Don't Miss!
- Automobiles ಬೈಕಿನಂತೆ ಮೈಲೇಜ್, ಹಿಂದೆಗಿಂತಲೂ ಬಲಿಷ್ಠವಾಗಿ ಸ್ವಿಫ್ಟ್ ಅಖಾಡಕ್ಕೆ: ಖರೀದಿಸಲು ಕ್ಯೂ ನಿಲ್ಲಲು ರೆಡಿಯಾಗಿರಿ!
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೆಲುಗಿನಲ್ಲಿ 'ಚಾರ್ಮಿನಾರ್' ಕಟ್ಟಿದರು ಆರ್ ಚಂದ್ರು
'ಬ್ರಹ್ಮ' ಚಿತ್ರದ ಬಳಿಕ ನಿರ್ದೇಶಕ ಆರ್ ಚಂದ್ರು ಸಖತ್ ಬಿಜಿಯಾಗಿದ್ದಾರೆ. ಅವರು ಇತ್ತ ಸ್ಯಾಂಡಲ್ ವುಡ್ ಅತ್ತ ಟಾಲಿವುಡ್ ಎರಡೂ ಕಡೆ ಬಿಜಿಯಾಗಿರುವುದು ವಿಶೇಷ. ಕನ್ನಡದಲ್ಲಿ ಸೆಂಚುರಿ ಬಾರಿಸಿದ್ದ 'ಚಾರ್ಮಿನಾರ್' ಚಿತ್ರ ಇದೀಗ ತೆಲುಗಿಗೆ ರೀಮೇಕ್ ಆಗಿದ್ದು ಇನ್ನೇನು ಶೀಘ್ರದಲ್ಲೇ ಬಿಡುಗಡೆಯಾಗಲು ರೆಡಿಯಾಗಿದೆ.
ಆರ್ ಚಂದ್ರು ಅವರ ತೆಲುಗು ಚಿತ್ರಕ್ಕೆ 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಎಂದು ಹೆಸರಿಡಲಾಗಿದ್ದು, ಇತ್ತೀಚೆಗಷ್ಟೇ ಡಬ್ಬಿಂಗ್ ಕೆಲಸ ಮುಗಿದಿದೆ. ಸುಧೀರ್ ಬಾಬು ಹಾಗೂ ನಂದಿತಾ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಲಗಡಪತಿ ಶ್ರೀಧರ್ ಚಿತ್ರವನ್ನು ನಿರ್ಮಿಸಿದ್ದಾರೆ. [ಪ್ರಿನ್ಸ್ ಮಹೇಶ್ ಗೆ 'ಚಾರ್ಮಿನಾರ್' ಚಂದ್ರು ಡೈರೆಕ್ಟರ್]
ಇತ್ತೀಚೆಗೆ ಅವರು ತಮ್ಮ ಫೇಸ್ ಬುಕ್ ಸ್ಟೇಟಸ್ ನಲ್ಲಿ, " ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ ಡಬ್ಬಿಂಗ್ ಕೆಲಸ ಜೋರಾಗಿದೆ... ಈ ಗ್ಯಾಪ್ನಲ್ಲಿ ಮತ್ತೊಂದು ತೆಲುಗು ಸಿನಿಮಾಗೆ ಕಮಿಟ್.. ಸದ್ಯದಲ್ಲೇ ಅನೌನ್ಸ್...ಹೈದ್ರಾಬಾದ್ ಅಪ್ಪಿಕೊಳ್ತಿದೆ..." ಹೇಳಿಕೊಂಡಿದ್ದಾರೆ.
ಇದರ ಜೊತೆಗೆ ಅವರ ನಿರ್ಮಾಣದ 'ಮಳೆ' ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಫೆಬ್ರವರಿ, 2015ರ ವೇಳೆ ತೆರೆಕಾಣುವ ಸಾಧ್ಯತೆಗಳಿವೆ. ಈ ಬಗ್ಗೆ ಚಂದ್ರು ಅವರು, "ಸುಮಾರು ಒಂದು ವರ್ಷದ ನಂತರ ಮತ್ತೆ ನಮ್ ಮನೆ (ಸ್ಯಾಂಡಲ್ವುಡ್) ಕೆಲಸದಲ್ಲಿ ಸಕ್ರಿಯನಾಗಿದ್ದೇನೆ... ನಮ್ ಬ್ಯಾನರ್ನ ಎರಡನೇ ಸಿನಿಮಾ 'ಮಳೆ'ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ ಎಂದಿದ್ದಾರೆ. (ಫಿಲ್ಮಿಬೀಟ್ ಕನ್ನಡ)