಫಲಕ: ಬಲವಂತದ ಕ್ರಮ ಬೇಡ ಎಂದ ಕೋರ್ಟ್
- Finance ಟಿಸಿಎಸ್ನಿಂದ ಭಾರತೀಯ ಸೇನೆಗೆ ಸೇರಿದ ಲೆಫ್ಟಿನೆಂಟ್ ದಿವ್ಯಾಂಗಿನಿ ತ್ರಿಪಾಠಿ
- Technology ಇಂದು ಮಾರುಕಟ್ಟೆಗೆ ಬರಲಿದೆ ಗೆಸ್ಚರ್ ಮೂಲಕ ಕೆಲಸ ಮಾಡುವ ಸ್ಮಾರ್ಟ್ಫೋನ್!
- Automobiles Tata Nexon: ಮುಂಬರಲಿರುವ ಟಾಟಾ ನೆಕ್ಸಾನ್ ಸಿಎನ್ಜಿ ಕಾರಿನ ವಿಶೇಷತೆಗಳಿವು.. ಹೆಚ್ಚು ಮೈಲೇಜ್!
- Sports IPL 2024: ಐಪಿಎಲ್ ಆರಂಭಕ್ಕೂ ಮುನ್ನವೇ 'ಸೂಪರ್' ಭವಿಷ್ಯ; ಆರ್ಸಿಬಿ ಈ ಬಾರಿ ಕಪ್ ಗೆಲ್ಲುತ್ತದಾ? ಇಲ್ಲಿದೆ ಉತ್ತರ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯುವ ದಸರಾದಲ್ಲಿ 'ಅಪ್ಪು ನಮನ': ಮೈಸೂರಿಗೆ ಅಶ್ವಿನಿ ಪುನೀತ್ ರಾಜ್ಕುಮಾರ್, ಶಿವಣ್ಣ!
ನಾಡ ಹಬ್ಬಕ್ಕೆ ಮೈಸೂರು ಸಿಂಗಾರಗೊಂಡು ನಿಂತಿದೆ. ಸೆಪ್ಟೆಂಬರ್ 27ರಿಂದ ಮೈಸೂರಿನಲ್ಲಿ ಯುವ ದಸರಾಗೆ ಚಾಲನೆ ಸಿಗಲಿದೆ. ಇಲ್ಲಿಂದ ಪ್ರತಿದಿನವೂ ಸಾಂಸ್ಕೃತಿ ಕಾರ್ಯಕ್ರಮಗಳು ಆರಂಭ ಆಗುತ್ತವೆ. ಇಡೀ ಮೈಸೂರು ಜಗಮಗಿಸುತ್ತೆ.
ಇನ್ನೆರಡು ದಿನಗಳಲ್ಲಿ ಆರಂಭ ಆಗುವ ದಸರಾ ಸಂಭ್ರಮಕ್ಕೆ ಸಾಕ್ಷಿಯಾಗಲು ಮೈಸೂರಿನ ಜನರು ಸಿದ್ಧರಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಮೈಸೂರು ದಸರಾ ಅದ್ಧೂರಿಯಾಗಿ ನಡೆಯಲಿದೆ. ಅದರಲ್ಲೂ ಯುವ ದಸರಾವನ್ನು ಈ ಬಾರಿ ವಿಶೇಷವಾಗಿ ಆಚರಿಸಲು ಮೈಸೂರು ಸಿದ್ಧವಾಗಿ ನಿಂತಿದೆ.
Exclusive: ಪುನೀತ್ ಕೊನೆಯ ಸಿನಿಮಾ 'ಗಂಧದ ಗುಡಿ'ಗೆ ಕಾಂಪಿಟೇಷನ್: ಯಾರಿಗೆ ಸೇರುತ್ತೆ ಹಕ್ಕು?
ಮೈಸೂರಿನಲ್ಲಿ ಕಲರ್ಫುಲ್ ಕಲರವ. ದಸರಾ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಇದೇ ವೇಳೆ 'ಯುವ ದಸರಾ' ಕೂಡ ಆರಂಭ ಆಗುತ್ತಿದೆ. ಅದಕ್ಕೆ ಬೇಕಾಗಿರೋ ಸಕಲ ಸಿದ್ಧತೆಗಳೂ ಕೂಡ ಜೊರಾಗಿಯೇ ನಡೆಯುತ್ತಿದೆ. ಯುವ ದಸರಾದಲ್ಲಿ ಒಂದು ದಿನವನ್ನು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಮೀಸಲಿಡಲಾಗಿದೆ.
