ಚಿಟ್ಟೆ ವಸಿಷ್ಠಗೆ ನಾಯಕಿಯಾದ ನಟಿ ರಚಿತಾ ರಾಮ್
ಇತ್ತೀಚಿಗೆ 'ಆಯುಷ್ಮಾನ್ ಭವ' ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಮೊದಲ ಬಾರಿಗೆ ರಚಿತಾ ಜೋಡಿಯಾಗಿದ್ದಾರೆ. ಈ ಸಿನಿಮಾದ ನಂತರ ಮತ್ತೊಂದು ಹೊಸ ಸಿನಿಮಾಗೆ ರಚಿತಾ ಓಕೆ ಹೇಳಿದ್ದಾರೆ.
'ಟಗರು' ಚಿಟ್ಟೆ ಖ್ಯಾತಿಯ ನಟ ವಸಿಷ್ಠ ಸಿಂಹ ಮುಂದಿನ ಸಿನಿಮಾಗೆ ರಚಿತಾ ರಾಮ್ ನಾಯಕಿಯಾಗಿದ್ದಾರೆ. ವಿಶೇಷ ಅಂದರೆ, ಇದೇ ಮೊದಲ ಬಾರಿಗೆ ವಸಿಷ್ಟ ಜೊತೆಗೆ ರಚಿತಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ 'ಪಂಥ' ಎಂದು ಶೀರ್ಷಿಕೆ ಇಡಲಾಗಿದೆ.
'ಗೂಗಲ್' ಸಿನಿಮಾದ ನಂತರ ಗೀತರಚನೆಕಾರ ವಿ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡುತ್ತಿರುವ ಸಿನಿಮಾವಾಗಿದೆ. ಮೊದಲ ಬಾರಿಗೆ ರಚಿತಾ ರಾಮ್ ಗೆ ನಾಗೇಂದ್ರ ಪ್ರಸಾದ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಡಿಬೇಟ್ ಆನ್ ದಿ ಬೆಟ್ ಎಂಬ ಸಬ್ ಟೈಟಲ್ ಚಿತ್ರಕ್ಕೆ ಇಟ್ಟಿದ್ದು, ಕಥೆಯ ಮೇಲೆ ನಿರೀಕ್ಷೆ ಹುಟ್ಟಿಕೊಂಡಿದೆ.

ಮುಂದಿನ ತಿಂಗಳು 'ಪಂಥ' ಸಿನಿಮಾ ಲಾಂಚ್ ಆಗಲಿದೆ. ಸಿನಿಮಾಗೆ ನಾಗೇಂದ್ರ ಪ್ರಸಾದ್ ಸಾಹಿತ್ಯ ಇರಲಿದೆ. ಎನ್ ಶ್ರೀಧರ್ ಮತ್ತು ಎಲ್ ಅಶ್ವತ್ ನಾರಾಯಣ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.
ಈ ಸಿನಿಮಾಗಳ ಜೊತೆಗೆ ಧನಂಜಯ್ ನಟನೆಯ ಸಿನಿಮಾಗೆ ರಚಿತಾ ರಾಮ್ ನಾಯಕಿಯಾಗಿದ್ದಾರೆ. 'ಏಪ್ರಿಲ್' ಅವರ ಮುಂದಿನ ಸಿನಿಮಾಗಳಲ್ಲಿ ಒಂದು.


Click it and Unblock the Notifications











