twitter
    For Quick Alerts
    ALLOW NOTIFICATIONS  
    For Daily Alerts

    ಅಣ್ಣಾವ್ರಿಗೆ ಹಾಲಿನ ಅಭಿಷೇಕ ಅಭಿಮಾನಿಗಳಿಗೆ ಬಿರಿಯಾನಿ

    By Pavithra
    |

    Recommended Video

    ಅಣ್ಣಾವ್ರಿಗೆ ಹಾಲಿನ ಅಭಿಷೇಕ ಅಭಿಮಾನಿಗಳಿಗೆ ಬಿರಿಯಾನಿ | Filmibeat Kannada

    ಸಿನಿಮಾಗಳು ಬಿಡುಗಡೆ ಆಗುತ್ತಿದೆ ಅಂದರೆ ಸಾಕು ಚಿತ್ರವನ್ನ ಯಾವ ರೀತಿಯಲ್ಲಿ ಪ್ರಚಾರ ಮಾಡಬೇಕು ಅನ್ನುವುದರ ಬಗ್ಗೆ ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರುಗಳು ತಲೆ ಕೆಡಿಸಿಕೊಂಡಿರುತ್ತಾರೆ.

    ಸಿನಿಮಾದ ಕಂಟೆಂಟ್ ನಂತೆಯೇ ಪ್ರಚಾರವನ್ನ ವಿಭಿನ್ನವಾಗಿ ಮಾಡಿದರೆ ಮಾತ್ರ ಸಿನಿಮಾ ಅಭಿಮಾನಿಗಳು ನಮ್ಮ ಚಿತ್ರದ ಕಡೆ ತಿರುಗಿ ನೋಡುವುದು ಅನ್ನೋದನ್ನ ಖಚಿತವಾಗಿ ತಿಳಿದುಕೊಂಡಿರುವ ನಿರ್ದೇಶಕ ಆರ್ ಚಂದ್ರು, ತಾವೇ ನಿರ್ದೇಶನ ಮಾಡಿರುವ ಕನಕ ಚಿತ್ರದ ಬಿಡುಗಡೆಗೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

    ವರ್ಷದ ಆರಂಭದಲ್ಲೇ ಸ್ಟಾರ್ ಚಿತ್ರಗಳ ಸಂಭ್ರಮ ವರ್ಷದ ಆರಂಭದಲ್ಲೇ ಸ್ಟಾರ್ ಚಿತ್ರಗಳ ಸಂಭ್ರಮ

    ಥಿಯೇಟರ್ ಮುಂದೆ ಅಭಿಮಾನಿಗಳ ಜೊತೆ ಸೇರಿ ಅಭಿಮಾನಿ ಆಗಿ ಹಾಲು ಹಾಗೂ ಬಿರಿಯಾನಿ ಕಾಂಬಿನೇಶನ್ ನಲ್ಲಿ ಸಿನಿಮಾವನ್ನ ಪ್ರೇಕ್ಷಕರಿಗೆ ತೋರಿಸಲು ನಿರ್ಧಾರ ಮಾಡಿದ್ದಾರೆ. ಇದೇನಿದು ಹೊಸ ರೀತಿಯ ಪ್ರಮೋಷನ್ ಅಂತ ಕನ್ಫೂಸ್ ಆಗಬೇಡಿ, ಮುಂದೆ ಓದಿ

    ಅದ್ಧೂರಿ ಕಟೌಟ್ ನಿಲ್ಲಿಸಲು ನಿರ್ಧಾರ

    ಅದ್ಧೂರಿ ಕಟೌಟ್ ನಿಲ್ಲಿಸಲು ನಿರ್ಧಾರ

    ಮುಂದಿನ ಶುಕ್ರವಾರ ಅಂದರೆ ಶುಕ್ರವಾರ (ಜ.26) ರಂದು ಕನಕ ಸಿನಿಮಾವನ್ನ ರಿಲೀಸ್ ಮಾಡಲು ನಿರ್ದೇಶಕ ಆರ್ ಚಂದ್ರ ನಿರ್ಧಾರ ಮಾಡಿದ್ದಾರೆ. ಚಿತ್ರದ ಪ್ರಮೋಷನ್ ಗಾಗಿ ಡಾ ರಾಜ್ ಕುಮಾರ್ ಅವರ ಅತೀ ಎತ್ತರವಾದ ಕಟೌಟ್ ಅನ್ನು ಸಿನಿಮಾ ಮಂದಿರ ಮುಂದೆ ನಿಲ್ಲಿಸಲು ತಯಾರಿ ಮಾಡಿಕೊಂಡಿದ್ದಾರೆ.

