Don't Miss!
- News ಲೋಕಸಭಾ ಚುನಾವಣೆಯಲ್ಲಿ ಕೊಡಗಿನಲ್ಲಿ ಮತ್ತೆ ‘ಕೈ’ ಕಮಾಲ್?: ಒಂದಷ್ಟು ನಾಯಕರು ಮೌನವಾಗಿದ್ದೇಕೆ?
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೆ ಬೆಳ್ಳಿಪರದೆ ಮೇಲೆ ಕಮಾಲ್ ಮಾಡಲಿದೆಯಾ ದಚ್ಚು-ರಚ್ಚು ಜೋಡಿ?
Recommended Video
'ಬುಲ್ ಬುಲ್' ಸಿನಿಮಾದ ಮೂಲಕ ಕನ್ನಡ ಸಿನಿರಸಿಕರ ಮನಸ್ಸು ಕದ್ದಿರುವ ನಟಿ ರಚಿತಾ ರಾಮ್. ಚಿತ್ರರಂಗಕ್ಕೆ ಕಾಲಿಟ್ಟ ಮೊದಲ ಚಿತ್ರದಿಂದಲೇ ಸ್ಯಾಂಡಲ್ ವುಡ್ ಸ್ಟಾರ್ ನಟರ ಜೊತೆ ಅಭಿನಯಿಸುವುದಕ್ಕೆ ಅವಕಾಶ ಗಿಟ್ಟಿಸಿಕೊಂಡ ಅವರು. 'ಬುಲ್ ಬುಲ್', 'ಅಂಬರೀಶ', 'ಜಗ್ಗುದಾದ' ಚಿತ್ರಗಳಲ್ಲಿ ಚಾಲೆಂಜಿಂಗ್ ಸ್ಟಾರ್ ಜೊತೆ ಕಾಣಿಸಿಕೊಂಡಿದ್ದ ರಚಿತಾ ಮತ್ತೆ ಇದೀಗ ದರ್ಶನ್ ಜೊತೆ ಅಭಿನಯಿಸುವುದಕ್ಕೆ ಆಯ್ಕೆಯಾಗಿದ್ದಾರೆ.
ದರ್ಶನ್ ಹಾಗೂ ರಚಿತಾ ಅಭಿನಯದ ಎರಡು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡಿತ್ತು. ಅಭಿಮಾನಿಗಳು ಕೂಡ ಇವರಿಬ್ಬರ ಜೋಡಿಯನ್ನು ಮೆಚ್ಚಿಕೊಂಡಿದ್ದರು. ಬೆಳ್ಳಿ ಪರದೆ ಮೇಲೆ ದರ್ಶನ್ ರಿಗೆ ರಚಿತಾ ರಾಮ್ ಪರ್ಫೆಕ್ಟ್ ಜೋಡಿ ಎನ್ನುವ ಮಾತು ಕೂಡ ಇದೆ. ಹೀಗಿರುವಾಗ ಈಗ ಅದೇ ಜೋಡಿ ಮತ್ತೆ ಪ್ರೇಕ್ಷಕರನ್ನು ಮೋಡಿ ಮಾಡಲು ಸಜ್ಜಾಗಿದೆ. ಮುಂದೆ ಓದಿ...
ಮತ್ತೆ ತೆರೆ ಮೇಲೆ ದಚ್ಚು-ರಚ್ಚು ಜೋಡಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಇಬ್ಬರು ಒಂದೇ ಸಿನಿಮಾದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ದರ್ಶನ್ ಅಭಿನಯದ 51ನೇ ಚಿತ್ರಕ್ಕೆ ರಚಿತಾ ರಾಮ್ ಅವರನ್ನೇ ನಾಯಕಿಯಾಗಿ ಚಿತ್ರತಂಡ ಆಯ್ಕೆ ಮಾಡಿದೆ ಎನ್ನುವ ಸುದ್ದಿ ಗಾಂಧಿನಗರದ ತುಂಬೆಲ್ಲಾ ಹಬ್ಬಿದೆ.
ಕೊನೆಯ ಹಂತದ ಚಿತ್ರೀಕರಣದಲ್ಲಿ 'ಕುರುಕ್ಷೇತ್ರ'
ದರ್ಶನ್ ಅಭಿನಯದ 50ನೇ ಚಿತ್ರ 'ಕುರುಕ್ಷೇತ್ರ'ದ ಚಿತ್ರೀಕರಣ ಕೊನೆಯ ಹಂತ ತಲುಪಿದೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ ಕುಂಬಳಕಾಯಿ ಹೊಡೆದು ಶೂಟಿಂಗ್ ಮುಗಿಸಲಿದ್ದಾರೆ ಮುನಿರತ್ನ ಮತ್ತು ತಂಡ. ಸೋ, 'ಕುರುಕ್ಷೇತ್ರ'ದ ನಂತರ ಡಿಸೆಂಬರ್ ಪ್ರಾರಂಭದಲ್ಲಿಯೇ ಡಿ ಬಾಸ್ ಅಭಿನಯದ 51 ನೇ ಚಿತ್ರ ಸೆಟ್ಟೇರಲಿದೆ.
ಪಕ್ಕಾ ಕಮರ್ಶಿಯಲ್ ಸಿನಿಮಾ
ದರ್ಶನ್ ಅಭಿನಯದ 51ನೇ ಚಿತ್ರವನ್ನು ಪಿ ಕುಮಾರ್ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ 'ಜೈಲಲಿತಾ', 'ವಿಷ್ಣುವರ್ಧನ' ಸಿನಿಮಾಗೆ ಆಕ್ಷನ್ ಕಟ್ ಹೇಳಿರುವ ಪಿ.ಕುಮಾರ್ ದರ್ಶನ್ ಗಾಗಿ ಕಮರ್ಶಿಯಲ್ ಸಬ್ಜೆಕ್ಟ್ ಮಾಡಿಕೊಂಡಿದ್ದಾರಂತೆ .
ಇನ್ನೂ ಹುಡುಕಾಟದಲ್ಲಿ ಚಿತ್ರತಂಡ
ಗಾಸಿಪ್ ಗಳಿರುವಂತೆ ಶೈಲಜನಾಗ್ ನಿರ್ಮಾಣದ ಸಿನಿಮಾಗೆ ರಚಿತಾ ನಾಯಕಿ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ನಿರ್ಮಾಪಕರು ಮಾತ್ರ ಸಿನಿಮಾದ ''ಪ್ರೀ ಪ್ರೊಡಕ್ಷನ್ ಕೆಲಸ ಶುರುವಾಗಿದೆ. ನಾಯಕಿ ಆಯ್ಕೆ ಕೆಲಸ ನಡೆಯುತ್ತಿದೆ, ಇನ್ನೂ ಫೈನಲ್ ಮಾಡಿಲ್ಲ'' ಅಂತಾರೆ. ಆದರೆ ನಿಜಕ್ಕೂ ರಚಿತಾ ಮತ್ತೆ ದರ್ಶನ್ ಗೆ ಜೊತೆಯಾದರೆ ಅಭಿಮಾನಿಗಳಿಗಂತು ಅದು ಸಂತಸದ ಸುದ್ದಿ.