Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಂಚನೆ ಆರೋಪಿ ಯುವರಾಜ್ ಜೊತೆ ಸಿನಿಮಾ ಮಾಡಲು ನಿರ್ಧರಿಸಿದ್ದ ರಾಧಿಕಾ, ಯಾವುದು ಆ ಮೆಗಾ ಪ್ರಾಜೆಕ್ಟ್?
ಆರ್ಎಸ್ಎಸ್ ಮುಖಂಡ ಅಂತ ನಂಬಿಸಿ ಉದ್ಯಮಿಗಳಿಗೆ, ಪ್ರಭಾವಿ ವ್ಯಕ್ತಿಗಳಿಗೆ ಮೋಸ ಮಾಡುತ್ತಿದ್ದ ಯುವರಾಜ್ ಎಂಬ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಂಚನೆ ಆರೋಪಿ ಯುವರಾಜ್ ಜೊತೆ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಸಂಪರ್ಕ ಇತ್ತು, ಯುವರಾಜ್ ಖಾತೆಯಿಂದ ಸುಮಾರು ಒಂದೂವರೆ ಕೋಟಿ ಹಣ ರಾಧಿಕಾ ಖಾತೆಗೆ ವರ್ಗಾವಣೆ ಆಗಿದೆ ಎಂಬ ವಿಚಾರವೂ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಯಾಯಿತು.
Recommended Video
ಈ ಕುರಿತು ಸ್ಪಷ್ಟನೆ ನೀಡಲು ಸುದ್ದಿಗೋಷ್ಠಿ ಕರೆದಿದ್ದ ನಟಿ ರಾಧಿಕಾ ಕುಮಾರಸ್ವಾಮಿ, ''ಯುವರಾಜ್ ಎಂಬ ವ್ಯಕ್ತಿ ನನ್ನ ಖಾತೆಗೆ ಹಣ ವರ್ಗಾವಣೆ ಮಾಡಿರುವುದು ನಿಜ, ಆದರೆ, ಒಂದೂವರೆ ಕೋಟಿಯಲ್ಲ, ಅದು ಸಿನಿಮಾ ವಿಚಾರವಾಗಿ ಹಣ ಕಳುಹಿಸಿದ್ದು, ಬೇರೆ ಯಾವುದು ವ್ಯವಹಾರ ನಡೆದಿಲ್ಲ'' ಎಂದು ವಿವರಿಸಿದ್ದಾರೆ. ಅಷ್ಟಕ್ಕೂ, ಯುವರಾಜ್ ಜೊತೆ ರಾಧಿಕಾ ಮಾಡಲು ನಿರ್ಧರಿಸಿದ್ದ ಚಿತ್ರ ಯಾವುದು? ಮುಂದೆ ಓದಿ...
ಐತಿಹಾಸಿಕ ಸಿನಿಮಾ ಮಾಡಲು ಚರ್ಚೆ
''ಯುವರಾಜ್ ಅವರ ಪತ್ನಿ ಸಿನಿಮಾ ನಿರ್ಮಾಪಕಿ. ಅವರದ್ದು ವೈಷ್ಣವಿ ಪ್ರೊಡಕ್ಷನ್ ಸಂಸ್ಥೆ ಸಹ ಇದೆ. ಐತಿಹಾಸಿಕ ಸಿನಿಮಾ ಮಾಡೋಣ ಅಂತ ಚರ್ಚೆ ಸಹ ಮಾಡಿದ್ದರು. ಈ ಬಗ್ಗೆ ನಾನು ಆಸಕ್ತಿ ಕೊಟ್ಟಿದ್ದರಿಂದ ಅವರು ನನಗೆ ಅಡ್ವಾನ್ಸ್ ಮಾಡಿದ್ದರು. ಈ ಸಂಬಂಧ 15 ಲಕ್ಷ ಹಣ ಅಡ್ವಾನ್ಸ್ ಮಾಡಿದ್ದರು. ಅದು ಅವರ ಖಾತೆಯಿಂದ ಕಳುಹಿಸಿದ್ದರು'' ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.
RSS ಮುಖಂಡ ಅಂತೇಳಿ ಕೋಟಿಗಟ್ಟಲೆ ವಂಚಿಸಿದ ಯುವರಾಜ್: ಖ್ಯಾತ ನಟಿ, ಸಹೋದರನ ಹೆಸರು ಲಿಂಕ್?
