twitter
    For Quick Alerts
    ALLOW NOTIFICATIONS  
    For Daily Alerts

    ಅಮಾವಾಸ್ಯೆಯಂದು ಸ್ಮಶಾನದಲ್ಲಿ ಬಿದ್ದು ಬೆನ್ನಿಗೆ ಪೆಟ್ಟು ಮಾಡಿಕೊಂಡ ರಾಧಿಕಾ ಕುಮಾರಸ್ವಾಮಿ.!

    |

    Recommended Video

    ಭೈರಾದೇವಿ ಶೂಟಿಂಗ್‍ನಲ್ಲಿ ಅವಘಡ | FILMIBEAT KANNADA

    ಅದು ಅಮಾವಾಸ್ಯೆಯ ರಾತ್ರಿ.. ದುಷ್ಟ ಶಕ್ತಿಗಳು ಹೆಚ್ಚಾಗಿರುವ ಸಂದರ್ಭದಲ್ಲಿ ಕನ್ನಡ ಚಿತ್ರ 'ಭೈರಾದೇವಿ' ಚಿತ್ರೀಕರಣ ಬಿರುಸಿನಿಂದ ಸಾಗುತ್ತಿತ್ತು. ಶಾಂತಿನಗರದ ಸ್ಮಶಾನದಲ್ಲಿ 'ಭೈರಾದೇವಿ' ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿತ್ತು. ಇದಕ್ಕಾಗಿ ನಟಿ ರಾಧಿಕಾ ಕುಮಾರಸ್ವಾಮಿ ಕಾಳಿ ಅವತಾರ ತಾಳಿದ್ದರು.

    ಆಗ ಸಮಯ ಸುಮಾರು 1 ಗಂಟೆ.. ಕಾಳಿ ರೂಪದಲ್ಲಿದ್ದ ರಾಧಿಕಾ ಕುಮಾರಸ್ವಾಮಿ ಗೋರಿ ಮೇಲೆ ನಡೆದುಕೊಂಡು ಬರಬೇಕಿತ್ತು. ಹಾಗೆ ಕಾಳಿ ಮಂತ್ರ ಪಠಿಸುತ್ತಲೇ ಗೋರಿ ಮೇಲೆ ನಡೆದುಕೊಂಡು ಬರುವಾಗ ಅವಘಡ ಸಂಭವಿಸಿತು.

    ಅಚಾನಕ್ಕಾಗಿ ಆಯಾತಪ್ಪಿ ಗೋರಿಯಿಂದ ಕೆಳಗೆ ಬಿದ್ದು ಬಿಟ್ಟರು ನಟಿ ರಾಧಿಕಾ ಕುಮಾರಸ್ವಾಮಿ. ಪರಿಣಾಮ, ಅವರ ಬೆನ್ನಿಗೆ ಪೆಟ್ಟು ಬಿದ್ದಿದೆ. ಕೂದಲೆಳೆ ಅಂತರದಲ್ಲಿ ದೊಡ್ಡ ಅನಾಹುತದಿಂದ ಪಾರಾದ ನಟಿ ರಾಧಿಕಾ ಕುಮಾರಸ್ವಾಮಿ ಸದ್ಯ ಬೆಡ್ ರೆಸ್ಟ್ ನಲ್ಲಿದ್ದಾರೆ. ಮುಂದೆ ಓದಿರಿ...

    ಬಿದ್ದಾಗ ಏನೂ ಗೊತ್ತಾಗಲಿಲ್ಲ.!

    ಬಿದ್ದಾಗ ಏನೂ ಗೊತ್ತಾಗಲಿಲ್ಲ.!

    ಗೋರಿ ಮೇಲಿಂದ ಕೆಳಗೆ ಬಿದ್ದಾಗ, ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ನೋವು ಕಾಣಿಸಿಕೊಂಡಿಲ್ಲ. ಹೀಗಾಗಿ, ಅಂದು ಚಿತ್ರೀಕರಣ ಮುಂದುವರೆಸಿದ್ದಾರೆ. ಆದ್ರೆ, ಮಾರನೇ ದಿನ ಅವರಿಗೆ ಬೆನ್ನಿನಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ. ಹೀಗಾಗಿ ಆಸ್ಪತ್ರೆಗೆ ಭೇಟಿ ಕೊಟ್ಟರು.

    ಯಾವ ಸಿನಿಮಾಗಾಗಿ ಈ ರೀತಿ ಬದಲಾದರು ರಾಧಿಕಾ ಕುಮಾರಸ್ವಾಮಿ?ಯಾವ ಸಿನಿಮಾಗಾಗಿ ಈ ರೀತಿ ಬದಲಾದರು ರಾಧಿಕಾ ಕುಮಾರಸ್ವಾಮಿ?

    ಸ್ಪೈನಲ್ ಕಾರ್ಡ್ ಗೆ ಏಟು.!

