Don't Miss!
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- News Bengaluru Rain: ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಜಿನುಗು ಮಳೆ.. ಮನೆಯಿಂದ ಹೊರಬಂದು ಕುಣಿದು ಕುಪ್ಪಳಿಸಿದ ಮಕ್ಕಳು
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಲೆಯಾಳಂ ಇಂಡಸ್ಟ್ರಿಯಲ್ಲಿ ಖಾತೆ ತೆರೆದ ಪುಷ್ಕರ್ ಮಲ್ಲಿಕಾರ್ಜುನಯ್ಯ
ಕನ್ನಡದ ಕಲಾವಿದರು, ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಮಾಲಿವುಡ್ ನಂಟು ಕಡಿಮೆ. ತೆಲುಗು, ತಮಿಳಿಗೆ ಹೋದ ಹಾಗೆ ಮಲೆಯಾಳಂಗೆ ಪ್ರಯಾಣ ಬೆಳೆಸುವವರು ಕಡಿಮೆ. ಆದರೆ, ಇದೀಗ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಕೇರಳ ನಾಡಿನಲ್ಲಿ ಖಾತೆ ತೆರೆಯುತ್ತಿದ್ದಾರೆ.
ಕನ್ನಡದಲ್ಲಿ ಭಿನ್ನ ಸಿನಿಮಾಗಳನ್ನು ಮಾಡಿಕೊಂಡು ಬರುತ್ತಿರುವ ಈ ನಿರ್ಮಾಪಕ ಈಗ ಬೇರೆ ಭಾಷೆಯಲ್ಲಿಯೂ ಪ್ರಯೋಗ ಮುಂದಿವರೆಸಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಮೊದಲ ಸಿನಿಮಾಗೆ 'ತಿಂಗಳಾಯ್ಚ ನಿಶ್ಚಯಂ' ಎಂಬ ಹೆಸರನ್ನು ಇಡಲಾಗಿದೆ.
ಶರಣ್, ಸಿಂಪಲ್ ಸುನಿ ಕಾಂಬಿನೇಶನ್ ನಲ್ಲಿ ಹೊಸ ಸಿನಿಮಾ
ಈ ಸಿನಿಮಾವನ್ನು ಸೆನ್ನಾ ಹೆಗ್ಡೆ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಕನ್ನಡದಲ್ಲಿ ದಿಗಂತ್ ನಟನೆಯ 'ಕಥೆಯೊಂದು ಶುರುವಾಗಿದೆ' ಸಿನಿಮಾವನ್ನು ಸೆನ್ನಾ ಹೆಗ್ಡೆ ನಿರ್ದೇಶನ ಮಾಡಿದ್ದರು. ಈ ಹೊಸ ಸಿನಿಮಾಗೆ ಪುಷ್ಕರ್ ನಿರ್ಮಾಣ ಇರುತ್ತದೆ.
ಈಗ ಇದೇ ಜೋಡಿ ಮಾಲಿವುಡ್ ಸಿನಿಮಾವನ್ನು ಶುರು ಮಾಡಿದ್ದಾರೆ. ಕೇರಳದ ಗಡಿ ಭಾಗದವರೇ ಆಗಿರುವ ಸೆನ್ನಾ ಹೆಗ್ಡೆ ಮಲೆಯಾಳಂ ಭಾಷೆಯನ್ನು ಬಲ್ಲವರರಾಗಿದ್ದಾರೆ. ಹೀಗಾಗಿ ಮಾಲಿವುಡ್ ನಲ್ಲಿ ತಮ್ಮ ಮುಂದಿನ ಪ್ರಾಜೆಕ್ಟ್ ಶುರು ಮಾಡುತ್ತಿದ್ದಾರೆ. ಸದ್ಯಕ್ಕೆ, ಚಿತ್ರದ ಕಲಾವಿದರ ಪಟ್ಟಿ ಹೊರಬಂದಿಲ್ಲ.
ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೀರೋ ಆಗ್ತಾರಂತೆ.!
'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಚಿತ್ರದ ಮೂಲಕ ತಮ್ಮ ಕೆರಿಯರ್ ಶುರು ಮಾಡಿದ ಪುಷ್ಕರ್ ಬಳಿಕ 'ಕಿರಿಕ್ ಪಾರ್ಟಿ', 'ಹಂಬಲ್ ಪೊಲಿಟಿಷಿಯನ್ ನೊಗರಾಜ್', 'ಕಥೆಯೊಂದು ಶುರುವಾಗಿದೆ' ಚಿತ್ರಗಳನ್ನು ನಿರ್ಮಾಣ ಮಾಡಿದರು. 'ಅವತಾರ್ ಪುರುಷ', 'ಅವನೇ ಶ್ರೀಮನ್ನಾರಾಯಣ', 'ಭೀಮಸೇನ ನಳಮಹಾರಾಜ', ವಿನಯ್ ರಾಜ್ ಕುಮಾರ್ ಚಿತ್ರ, '777 ಚಾರ್ಲಿ', ಅವರ ಮುಂದಿನ ನಿರ್ಮಾಣದ ಚಿತ್ರಗಳಾಗಿವೆ.
ತಮ್ಮ ನಿರ್ಮಾಣದ ಚಿತ್ರಗಳ ಜೊತೆಗೆ ನಟನೆಯನ್ನು ಕೂಡ ಶುರು ಮಾಡಲು ಪುಷ್ಕರ್ ಮಲ್ಲಿಕಾರ್ಜುನಯ್ಯ ತಯಾರಿ ನಡೆಸಿದ್ದಾರೆ.