Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಪ್ಪಿ ಚಿತ್ರದ ಕಥೆ ಕೇಳಿ ಕಾಜಲ್ ಏನಂದ್ರು? ಆರ್ ಚಂದ್ರು ಹೇಳಿದ್ದೇನು?
ರಿಯಲ್ ಸ್ಟಾರ್ ಉಪೇಂದ್ರ ಚಿತ್ರಕ್ಕೆ ಸೌತ್ ಸುಂದರಿ ಕಾಜಲ್ ಅಗರ್ ವಾಲ್ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಕಳೆದ ಎರಡ್ಮೂರು ದಿನದಿಂದ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಆರ್ ಚಂದ್ರು ನಿರ್ದೇಶನ ಮಾಡುತ್ತಿರುವ 'ಕಬ್ಜ' ಚಿತ್ರಕ್ಕಾಗಿ ಕಾಜಲ್ ಅಗರ್ ವಾಲ್ ಸ್ಯಾಂಡಲ್ ವುಡ್ ಪ್ರವೇಶ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಸಿಕ್ಕರಲಿಲ್ಲ.
ಇದೀಗ, ಆರ್ ಚಂದ್ರು ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 'ಕಾಜಲ್ ಅಗರ್ ವಾಲ್ ಅವರನ್ನ ಸಂಪರ್ಕಿಸಿರುವುದು ನಿಜ. ಕಬ್ಜ ಚಿತ್ರದ ಕಥೆ ಹೇಳಲಾಗಿದೆ. ಕಥೆ ಕೇಳಿದ ಕಾಜಲ್ ಸ್ಕ್ರಿಪ್ಟ್ ಕುರಿತು ಖುಷಿ ವ್ಯಕ್ತಪಡಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ನಟಿಸಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಇನ್ನು ಓಕೆ ಮಾಡಿಲ್ಲ. ಒಮ್ಮೆ ಅವರು ಗ್ರೀನ್ ಸಿಗ್ನಲ್ ಕೊಟ್ಟ ಮೇಲೆ ನಾನೇ ಹೇಳುತ್ತೇನೆ'' ಎಂದಿದ್ದಾರೆ.
ರಿಯಲ್ ಸ್ಟಾರ್ ಗೆ ಕಾಜಲ್ ನಾಯಕಿ: ಕನ್ನಡಕ್ಕೆ ಬರ್ತಾರಾ ಸೌತ್ ಸುಂದರಿ?
ಕಬ್ಜ ಚಿತ್ರಕ್ಕೆ ಆಫರ್ ಹೋಗಿರುವುದು ನಿಜ. ಕಾಜಲ್ ಕಥೆ ಕೇಳಿರುವುದು ನಿಜ. ಆದರೆ, ಇನ್ನು ಒಪ್ಪುಗೆ ಸೂಚಿಸಿಲ್ಲ. ಹಾಗಾಗಿ, ಸದ್ಯಕ್ಕೆ ಕಾಜಲ್ ಬರುವಿಕೆ ಬಗೆಗಿನ ನಿರೀಕ್ಷೆ ಹಾಗಯೇ ಇರಲಿ.
'ಕಬ್ಜ' ಮಾಡಲು ಚಂದ್ರುಗೆ ಸ್ಫೂರ್ತಿ ನೀಡಿದ್ದು ಈ ಸಿನಿಮಾ
ಕಬ್ಜ ಸಿನಿಮಾದಲ್ಲಿ ಬಹುದೊಡ್ಡ ತಾರಬಳಗ ಇರಲಿದೆ. ಅಂಡರ್ ವರ್ಲ್ಡ್ ಆಧಾರಿತ ಕಥೆಯಾಗಿರುವುದರಿಂದ ಎಲ್ಲಾ ಭಾಷೆಯ ಕಲಾವಿದರನ್ನ ಕರೆದುಕೊಂಡು ಬರುವ ಪ್ಲಾನ್ ಮಾಡಿದ್ದಾರೆ ಆರ್ ಚಂದ್ರು. ತೆಲುಗು ನಟ ಜಗಪತಿ ಬಾಬು ಈ ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ.
ಈಗಾಗಲೇ ಕಬ್ಜ ಚಿತ್ರದಲ್ಲಿ ಉಪೇಂದ್ರ ಅವರ ಫಸ್ಟ್ ಲುಕ್ ಪೋಸ್ಟರ್ ಗಳು ಬಿಡುಗಡೆಯಾಗಿದ್ದು, ಭಾರಿ ಕುತೂಹಲ ಮೂಡಿಸಿದೆ.