ಪುನೀತ್ ನಮನ
ಸೆಪ್ಟೆಂಬರ್ 28ರಂದು 'ಯುವ ದಸರಾ' ಆರಂಭವಾದ ಎರಡನೇ ದಿನ ಡಾ.ಪುನೀತ್ ರಾಜ್ಕುಮಾರ್ ಅವರಿಗೆ ನಮನ ಸಲ್ಲಿಸಲಿದ್ದಾರೆ. ಈ ಹಿಂದೆ ಪ್ಲ್ಯಾನ್ ಮಾಡಿದಂತೆ ಎರಡನೇ ದಿನವೇ ಅಪ್ಪುಗೆ ಗೌರವ ಸಲ್ಲಿಸಲು ನಿರ್ಧರಿಸಲಾಗಿದ್ದು, ಅಣ್ಣಾವ್ರ ಕುಟುಂಬಕ್ಕೆ ಆಹ್ವಾನ ನೀಡಲಾಗಿದೆ. ದಿಗ್ಗಜರೆಲ್ಲರೂ ವೇದಿಕೆ ಮೇಲೆ ಪ್ರತ್ಯಕ್ಷ ಆಗಲಿದ್ದಾರೆ.
ಅಶ್ವಿನಿ ಪುನೀತ್ ರಾಜ್ಕುಮಾರ್ ಉಪಸ್ಥಿತಿ
ಯುವ ದಸರಾದಲ್ಲಿ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ಗೆ ಮೀಸಲಿಟ್ಟಿರೋದ್ರಿಂದ ಅಣ್ಣಾವ್ರ ಕುಟುಂಬ ಮೈಸೂರಿಗೆ ಆಗಮಿಸಲಿದೆ. ಅದರಲ್ಲೂ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ. ಇದೇ ವೇದಿಕೆ ಮೇಲೆ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ವಿನಯ್ ರಾಜ್ಕುಮಾರ್, ಯುವ ರಾಜ್ಕುಮಾರ್ ಭಾಗವಹಿಸಲಿದ್ದಾರೆ. ಅಣ್ಣಾವ್ರ ಇಡೀ ಕುಟುಂಬವೇ ವೇದಿಕೆ ಮೇಲಿರುತ್ತೆ.
ಅಪ್ಪುಗೆ ಸಂಗೀತ ನಮನ
ಸೆಪ್ಟೆಂಬರ್ 28ರಂದು ಯುವ ದಸರಾ ವೇದಿಕೆ ಮೇಲೆ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಲಿವೆ. ಅಪ್ಪುಗೆ ಸಂಗೀತ ನಮನ ಕೂಡ ನಡೆಯಲಿದ್ದು, ಸ್ಯಾಂಡಲ್ವುಡ್ನ ಸಂಗೀತ ನಿರ್ದೇಶಕ ಗುರುಕಿರಣ್, ಗಾಯಕ ವಿಜಯ್ ಪ್ರಕಾಶ್ ಹಾಗೂ ಬಾಲಿವುಡ್ ಗಾಯಕ ಕುನಾಲ್ ಗಾಂಜವಾಲ ಹಾಡಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಅದೇ ದಿನ ಅನುಶ್ರೀ ನಿರೂಪಣೆ ಮಾಡಲಿದ್ದಾರೆ.
ಮಂಗ್ಲಿ ರಘು ದೀಕ್ಷಿತ್
ಸೆಪ್ಟೆಂಬರ್ 27ರಂದು ಯುವ ದಸರಾಗೆ ಅದ್ಧೂರಿ ಚಾಲನೆ ನೀಡಲಾಗುತ್ತಿದೆ. ಆರಂಭದ ದಿನದಂದು ಯುವ ದಸರಾ ವೇದಿಕೆ ಮೇಲೆ ದಿಗ್ಗಜರು ಪರ್ಫಾಮೆನ್ಸ್ ನೀಡಲಿದ್ದಾರೆ. ತೆಲುಗಿ ಸ್ಟಾರ್ ಗಾಯಕಿ ಮಂಗ್ಲಿ ಹಾಗೂ ಕನ್ನಡದ ಗಾಯಕ ಕಮ್ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮೈಸೂರು ಜನರನ್ನು ರಂಜಿಸುತ್ತಿದ್ದಾರೆ. ಈಗಾಗಲೇ ಈ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದೆ. ದಸರಾ ಮುಗಿಯುವವರೆಗೂ ಮೈಸೂರಿನ ಜನರಿಗೆ ಅದ್ಧೂರಿ ಮನರಂಜನೆ ಸಿಗೋದು ಗ್ಯಾರಂಟಿ.