ಚಿತ್ರಕಥೆ ಬರೆಯೋರಿಗೆ ಪುಷ್ಕರ್ ಸಂಸ್ಥಯಿಂದ ಸುವರ್ಣಾವಕಾಶ
ಹೊಸ ಪ್ರಯತ್ನಗಳನ್ನು ಮಾಡುವಲ್ಲಿ, ಹೊಸಬರಿಗೆ ಅವಕಾಶ ಕೊಡುವಲ್ಲಿ, ಒಳ್ಳೆಯ ಸದಭಿರುಚಿಯ ಚಿತ್ರಗಳನ್ನು ತಯಾರಿಸುವಲ್ಲಿ ಪುಷ್ಕರ್ ಸಂಸ್ಥೆ ಸದಾ ಮುಂಚೂಣಿಯಲ್ಲಿರುತ್ತದೆ.
ಗೋಧಿಬಣ್ಣ ಸಾಧಾರಣ ಮೈಕಟ್ಟು, ಹಂಬಲ್ ಪಾಲಿಟಿಶಿಯನ್ ನೊಗರಾಜ್, ಕಥೆಯೊಂದು ಶುರುವಾಗಿದೆ, ಅವನೇ ಶ್ರೀಮನ್ನಾರಾಯಣ ಅಂತಹ ಸಿನಿಮಾಗಳ ಮೂಲಕ ಕನ್ನಡ ಕಲಾಭಿಮಾನಿಗಳನ್ನು ರಂಜಿಸುವಲ್ಲಿ ಪುಷ್ಕರ್ ಸಂಸ್ಥೆ ಯಶಸ್ವಿಯಾಗಿದೆ.
ಇದೀಗ, ಹೊಸ ಬರಹಗಾರರಿಗೆ ಪುಷ್ಕರ್ ಫಿಲಂಸ್ ಆಹ್ವಾನ ನೀಡಿದೆ. ನೀವು ಒಳ್ಳೆಯ ಕಥೆಗಾರರೇ, ಕಥೆಯನ್ನು ಚೆನ್ನಾಗಿ ಅಭಿವೃದ್ದಿಪಡಿಸುತ್ತೀರಾ? ಕಥೆಯನ್ನು ಚಿತ್ರಕಥೆಯಾಗಿ ಮಾಡಬಲ್ಲೀರಾ? ಹಾಗಾದ್ರೆ, ಈ ಕೂಡಲೇ ಫುಷ್ಕರ್ ಫಿಲಂಸ್ ಅವರನ್ನು ಸಂಪರ್ಕಿಸಿ. ನಿಮ್ಮ ಅದೃಷ್ಟ ಬದಲಾದರೂ ಆಗಬಹುದು.

ಚಿತ್ರಕಥೆ ಬರೆಯುವವರಿಗಾಗಿ ಪುಷ್ಕರ್ ಫಿಲಂಸ್ ಪ್ರಕಟಣೆ ನೀಡಿದೆ. ಆಸಕ್ತರು PUSHAKARFILMS.COM ಸಂಪರ್ಕಿಸಬಹುದು.
ಪ್ರಸ್ತುತ, ರಕ್ಷಿತ್ ಶೆಟ್ಟಿ ನಟನೆಯ 'ಚಾರ್ಲಿ 777' ಸಿನಿಮಾವನ್ನು ಪುಷ್ಕರ್ ಫಿಲಂಸ್ ನಿರ್ಮಿಸಿದೆ. ಶರಣ್ ನಟನೆಯ ಅವತಾರ್ ಪುರುಷ ಚಿತ್ರಕ್ಕೂ ಬಂಡವಾಳ ಹಾಕಿದೆ. ಇದರ ಜೊತೆಗೆ ಸಪ್ತಸಾಗರದಾಚೆ ಎಲ್ಲೋ ಚಿತ್ರವನ್ನು ಘೋಷಣೆ ಮಾಡಿದೆ. ಜೊತೆಗೆ ಮಲಯಾಳಂ ಚಿತ್ರವೊಂದನ್ನು ಆರಂಭಿಸಿದೆ.


Click it and Unblock the Notifications











