Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಣ್ಣಾವ್ರಿಗೆ ಹಾಲಿನ ಅಭಿಷೇಕ ಅಭಿಮಾನಿಗಳಿಗೆ ಬಿರಿಯಾನಿ
Recommended Video
ಸಿನಿಮಾಗಳು ಬಿಡುಗಡೆ ಆಗುತ್ತಿದೆ ಅಂದರೆ ಸಾಕು ಚಿತ್ರವನ್ನ ಯಾವ ರೀತಿಯಲ್ಲಿ ಪ್ರಚಾರ ಮಾಡಬೇಕು ಅನ್ನುವುದರ ಬಗ್ಗೆ ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರುಗಳು ತಲೆ ಕೆಡಿಸಿಕೊಂಡಿರುತ್ತಾರೆ.
ಸಿನಿಮಾದ ಕಂಟೆಂಟ್ ನಂತೆಯೇ ಪ್ರಚಾರವನ್ನ ವಿಭಿನ್ನವಾಗಿ ಮಾಡಿದರೆ ಮಾತ್ರ ಸಿನಿಮಾ ಅಭಿಮಾನಿಗಳು ನಮ್ಮ ಚಿತ್ರದ ಕಡೆ ತಿರುಗಿ ನೋಡುವುದು ಅನ್ನೋದನ್ನ ಖಚಿತವಾಗಿ ತಿಳಿದುಕೊಂಡಿರುವ ನಿರ್ದೇಶಕ ಆರ್ ಚಂದ್ರು, ತಾವೇ ನಿರ್ದೇಶನ ಮಾಡಿರುವ ಕನಕ ಚಿತ್ರದ ಬಿಡುಗಡೆಗೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ವರ್ಷದ ಆರಂಭದಲ್ಲೇ ಸ್ಟಾರ್ ಚಿತ್ರಗಳ ಸಂಭ್ರಮ
ಥಿಯೇಟರ್ ಮುಂದೆ ಅಭಿಮಾನಿಗಳ ಜೊತೆ ಸೇರಿ ಅಭಿಮಾನಿ ಆಗಿ ಹಾಲು ಹಾಗೂ ಬಿರಿಯಾನಿ ಕಾಂಬಿನೇಶನ್ ನಲ್ಲಿ ಸಿನಿಮಾವನ್ನ ಪ್ರೇಕ್ಷಕರಿಗೆ ತೋರಿಸಲು ನಿರ್ಧಾರ ಮಾಡಿದ್ದಾರೆ. ಇದೇನಿದು ಹೊಸ ರೀತಿಯ ಪ್ರಮೋಷನ್ ಅಂತ ಕನ್ಫೂಸ್ ಆಗಬೇಡಿ, ಮುಂದೆ ಓದಿ
ಅದ್ಧೂರಿ ಕಟೌಟ್ ನಿಲ್ಲಿಸಲು ನಿರ್ಧಾರ
ಮುಂದಿನ ಶುಕ್ರವಾರ ಅಂದರೆ ಶುಕ್ರವಾರ (ಜ.26) ರಂದು ಕನಕ ಸಿನಿಮಾವನ್ನ ರಿಲೀಸ್ ಮಾಡಲು ನಿರ್ದೇಶಕ ಆರ್ ಚಂದ್ರ ನಿರ್ಧಾರ ಮಾಡಿದ್ದಾರೆ. ಚಿತ್ರದ ಪ್ರಮೋಷನ್ ಗಾಗಿ ಡಾ ರಾಜ್ ಕುಮಾರ್ ಅವರ ಅತೀ ಎತ್ತರವಾದ ಕಟೌಟ್ ಅನ್ನು ಸಿನಿಮಾ ಮಂದಿರ ಮುಂದೆ ನಿಲ್ಲಿಸಲು ತಯಾರಿ ಮಾಡಿಕೊಂಡಿದ್ದಾರೆ.
ಅಣ್ಣಾವ್ರ ಕಟೌಟ್ ಗೆ ಹಾಲಿನ ಅಭಿಷೇಕ
ಕನಕ ಚಿತ್ರಕ್ಕೆ ಅಣ್ಣಾವ್ರ ಅಭಿಮಾನಿ ಅನ್ನುವ ಟ್ಯಾಗ್ ಲೈನ್ ಇದೆ, ಚಿತ್ರದ ಕಥೆಯಲ್ಲಿ ಡಾ ರಾಜ್ ಕುಮಾರ್ ಅವರ ಆದರ್ಶಗಳನ್ನ ಅಳವಡಿಸಿಕೊಳ್ಳಲಾಗಿದೆ. ಇದೇ ಕಾರಣದಿಂದ ಡಾ ರಾಜ್ ಅವರ ಕಟೌಟ್ ಗೆ ಟ್ಯಾಂಕರ್ ನಲ್ಲಿ ಹಾಲನ್ನು ತಂದು ಅಭಿಷೇಕ ಮಾಡುವ ಪ್ಲಾನ್ ಮಾಡಲಾಗಿದೆ.
ಸಿನಿಮಾ ಜೊತೆಯಲ್ಲಿ ಬಿರಿಯಾನಿ ಊಟ
ಜನವರಿ 26 ರಂದು ಬಿಡುಗಡೆ ಆಗುತ್ತಿರುವ ಕನಕ ಸಿನಿಮಾ ನೋಡುವ ಪ್ರೇಕ್ಷಕರಿಗೆ ಬಿರಿಯಾನಿ ಊಟ ಸಿಗಲಿದೆ. ಕೆ ಜಿ ರಸ್ತೆಯಲ್ಲಿ ರಿಲೀಸ್ ಆಗುವ ಮುಖ್ಯ ಚಿತ್ರಮಂದಿರದ ಬಳಿ ಬಿರಿಯಾನಿ ಹಂಚಲು ಚಿತ್ರತಂಡ ನಿರ್ಧರಿಸಿದೆ.
ಮೂರು ದಿನಕ್ಕೂ ಮುಂಚೆಯೇ ಸಂಭ್ರಮಾಚರಣೆ
ಕನಕ ಚಿತ್ರ ಜನವರಿ 26ರಂದು ಬಿಡುಗಡೆ ಆಗುತ್ತಿದ್ದು ಮೂರು ದಿನಕ್ಕೂ ಮುಂಚೆಯೇ ಸಿನಿಮಾ ಮಂದಿರದ ಮುಂದೆ ಕಟೌಟ್ ನಿಲ್ಲಿಸಲು ಪ್ಲಾನ್ ಮಾಡಲಾಗಿದೆ. ಕಟೌಟ್ ಕಟ್ಟಿದ ದಿನವೇ ಹಾಲಿನ ಅಭಿಷೇಕವನ್ನೂ ಮಾಡಲಾಗುತ್ತಂತೆ.