ನಾಟ್ಯರಾಣಿ ಶಾಂತಲ ಕುರಿತು ಚಿತ್ರ
''ವೈಷ್ಣವಿ ಪ್ರೊಡಕ್ಷನ್ ಸಂಸ್ಥೆಯ (ಯುವರಾಜ್ ಪತ್ನಿ ಮಾಲೀಕರು) ಜೊತೆ ನಾಟ್ಯರಾಣಿ ಶಾಂತಲ ಕುರಿತು ಸಿನಿಮಾ ಮಾಡಲು ಚರ್ಚೆಯಾಗಿತ್ತು. ನಾಟ್ಯರಾಣಿ ಶಾಂತಲ ಬಗ್ಗೆ ಸಿನಿಮಾ ಮಾಡಬೇಕು ಎನ್ನುವುದು ನನ್ನ ಬಹಳ ದಿನಗಳ ಕನಸು. ಇಂತಹ ಅವಕಾಶ ಸಿಕ್ಕಿದ ಸಂದರ್ಭದಲ್ಲಿ ಅದಕ್ಕೆ ಒಂದು ಟೀಂ ರೆಡಿ ಮಾಡೋಣ ಅಂತ ಚರ್ಚೆ ಮಾಡಿದ್ವಿ'' ಎಂದು ರಾಧಿಕಾ ಬಹಿರಂಗಪಡಿಸಿದ್ದಾರೆ.
ಮತ್ತೊಬ್ಬ ನಿರ್ಮಾಪಕನಿಂದಲೂ ಹಣ
''ಮತ್ತೊಬ್ಬ ನಿರ್ಮಾಪಕರಿಂದ 60 ಲಕ್ಷ ಹಣ ವರ್ಗಾವಣೆ ಮಾಡಿಸಿದ್ದರು. ನನ್ನ ಭಾವ ಎಂದು ಹೇಳಿದ್ದರು. ಬಹಳ ವರ್ಷದಿಂದ ಪರಿಚಯ ಇದ್ದ ಕಾರಣ ನಂಬಿಕೆಯಿಂದ ಸುಮ್ಮನೆ ಇದ್ದೆ. ಆದರೂ ನಮ್ಮ ಆಡಿಟರ್ ಈ ಚಿತ್ರಗಳ ಕುರಿತು ಅಗ್ರಿಮೆಂಟ್ ಹಾಕೋಣ ಎಂದು ಹೇಳಿದ್ಮೇಲೆ, ಯುವರಾಜ್ ಅವರಿಗೆ ಹಲವು ಬಾರಿ ಫೋನ್ ಮಾಡಿದರೂ, ಯಾವುದೋ ಒಂದು ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಸರಿ ಗೊತ್ತಿರುವ ವ್ಯಕ್ತಿ ಎಲ್ಲಿ ಹೋಗ್ತಾರೆ ಅಂತ ಸುಮ್ಮನಾಗಿದ್ವಿ'' ಎಂದು ರಾಧಿಕಾ ಮಾಹಿತಿ ನೀಡಿದ್ದಾರೆ.
ನನ್ನ ಬ್ಯಾನರ್ನಲ್ಲೇ ಮಾಡ್ತೀನಿ
ಇಷ್ಟೆಲ್ಲ ಆದ್ಮೇಲೆ ಅವರ ಜೊತೆಗಿನ ಸಿನಿಮಾ ಮಾಡೋಕೆ ಆಗಲ್ಲ. ಸಾಧ್ಯವಾದರೇ ನನ್ನದೇ ಬ್ಯಾನರ್ ಆ ಸಿನಿಮಾ ಮಾಡ್ತೇನೆ ಎಂದು ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ನನ್ನ ಖಾತೆಗೆ ಬಂದಿರುವ ಹಣಕ್ಕೆ ಸಂಬಂಧಿಸಿದಂತೆ ಆ ಹಣವನ್ನು ಆ ನಿರ್ಮಾಪಕರಿಗೆ ವಾಪಸ್ ಕೊಡುವುದಾಗಿ ರಾಧಿಕಾ ತಿಳಿಸಿದ್ದಾರೆ.