Don't Miss!
- Lifestyle ದೇಹದಲ್ಲಿ ಈ 7 ಭಾಗದಲ್ಲಿ ಊತ ಉಂಟಾದರೆ ಅದು ಫ್ಯಾಟಿ ಲಿವರ್ನ ಲಕ್ಷಣವಾಗಿದೆ, ನಿರ್ಲಕ್ಷ್ಯ ಮಾಡಬೇಡಿ
- Finance ನೀರಿನ ಬಿಕ್ಕಟ್ಟು: ಬೆಂಗಳೂರು ತೊರೆಯಲು ಮುಂದಾದ ಅನೇಕ ನಿವಾಸಿಗಳು!
- Technology ಇಂದು ಒನ್ಪ್ಲಸ್ನ ಈ ಸ್ಪೆಷಲ್ ಮೊಬೈಲ್ನ ಫಸ್ಟ್ ಸೇಲ್!..ಬೆಲೆ ಎಷ್ಟು ಅಂತೀರಾ?
- News ಚಾಮರಾಜನಗರ: 12 ವರ್ಷಗೊಳಿಗೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಎಲ್ಲರನ್ನೂ ಬಯ್ಯೋದೇ ವಿಶೇಷ.!-ಬೈಗಳು ಹೇಗಿರುತ್ತವೆ ಗೊತ್ತಾ?
- Automobiles ಭಾರತದ ರಸ್ತೆಯಲ್ಲಿ ಘರ್ಜಿಸಲು ಬಂದ ಪವರ್ಫುಲ್ ಎಪ್ರಿಲಿಯಾ ಬೈಕ್ ವಿತರಣೆ ಮಾಹಿತಿ ಬಹಿರಂಗ
- Sports ಆರ್ಸಿಬಿ ಸ್ಟಾರ್ ಶ್ರೇಯಾಂಕಾ ಪಾಟೀಲ್ ಬಗ್ಗೆ ನಿಮಗೆಷ್ಟು ಗೊತ್ತು?; ಶಿಕ್ಷಣ, ವಯಸ್ಸು, ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾಹಿತಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕುಸ್ತಿ' ವಿವಾದಕ್ಕೆ ಬ್ರೇಕ್, ಕಿಚ್ಚನ ಮಾತಿಗೆ ಬೆಲೆ ಕೊಟ್ಟ ಮಣಿಕಂಠ
ದುನಿಯಾ ವಿಜಯ್ ಅಭಿನಯದ 'ಕುಸ್ತಿ' ಮತ್ತು ಸುದೀಪ್ ಅಭಿನಯಿಸುತ್ತಿರುವ 'ಪೈಲ್ವಾನ್' ಚಿತ್ರದ ನಡುವಿನ ವಿವಾದಕ್ಕೆ ವಿಜಿ ಬ್ರೇಕ್ ಹಾಕಿದ್ದಾರೆ. ಮನೆಬಿಟ್ಟು ಹೋಗಿದ್ದ ಹುಡುಗ ಮತ್ತೆ ಮನೆ ಸೇರಿರುವ ವಿಷ್ಯವನ್ನ ಸುದೀಪ್ ಹಂಚಿಕೊಂಡಿದ್ದಾರೆ.
ಕಾಜಲ್ ಅಗರ್ ವಾಲ್ ಹುಟ್ಟುಹಬ್ಬಕ್ಕೆ ನಿರ್ದೇಶಕ ರಮೇಶ್ ಅರವಿಂದ್ ವಿಶೇಷವಾದ ಉಡುಗೊರೆ ನೀಡಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನಟ ಸತೀಶ್ ನೀನಾಸಂ ಅವರ ಬರ್ತಡೇ ನಾಳೆಯಿದ್ದು, ಅವರು ಕೂಡ ಭರ್ಜರಿ ಗಿಫ್ಟ್ ನೀಡುವ ಬಗ್ಗೆ ತಿಳಿಸಿದ್ದಾರೆ.
ನವರಸ ನಾಯಕ ಜಗ್ಗೇಶ್ ಅವರು ತಮ್ಮ ಹಳೆಯ ರಹಸ್ಯವೊಂದನ್ನ ಬಹಿರಂಗಪಡಿಸಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರು ಸಂದೇಶವೊಂದನ್ನ ನೀಡಿ ಗಮನ ಸೆಳೆದಿದ್ದಾರೆ. ಇದೆಲ್ಲ ಇಂದಿನ ಟ್ವಿಟ್ಟರ್ ಲೋಕದಲ್ಲಿ ನಮ್ಮ ಸಿನಿತಾರೆಯರು ಮಾಡಿರುವ ಟ್ವೀಟ್ ಗಳು. ಹಾಗಿದ್ರೆ, ಯಾರು ಏನು ಟ್ವೀಟ್ ಮಾಡಿದ್ದಾರೆ ಎಂದು ಮುಂದೆ ನೋಡಿ.....
|
ಕಾಣೆಯಾಗಿದ್ದ ಹುಡುಗ ಪತ್ತೆ
ಮನೆಯಿಂದ ಕಾಣೆಯಾಗಿದ್ದ ಮಣಿಕಂಠ ಎಂಬ ಹುಡುಗ ಮತ್ತೆ ಮನೆ ಸೇರಿದ್ದಾನೆ ಎಂಬ ಸುದ್ದಿಯನ್ನ ಸುದೀಪ್ ಹಂಚಿಕೊಂಡಿದ್ದಾರೆ. ಈ ಹುಡುಗ ಮನೆಯವರ ಮೇಲೆ ಕೋಪ ಮಾಡಿಕೊಂಡು ಮನೆಬಿಟ್ಟು ಹೋಗಿದ್ದ ನಂತರ ಸುದೀಪ್ ಅವರ ಈ ಹುಡುಗನಿಗೆ ಮರಳಿ ಮನೆಗೆ ಬರುವಂತೆ ಮನವಿ ಮಾಡಿಕೊಂಡಿದ್ದರು. ಕೊನೆಗೂ ಮಣಿಕಂಠ ಮನೆ ಸೇರಿದ್ದಾನೆ.
