Don't Miss!
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- News Realme: ಅಗ್ಗದ 5G ಸ್ಮಾರ್ಟ್ಫೋನ್ ಬಿಡುಗಡೆ ರೆಡಿ; ಇದರ ಬೆಲೆ ಎಷ್ಟು ಗೊತ್ತಾ?
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಯಾಂಡಲ್ ವುಡ್ ನಿರ್ದೇಶಕನ ಪುತ್ರಿಯಿಂದ ಗಾನಕೋಗಿಲೆಗೆ ಗಾನ ಗೌರವ
ದಕ್ಷಿಣ ಭಾರತದ ಪ್ರಸಿದ್ಧ ಹಿನ್ನಲೆ ಗಾಯಕಿ, ಸಂಗೀತ ಸರಸ್ವತಿ ಎಸ್.ಜಾನಕಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಭಾರತ ಕಂಡ ಶ್ರೇಷ್ಠ ಹಿನ್ನಲೆ ಗಾಯಕಿ, ಗಾನಕೋಗಿಲೆ 82ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಚಿಕ್ಕ ವಯಸ್ಸಿನಿಂದಲೆ ಹಾಡಲು ಪ್ರಾರಂಭಿಸಿದ ಜಾನಕಿ, ಸುಮಾರು 5 ದಶಕಗಳ ಕಾಲ ಸುಮಧುರ ಕಂಠದ ಮೂಲಕ ಗಾನಪ್ರಿಯರನ್ನು ರಂಜಿಸಿದ್ದಾರೆ.
Recommended Video
ಇತ್ತೀಚಿನ ವರ್ಷದ ವರೆಗೂ ಹಾಡುತ್ತ, ಎಲ್ಲರನ್ನು ರಂಜಿಸುತ್ತಿದ್ದ ಜಾನಕಿ ಸದ್ಯ ಹಾಡುವುದನ್ನು ನಿಲ್ಲಿಸಿದ್ದಾರೆ. ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ಹಾಡಿರುವ ಜಾನಕಿ, ಹಿಂದಿ, ಮರಾಠಿ ಸೇರಿದಂತೆ ಒಟ್ಟು 17 ಭಾಷೆಯಲ್ಲಿ ಹಾಡಿದ್ದಾರೆ. ಸುಮಾರು 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಸಂಗೀತ ಸರಸ್ವತಿಗೆ ಸ್ಯಾಂಡಲ್ ವುಡ್ ನಿರ್ದೇಶಕನ ಪುತ್ರಿ ವಿಶೇಷವಾಗಿ ಗೌರವ ಸಲ್ಲಿಸಿದ್ದಾರೆ. ಮುಂದೆ ಓದಿ...
SSLCಯಲ್ಲಿ ಮಗಳ ಸಾಧನೆ: ನಿರ್ದೇಶಕ ರಘುರಾಮ್ ಸಂತೋಷಕ್ಕೆ ಪಾರವೇ ಇಲ್ಲ
ರಘು ರಾಮ್ ಪುತ್ರಿಯಿಂದ ಗಾನ ಗೌರವ
ಅದ್ಭುತ ಗಾಯಕಿಯ ಜನ್ಮದಿನಕ್ಕೆ ಇಡೀ ಭಾರತ ಶುಭಾಶಯ ಕೋರುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ನ ನಿರ್ದೇಶಕ ಮತ್ತು ನಟ ರಘು ರಾಮ್ ಪುತ್ರಿ ಹಾಡಿನ ಮೂಲಕ ಶುಭಾಶಯಕೋರಿದ್ದಾರೆ. ರಾಘು ರಾಮ್ ಪುತ್ರಿ ನನಸು ಹಾಡಿರುವ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅನುರಾಗ ಬಂಧನ ಸಿನಿಮಾದ ಹಾಡು ಹಾಡಿರುವ ನನಸು
ರಘುರಾಮ್ ಪುತ್ರಿ ನನಸು 'ಅನುರಾಗ ಬಂಧನ' ಸಿನಿಮಾದ 'ನಿನ್ನ ಸವಿ ನೆನಪೇ...'ಹಾಡನ್ನು ಹಾಡಿ ಗಾನಕೋಗಿಲೆಯ ಜನ್ಮದಿನಕ್ಕೆ ಗಾನ ಗೌರವ ಸಲ್ಲಿಸಿದ್ದಾರೆ.
ಎಸ್.ಜಾನಕಿ ಅಭಿಮಾನಿ ರಘುರಾಮ್
ನಟ ಮತ್ತು ನಿರ್ದೇಶಕ ರಘುರಾಮ್ ಎಸ್ ಜಾನಕಿ ಅಭಿಮಾನಿಗಳಲ್ಲಿ ಒಬ್ಬರು. ಹಾಗಾಗಿ ಅಭಿಮಾನಿಯಾಗಿ ನೆಚ್ಚಿನ ಗಾಯಕಿಯ ಹುಟ್ಟುಹಬ್ಬವನ್ನು ವಿಶೇಷವಾಗಿ ಸಂಭ್ರಮಿಸಿದ್ದಾರೆ.
ರಘುರಾಮ್ ಹೇಳಿದ್ದೇನು?
"ಸಾಕ್ಷಾತ್ ಸಂಗೀತ ಸರಸ್ವತಿಯೇ ಇವರ ಕೋಗಿಲೆ ಕಂಠದಲ್ಲಿ ನಡೆಸಿದೆ ತಾಂಡವ. ನಮ್ಮ ಭಾರತದ ಶ್ರೇಷ್ಠ ಗಾಯಕಿ ಎಸ್. ಜಾನಕೀ ಅವರಿಗೆ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ನನ್ನ ಮಗಳು ನನಸುವಿನಿಂದ ಈ ಗಾನ ಗೌರವ" ಎಂದು ಬರೆದು ಶುಭಾಶಯತಿಳಿಸಿದ್ದಾರೆ.