    ಅಣ್ಣಾವ್ರ ಕಟೌಟ್ ಗೆ ಹಾಲಿನ ಅಭಿಷೇಕ

    ಅಣ್ಣಾವ್ರ ಕಟೌಟ್ ಗೆ ಹಾಲಿನ ಅಭಿಷೇಕ

    ಕನಕ ಚಿತ್ರಕ್ಕೆ ಅಣ್ಣಾವ್ರ ಅಭಿಮಾನಿ ಅನ್ನುವ ಟ್ಯಾಗ್ ಲೈನ್ ಇದೆ, ಚಿತ್ರದ ಕಥೆಯಲ್ಲಿ ಡಾ ರಾಜ್ ಕುಮಾರ್ ಅವರ ಆದರ್ಶಗಳನ್ನ ಅಳವಡಿಸಿಕೊಳ್ಳಲಾಗಿದೆ. ಇದೇ ಕಾರಣದಿಂದ ಡಾ ರಾಜ್ ಅವರ ಕಟೌಟ್ ಗೆ ಟ್ಯಾಂಕರ್ ನಲ್ಲಿ ಹಾಲನ್ನು ತಂದು ಅಭಿಷೇಕ ಮಾಡುವ ಪ್ಲಾನ್ ಮಾಡಲಾಗಿದೆ.

    ಸಿನಿಮಾ ಜೊತೆಯಲ್ಲಿ ಬಿರಿಯಾನಿ ಊಟ

    ಸಿನಿಮಾ ಜೊತೆಯಲ್ಲಿ ಬಿರಿಯಾನಿ ಊಟ

    ಜನವರಿ 26 ರಂದು ಬಿಡುಗಡೆ ಆಗುತ್ತಿರುವ ಕನಕ ಸಿನಿಮಾ ನೋಡುವ ಪ್ರೇಕ್ಷಕರಿಗೆ ಬಿರಿಯಾನಿ ಊಟ ಸಿಗಲಿದೆ. ಕೆ ಜಿ ರಸ್ತೆಯಲ್ಲಿ ರಿಲೀಸ್ ಆಗುವ ಮುಖ್ಯ ಚಿತ್ರಮಂದಿರದ ಬಳಿ ಬಿರಿಯಾನಿ ಹಂಚಲು ಚಿತ್ರತಂಡ ನಿರ್ಧರಿಸಿದೆ.

    ಮೂರು ದಿನಕ್ಕೂ ಮುಂಚೆಯೇ ಸಂಭ್ರಮಾಚರಣೆ

    ಮೂರು ದಿನಕ್ಕೂ ಮುಂಚೆಯೇ ಸಂಭ್ರಮಾಚರಣೆ

    ಕನಕ ಚಿತ್ರ ಜನವರಿ 26ರಂದು ಬಿಡುಗಡೆ ಆಗುತ್ತಿದ್ದು ಮೂರು ದಿನಕ್ಕೂ ಮುಂಚೆಯೇ ಸಿನಿಮಾ ಮಂದಿರದ ಮುಂದೆ ಕಟೌಟ್ ನಿಲ್ಲಿಸಲು ಪ್ಲಾನ್ ಮಾಡಲಾಗಿದೆ. ಕಟೌಟ್ ಕಟ್ಟಿದ ದಿನವೇ ಹಾಲಿನ ಅಭಿಷೇಕವನ್ನೂ ಮಾಡಲಾಗುತ್ತಂತೆ.

    English summary
    Kannada movie director R Chandru promises load of milk for the ever cutout of Rajkumar and will be served biriyani for fans.All of this will take place on the release day of the Kanaka film.
    Monday, January 15, 2018, 14:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X