ಕಿಚ್ಚನ ಮಾತು ಕೇಳಿದ ಅಭಿಮಾನಿ : ಮನೆಗೆ ಮರಳಿದ ಮಗ
|
ಜಗ್ಗೇಶ್ ರಹಸ್ಯ ಬಯಲು
ಅದೊಂದು ಕಾಲವಿತ್ತು, ಜಗ್ಗೇಶ್ ಅವರ ತುಂಬಾ ಸಿಗರೇಟ್ ಸೇದುತ್ತಿದ್ದರಂತೆ. ಈಗ ಆ ಅಭ್ಯಾಸವಿಲ್ಲ ಬಿಡಿ. 2002 ರಲ್ಲಿ ಕ್ಲಿಕ್ಕಿಸಿದ ಫೋಟೋವೊಂದನ್ನ ಶೇರ್ ಮಾಡಿರುವ ಜಗ್ಗೇಶ್ ತಮ್ಮ ಹಳೆಯ ನೆನಪೊಂದನ್ನ ಹಂಚಿಕೊಂಡಿದ್ದಾರೆ.
|
ಸುದೀಪ್ ಬಗ್ಗೆ ಗೌರವವಿದೆ
ದುನಿಯಾ ವಿಜಯ್ ಅಭಿನಯದ 'ಕುಸ್ತಿ' ಟೀಸರ್ ರಿಲೀಸ್ ಆದಾಗನಿಂದಲೂ ಕಿಚ್ಚನ ಫ್ಯಾನ್ಸ್ ಗರಂ ಆಗಿದ್ದರು. 'ಕುಸ್ತಿ' ಟೀಸರ್ ನಲ್ಲಿ ಸುದೀಪ್ ಗೆ ಟಾಂಗ್ ಕೊಡಲಾಗಿದೆ. ಕಿಚ್ಚನ 'ಪೈಲ್ವಾನ್' ಚಿತ್ರವನ್ನ ಅಣುಕಿಸಲಾಗಿದೆ ಸುದೀಪ್ ಅಭಿಮಾನಿಗಳು ಎಂದೆಲ್ಲ ಬೇಸರ, ಆಕ್ರೋಶ ಹೊರಹಾಕಿದ್ದರು. ಈ ವಿವಾದಕ್ಕೆ ಸ್ವತಃ ದುನಿಯಾ ವಿಜಯ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಈ ವಿವಾದಕ್ಕೆ ಅಂತ್ಯವಾಡಿದ್ದಾರೆ.
ತಂದಿಟ್ಟು ತಮಾಷೆ ನೋಡೋರು ದುನಿಯಾ ವಿಜಿ ಹೇಳಿದ್ದನ್ನ ನೋಡಿ
— Upendra (@nimmaupendra) June 19, 2018 |
ಉಪ್ಪಿಯ ಸಂದೇಶ
''ಮಾರ್ಗವು ನೇರವಾಗಿರುವುದಿಲ್ಲ. ಅದು ಸುರಳಿಯಾಗಿರುತ್ತದೆ. ನಿಮ್ಮ ನಿರಂತರವಾಗಿ ಮಾರ್ಗದಲ್ಲಿ ನೀವು ಅರ್ಥಮಾಡಿಕೊಂಡ ಮತ್ತು ಆಳವಾದ ಸತ್ಯಗಳನ್ನ ನೋಡುತ್ತೀರಿ'' ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.
|
ಕಾಜಲ್ ಬರ್ತಡೇಗೆ ವಿಶ್ ಮಾಡಿದ ರಮೇಶ್
ರಮೇಶ್ ಅರವಿಂದ್ ಹಿಂದಿಯ 'ಕ್ವೀನ್' ಸಿನಿಮಾವನ್ನು ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ರಿಮೇಕ್ ಮಾಡುತ್ತಿರುವ ವಿಷಯ ಎಲ್ಲರಿಗೂ ಇಳಿದಿದೆ. ತಮಿಳಿನಲ್ಲಿ 'ಪ್ಯಾರಿಸ್ ಪ್ಯಾರಿಸ್' ಹೆಸರಿನಲ್ಲಿ ಬರುತ್ತಿರುವ ಈ ಸಿನಿಮಾದಲ್ಲಿ ನಟಿ ಕಾಜಲ್ ಅಗರ್ವಾಲ್ ನಟಿಸಿದ್ದಾರೆ. ಇಂದು ಕಾಜಲ್ ಬರ್ತಡೇ ವಿಶೇಷವಾಗಿ ಆ ಚಿತ್ರದ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.
ಕಾಜಲ್ ಅಗರ್ವಾಲ್ ಹುಟ್ಟುಹಬ್ಬಕ್ಕೆ ರಮೇಶ್ ಕೊಟ್ರು ಗಿಫ್ಟ್
|
ಸತೀಶ್ ನೀನಾಸಂ ಕಡೆಯಿಂದ ಗಿಫ್ಟ್
ಜೂನ್ 20 ರಂದು ಸತೀಶ್ ನೀನಾಸಂ ಅವರ ಹುಟ್ಟುಹಬ್ಬ. ಈ ವಿಶೇಷವಾಗಿ ಸತೀಶ್ ಅಭಿನಯದ ಅಯೋಗ್ಯ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಈ ವಿಷ್ಯವನ್ನ ಸತೀಶ್ ನೀನಾಸಂ ಅವರೇ ತಿಳಿಸಿದ್ದಾರೆ.