Don't Miss!
- Sports CSK vs LSG IPL 2024: ಚೆನ್ನೈನ ಚೆಪಾಕ್ ಕೋಟೆಯನ್ನು ಭೇದಿಸುವುದೇ ಲಕ್ನೋ?; ಸಂಭಾವ್ಯ ಆಡುವ 11ರ ಬಳಗ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- News Ballari Lok Sabha Election: ಶ್ರೀರಾಮುಲು ಪತ್ನಿ ನಾಮಪತ್ರ ವಾಪಸ್, ಅಂತಿಮ ಕಣದಲ್ಲಿ 10 ಅಭ್ಯರ್ಥಿಗಳು
- Technology ನಾಳೆ ವಿವೋದ ಈ ಹೊಸ ಫೋನ್ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಲಭ್ಯ!
- Lifestyle ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಿರುಪತಿಯಲ್ಲಿ ರಾಘವ ಲಾರೆನ್ಸ್ ಗೆ ಅರ್ಧಚಂದ್ರ
ಕೊರಿಯೋಗ್ರಾಫರ್, ನಟ, ನಿರ್ದೇಶಕ, ಸಂಗೀತ ನಿರ್ದೇಶಕನಾಗಿ ಲಾರೆನ್ಸ್ ಗುರುತಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ಫ್ಯಾಮಿಲಿ ಸಮೇತ ತಿರುಪತಿ ತಿರುಮಲಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರಿಗೆ ಕಹಿ ಅನುಭವವಾಗಿದೆ.
ತಿಮ್ಮಪ್ಪನ ದರ್ಶನಭಾಗ್ಯ ಪಡೆದು ಹಿಂತಿರುಗುತ್ತಿರಬೇಕಾದರೆ ಆಲಯದ ಸಿಬ್ಬಂದಿ ಅವರನ್ನು ಹೊರಕ್ಕೆ ನೂಕಿದ್ದಾರೆ. ದರ್ಶನಭಾಗ್ಯ ಪಡೆದು ಬರುತ್ತಿದ್ದರೂ ಅವರ್ಯಾಕೆ ಈ ರೀತಿ ಅನುಚಿತವಾಗಿ ನಡೆದುಕೊಂಡರು ಎಂದು ಲಾರೆನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಕಾಮನ್ ಮ್ಯಾನ್ ಗೆ ಆದ ಅನುಭವ ತಮಗೂ ಆಯಿತು. ಒಂದು ವೇಳೆ ತಾವು ವಿಐಪಿ ಟಿಕೆಟ್ ಪಡೆದು ಬಂದಿದ್ದರೆ ಇವರು ಹೀಗೆಯೇ ನಡೆದುಕೊಳ್ಳುತ್ತಿದ್ದರೇ ಎಂದು ಲಾರೆನ್ಸ್ ಪ್ರಶ್ನಿಸಿದ್ದಾರೆ. ಭಗವಂತನ ದರ್ಶನಕ್ಕೆ ಬರುವ ಸಾಮಾನ್ಯರಿಗೆ ಒಂದು ನೀತಿ, ವಿಐಪಿಗಳಿಗೆ ಮತ್ತೊಂದು ನೀತಿ ಸರಿಯೇ ಎಂದಿದ್ದಾರೆ.
ನಿಜ ಹೇಳಬೇಕೆಂದರೆ ಅದ್ಯಾಕೋ ಏನೋ ತಿಮ್ಮಪ್ಪನ ದರ್ಶನ ಭಾಗ್ಯ ಪಡೆದ ಪ್ರತಿ ಭಕ್ತರಿಗೂ ಈ ಅರ್ಧಚಂದ್ರ ಪ್ರಯೋಗ ತಪ್ಪಿದ್ದಲ್ಲ. ದರ್ಶನಭಾಗ್ಯ ಪಡೆದವರ ಕತ್ತಿಗೆ ಕೈಹಾಕಿ ಮುಂದಕ್ಕೆ ತಳ್ಳದಿದ್ದರೆ ಅಲ್ಲಿನ ಸಿಬ್ಬಂದಿಗೆ ಸಮಾಧಾನವಾಗಲ್ಲ ಅನ್ನಿಸುತ್ತದೆ ಎಂಬುದು ತಿರುಮಲಕ್ಕೆ ಭೇಟಿ ನೀಡಿ ಬರುವ ಪ್ರತಿಯೊಬ್ಬರ ಅಳಲು.