Don't Miss!
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- News 'ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತರಿ'- ನರೇಗಾ ಯೋಜನೆಯಡಿ ಲಕ್ಷಾಂತರ ನಿರುದ್ಯೋಗಿಗಳಿಗೆ ಉದ್ಯೋಗ
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹ್ಯಾಪಿ ಬರ್ತಡೇ ಅಪ್ಪು ಅನ್ನುತ್ತಿದೆ ಸ್ಯಾಂಡಲ್ವುಡ್
ರಾಜ್ಕುಮಾರ್ ಹಾಗೂ ಶಿವರಾಜ್ಕುಮಾರ್ ಹೊರತುಪಡಿಸಿದರೆ, ರಾಜ್ ಕುಟುಂಬದ ಇತರ ಸದಸ್ಯರ ಹುಟ್ಟುಹಬ್ಬ ಸುದ್ದಿಯಾಗುವುದು ಕಡಿಮೆ. ಅಂದರೆ ಉಳಿದವರು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದಲ್ಲ ; ಆ ಆಚರಣೆ ಮನೆ ಮಟ್ಟಿಗೆ ಸೀಮಿತವಾಗಿರುತ್ತದೆ. ಈ ಮುನ್ನ ಪುನೀತ್ ಹುಟ್ಟುಹಬ್ಬದ ಆಚರಣೆ ಕೂಡ ಗದ್ದಲವಿಲ್ಲದೇ ಸರಿದುಹೋಗುತ್ತಿತ್ತು . ಈ ಸಾರಿ ಹಾಗಲ್ಲ - ಅಪ್ಪು ನಾಯಕನಾಗಿದ್ದಾನೆ. ಅದಮೇಲೆ ಬರ್ತಡೇ ಆಚರಿಸಿಕೊಳ್ಳದಿದ್ದರೇ ಹೇಗೆ! ಮಾರ್ಚ್- 17 ಪುನೀತ್ ಹುಟ್ಟುಹಬ್ಬ.
ಪುನೀತ್ ಹುಟ್ಟುಹಬ್ಬ ರಾಜ್ ಅಭಿಮಾನಿಗಳ ಪಾಲಿಗೆ ಸಂಭ್ರಮದ ಆಚರಣೆಯಾಗಿದೆ. ಇನ್ನೇನು ಪುನೀತ್ ಅವರ ಹೀರೋ ಇನಿಂಗ್ಸ್ನ ಮೊದಲನೆ ಚಿತ್ರ ಅಪ್ಪು ಬಿಡುಗಡೆಯ ದಿನ ಹತ್ತಿರವಾಗುತ್ತಿದೆ. ಅಪ್ಪಾಜಿ ಹುಟ್ಟು ಹಬ್ಬಕ್ಕೆ ಅಪ್ಪು- ಎಂದು ಮುಹೂರ್ತದ ದಿನವೇ ಪ್ರಕಟಿಸಲಾಗಿತ್ತು . ಏಪ್ರಿಲ್ 24 ರಾಜ್ ಹುಟ್ಟುಹಬ್ಬ. ಅಪ್ಪು , ಅಣ್ಣಾವ್ರಿಗೆ ಬರ್ತಡೇ ಗಿಫ್ಟ್ !
ಅಪ್ಪು ಬಗೆಗೆ ಉದ್ಯಮ ಭಾರೀ ಭರವಸೆ ಇರಿಸಿಕೊಂಡಿದೆ. ಹೇಳಿಕೇಳಿ ಇದು ಹೊಸಬರ ಜಮಾನ. ಹೊಸಮುಖಗಳು ಯಶಸ್ಸು ಕಾಣುತ್ತಿರುವ ಈ ಹೊತ್ತು , ರಾಜ್ ಬಳಗದ ರಕ್ಷಾ ವರ್ಚಸ್ಸಿನೊಂದಿಗೆ ಕಣಕ್ಕಿಳಿಯುತ್ತಿರುವ ಅಪ್ಪುಗೆ ಯಶಸ್ಸು ಖಂಡಿತ ಅನ್ನುವುದು ಉದ್ಯಮದ ಲೆಕ್ಕಾಚಾರ.
ಪುನೀತ್ ಮೊದಲ ಸಿನಿಮಾದ ಬಗೆಗೆ ಖುದ್ದು ಪಾರ್ವತಮ್ಮ ಅವರೇ ಮುತುವರ್ಜಿ ವಹಿಸಿದ್ದಾರೆ. ಚಿತ್ರದ ಪ್ರತಿಹಂತವನ್ನೂ ಗಮನಿಸುತ್ತಿರುವ ಅವರಿಗೆ ಕಿರಿಮಗನ ಪ್ರವೇಶ ಭರ್ಜರಿಯಾಗಿರಬೇಕೆಂಬ ಆಸೆ. ಆ ಕಾರಣದಿಂದಾಗಿಯೇ ಈಗಾಗಲೇ ಚಿತ್ರೀಕರಣ ಮುಗಿದಿರುವ ಕೆಲ ದೃಶ್ಯಗಳನ್ನು ಮತ್ತೆ ಶೂಟ್ ಮಾಡಲು ಪಾರ್ವತಮ್ಮ ಸೂಚಿಸಿದ್ದಾರೆ ಎನ್ನುವ ಸುದ್ದಿಯೂ ಉದ್ಯಮದಲ್ಲಿ ಚಲಾವಣೆಯಲ್ಲಿದೆ.
ರಾಜ್ಕುಮಾರ್ ಅವರು ಅಪ್ಪುವಿಗಾಗಿ ಒಂದು ಗೀತೆಯನ್ನು ಹಾಡಿರುವುದು ಲೇಟೆಸ್ಟ್ ಸುದ್ದಿ . ಇತ್ತೀಚಿನ ದಿನಗಳಲ್ಲಿ ಉದ್ಯಮದ ಚಟುವಟಿಕೆಗಳಿಂದ ಸಂಪೂರ್ಣ ದೂರವಿದ್ದ ರಾಜ್, ಅಪ್ಪುಗಾಗಿ ಮೈಕ್ ಕೈಗೆತ್ತಿಕೊಂಡಿರುವುದು ವಿಶೇಷ. ಒಟ್ಟಿನಲ್ಲಿ ಅಪ್ಪು ಯಶಸ್ಸಿಗಾಗಿ ಇಡೀ ರಾಜ್ ಕುಟುಂಬ ಟೊಂಕ ಕಟ್ಟಿದೆ.