Don't Miss!
- News ಹಾಸನದಲ್ಲಿ ಬಿಜೆಪಿಯ ಸಹಕಾರವಿಲ್ಲ, ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ: ಮತ್ತೆ ಸಂಕಷ್ಟದಲ್ಲಿ ದಳಪತಿ
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯುವರಾಜ್ ಹೇಳಿದ ಭವಿಷ್ಯ ನನ್ನ ಜೀವನದಲ್ಲಿ ನಿಜವಾಗಿದೆ, ಅವರನ್ನ ತುಂಬಾ ನಂಬಿದ್ದೆ; ರಾಧಿಕಾ ಕುಮಾರಸ್ವಾಮಿ
ಯುವರಾಜ್ ಜೊತೆಗಿನ ಹಣಕಾಸು ವ್ಯವಹಾರ ಆರೋಪದ ವಿಚಾರವಾಗಿ ನಟಿ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಮಾತನಾಡಿದ ರಾಧಿಕಾ, ಯುವರಾಜ್ ಅವರು 17 ವರ್ಷಗಳಿಂದ ಪರಿಚಯವಿದ್ದಾರೆ ಎಂದು ಹೇಳಿದ್ದಾರೆ.
Recommended Video
ತಂದೆಯ ಸ್ನೇಹಿತರು ಆ ಕಾಲದಿಂದನೂ ಅವರ ಜೊತೆ ಉತ್ತಮ ಸ್ನೇಹವಿದೆ ಎಂದಿದ್ದಾರೆ. ಅವರು ಹೇಳಿದ ಅನೇಕ ವಿಚಾರಗಳು ನಿಜವಾಗಿದೆ. ಹಾಗಾಗಿ ಅವರನ್ನು ತುಂಬಾ ನಂಬಿದ್ದೆವು ಎಂದು ರಾಧಿಕಾ ಬಹಿರಂಗ ಪಡಿಸಿದ್ದಾರೆ. ಯುವರಾಜ್ ಮತ್ತು ನನ್ನ ನಡುವೆ ಸಿನಿಮಾ ವಿಚಾರವಾಗಿ ಹಣಕಾಸಿನ ವ್ಯವಹಾರ ನಡೆದಿದ್ದು ಬಿಟ್ಟರೆ ಬೇರೆ ವ್ಯವಹಾರವೇನು ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯುವರಾಜ್ ಇಂತ ಮನುಷ್ಯ ಅಂತ ಗೊತ್ತಾಗಿದ್ದು, ಅವರು ಅರೆಸ್ಟ್ ಆದ್ಮೇಲೆಯೇ ಎಂದು ರಾಧಿಕಾ ಹೇಳಿದ್ದಾರೆ.
RSS ಮುಖಂಡ ಅಂತೇಳಿ ಕೋಟಿಗಟ್ಟಲೆ ವಂಚಿಸಿದ ಯುವರಾಜ್: ಖ್ಯಾತ ನಟಿ, ಸಹೋದರನ ಹೆಸರು ಲಿಂಕ್?
ಹೆಣ್ಣು ಮಗುವಾಗುತ್ತೆ ಎಂದು ಹೇಳಿದ್ದರು
ನಾನು ಚಿಕ್ಕವಳಿದ್ದೆ ಅಂದರೆ 16 ವರ್ಷದಳಾಗಿದ್ದಾಗ ನನ್ನ ಬಗ್ಗೆ ಭವಿಷ್ಯ ನುಡಿದಿದ್ದರು. ಭವಿಷ್ಯದಲ್ಲಿ ಟರ್ನಿಂಗ್ ಸಿಗುತ್ತೆ, ನಿನಗೆ ಹೆಣ್ಣು ಮಗುವಾಗುತ್ತೆ ಎಂದು ಹೇಳಿದ್ದರು ಅದು ನಿಜವಾಗಿದೆ. ತಂದೆಯ ಬಗ್ಗೆ ಹೇಳಿದ ಮಾತು ಸಹ ನಿಜವಾಗಿದೆ. ಅಪ್ಪನ ಜೊತೆ ತುಂಬಾ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದರು. ಹಾಗಾಗಿ ನಂಬಿದ್ದೆವು ಎಂದಿದ್ದಾರೆ.
ಅಪ್ಪನ ಬಗ್ಗೆ ಹೇಳಿದ ಭವಿಷ್ಯ ನಿಜವಾಗಿದೆ
ಅಪ್ಪನ್ನು ಕಳೆದುಕೊಳ್ಳುವ ಬಗ್ಗೆ ಮೊದಲೇ ಹೇಳಿದ್ದರು, ಕಂಟಕವಿದೆ ಎಂದಿದ್ದದು ಅವರು ಹೇಳಿದ ಹಾಗೆ ಆಯಿತು. ಆದರೆ ಅವರು ಹೇಳಿದ ಪೂಜೆಯನ್ನು ನಾವು ಮಾಡಿಸಿರಲಿಲ್ಲ. ಅದೊಂದು ಮಾಡಿಸಿದ್ದರೆ ಅಪ್ಪ ಇರುತ್ತಿದ್ದರೇನೋ ಎಂದು ಅನೇಕ ಬಾರಿ ಅನಿಸಿದೆ ಎಂದು ರಾಧಿಕಾ ಕುಮಾರಸ್ವಾಮಿ ಪತ್ರಿಕಾಗೋಷ್ಠಿ ಹೇಳಿದ್ದಾರೆ.
ನನ್ನ ಟೈಂ ಸರಿ ಇಲ್ಲ ಅಂದಿದ್ದರು
ಡಿಸೆಂಬರ್ ನಲ್ಲಿ ನನ್ನ ಟೈಂ ಸರಿ ಇರಲಿಲ್ಲ ಎಂದು ಸ್ವಾಮೀಜಿ ಹೇಳಿದ್ದರು. ಫೆಬ್ರವರಿ ಬಳಿಕ ಶುಕ್ರದೆಸೆ ಬರುತ್ತೆ ಎಂದಿದ್ದರು. ಆದ್ರೀಗ ಹೀಗೆಲ್ಲ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ ರಾಧಿಕಾ ಹೇಳಿದ್ದಾರೆ.
ನಾಟ್ಯರಾಣಿ ಶಾಕುಂತಲಾ ಸಿನಿಮಾದ ವ್ಯವಹಾರ
ಅವರ ಜೊತೆ ಐತಿಹಾಸಿಕ ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದೆ. ನಾಟ್ಯರಾಣಿ ಶಾಕುಂತಲಾ ಸಿನಿಮಾ ಮಾಡಲು ನಿರ್ಧರಿಸಿದ್ದೆ. ಕಲಾವಿದರು ಮತ್ತು ನಿರ್ದೇಶಕರ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಅವರ ಜೊತೆ ಸಿನಿಮಾ ಮಾಡಲ್ಲ. ಅವರ ಹಣವನ್ನು ವಾಪಸ್ ನೀಡಿ, ಅವರ ಜೊತೆಗಿನ ಸಂಬಂಧ ಕಡಿದುಕೊಳ್ಳುತ್ತೇವೆ. ಅವರ ಸಹವಾಸವೇ ಬೇಡ' ಎಂದು ರಾಧಿಕಾ ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.