    ಸ್ಪೈನಲ್ ಕಾರ್ಡ್ ಗೆ ಏಟು.!

    ಗೋರಿಯಿಂದ ಬಿದ್ದ ರಾಧಿಕಾ ಕುಮಾರಸ್ವಾಮಿ ಅವರ ಸ್ಪೈನಲ್ ಕಾರ್ಡ್ ಗೆ ಏಟು ಬಿದ್ದಿದೆ. ಖಾಸಗಿ ಆಸ್ಪತ್ರೆಯಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ತಿಂಗಳ ಕಾಲ ಬೆಡ್ ರೆಸ್ಟ್ ನಲ್ಲಿ ಇರುವಂತೆ ವೈದ್ಯರು ರಾಧಿಕಾ ಕುಮಾರಸ್ವಾಮಿ ಅವರಿಗೆ ಸೂಚಿಸಿದ್ದಾರೆ.

    'ಭೈರಾ ದೇವಿ' ಚಿತ್ರಕ್ಕಾಗಿ ಖಾಕಿ ತೊಟ್ಟ ನಟ ರಮೇಶ್ ಅರವಿಂದ್'ಭೈರಾ ದೇವಿ' ಚಿತ್ರಕ್ಕಾಗಿ ಖಾಕಿ ತೊಟ್ಟ ನಟ ರಮೇಶ್ ಅರವಿಂದ್

    ಇನ್ನೊಂದು ತಿಂಗಳು ಶೂಟಿಂಗ್ ಇಲ್ಲ.!

    ಇನ್ನೊಂದು ತಿಂಗಳು ಶೂಟಿಂಗ್ ಇಲ್ಲ.!

    ಇನ್ನೊಂದು ತಿಂಗಳು ಕದಲುವ ಹಾಗಿಲ್ಲ ಅಂತ ವೈದ್ಯರು ಹೇಳಿರುವ ಕಾರಣ, ಯಾವುದೇ ಚಿತ್ರೀಕರಣದಲ್ಲಿ ರಾಧಿಕಾ ಕುಮಾರಸ್ವಾಮಿ ಭಾಗವಹಿಸುವಂತಿಲ್ಲ. ಹೀಗಾಗಿ, 'ಭೈರಾದೇವಿ' ಚಿತ್ರದ ಶೂಟಿಂಗ್ ಕೂಡ ಅನಿವಾರ್ಯವಾಗಿ ಮುಂದೂಡಬೇಕಾಗಿದೆ.

    ರಾಧಿಕಾ ಕುಮಾರಸ್ವಾಮಿ ಪುತ್ರಿ ಶಮಿಕಾಗೆ ಇರುವ ಆಸೆ ಏನ್ಗೊತ್ತಾ.?ರಾಧಿಕಾ ಕುಮಾರಸ್ವಾಮಿ ಪುತ್ರಿ ಶಮಿಕಾಗೆ ಇರುವ ಆಸೆ ಏನ್ಗೊತ್ತಾ.?

    ನಿರ್ದೇಶಕ ಶ್ರೀಜೈ ಏನಂತಾರೆ.?

    ನಿರ್ದೇಶಕ ಶ್ರೀಜೈ ಏನಂತಾರೆ.?

    ''ಅಮಾವಾಸ್ಯೆ ದಿನ ಈ ಘಟನೆ ನಡೆಯಿತು. ಶಾಂತಿನಗರದ ಸ್ಮಶಾನದಲ್ಲಿ ರಾತ್ರಿ ಶೂಟಿಂಗ್ ಮಾಡ್ತಿದ್ವಿ. ಗೋರಿ ಮೇಲೆ ನಡೆದುಕೊಂಡು ಬರುವಾಗ ರಾಧಿಕಾ ಮೇಡಂ ಕೆಳಗೆ ಬಿದ್ದರು. ಬಿದ್ದಾಗ ಅವರಿಗೆ ಏನೂ ಅನಿಸಲಿಲ್ಲ. ಅವತ್ತು ಶೂಟಿಂಗ್ ಮಾಡಿದ್ವಿ. ಮಾರನೇ ದಿನ ರೆಸ್ಟ್ ಮಾಡಿ ಅಂತ ಹೇಳಿದ್ವಿ. ಮೈನರ್ ಪೆಟ್ಟಾಗಿದೆ. ಒಂದು ತಿಂಗಳು ರೆಸ್ಟ್ ನಲ್ಲಿ ಇರ್ತಾರೆ'' ಅಂತಾರೆ 'ಭೈರಾದೇವಿ' ಚಿತ್ರದ ನಿರ್ದೇಶಕ ಶ್ರೀಜೈ.

    English summary
    Kannada Actress Radhika Kumaraswamy injured while shooting for Kannada Movie Bhairadevi.
    Monday, February 11, 2019, 11:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X